ಛತ್ತೀಸ್‌ಗಢ: ತಲೆಗೆ ಒಟ್ಟು 30 ಲಕ್ಷ ರೂ ಬಹುಮಾನ ಹೊಂದಿದ್ದ 8 ನಕ್ಸಲರು ಪೊಲೀಸರಿಗೆ ಶರಣು!

ಅಮಾನವೀಯ ಮತ್ತು ಟೊಳ್ಳು ಮಾವೋವಾದಿ ಸಿದ್ಧಾಂತವನ್ನು ಉಲ್ಲೇಖಿಸಿ ಈ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.
Casual Images
ನಕ್ಸಲ್ ಸಾಂದರ್ಭಿಕ ಚಿತ್ರ
Updated on

ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಬುಧವಾರ ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಮಾವೋವಾದಿಗಳು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮಾನವೀಯ ಮತ್ತು ಟೊಳ್ಳು ಮಾವೋವಾದಿ ಸಿದ್ಧಾಂತವನ್ನು ಉಲ್ಲೇಖಿಸಿ ಈ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.

ಪೊಲೀಸರ ಪುನರ್ವಸತಿ ಅಭಿಯಾನ ಮತ್ತು ರಾಜ್ಯ ಸರ್ಕಾರದ ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಅವರು ಪ್ರಭಾವಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Casual Images
ಛತ್ತೀಸ್‌ಗಢ: ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ!

ನಿಷೇಧಿತ ಮಾವೋವಾದಿ ಸಂಘಟನೆಯ ಸದಸ್ಯರನ್ನು ಸುಖ್‌ಲಾಲ್ ಜುರ್ರಿ, ಹುರ್ರಾ, ಅಲಿಯಾಸ್ ಹಿಮಾಂಶು ಮಿಡಿಯಮ್, ರಾಜು ಪೊಡಿಯಮ್, ಅಲಿಯಾಸ್ ಸುನಿಲ್ ಪೊಡಿಯಮ್, ಮಣಿರಾಮ್ ಕೊರ್ರಂ, ಸುಕ್ಕು ಫರ್ಸಾ, ಅಲಿಯಾಸ್ ನಾಗೇಶ್, ರಾಮು ರಾಮ್ ಪೋಯಂ, ಕಮಲಾ ಗೋಟಾ ಮತ್ತು ದೀಪಾ ಪುಣೆಮ್ ಇಂದು ಶರಣಾದ ನಕ್ಸಲರಾಗಿದ್ದಾರೆ.

ಶರಣಾದ ಎಂಟು ನಕ್ಸಲರ ಪೈಕಿ ಇಬ್ಬರ ತಲೆಗೆ ತಲಾ 8 ಲಕ್ಷ ರೂ. ಬಹುಮಾನವಿತ್ತು ಎಂದು ಅವರು ಹೇಳಿದ್ದಾರೆ.

ಇಬ್ಬರು ಮಹಿಳೆಯರಲ್ಲಿ, ಕಮಲಾ ಎಸಿಎಂ ಆಗಿದ್ದರು ಮತ್ತು ದೀಪಾ ಮಾವೋವಾದಿ ಸಂಘಟನೆಯ ಸದಸ್ಯರಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ಪೊಡಿಯಮ್ ಮತ್ತು ಕಮಲಾ ತಲೆಗೆ ತಲಾ 5 ಲಕ್ಷ ರೂ. ಬಹುಮಾನ ಹಾಗೂ ಇತರ ನಾಲ್ವರು ಮಾವೋವಾದಿಗಳ ತಲೆಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com