ವಾರಣಾಸಿ: ಪಾರ್ಕಿಂಗ್ ವಿಚಾರಕ್ಕೆ ಜಗಳ; ಶಿಕ್ಷಕನ ಕೊಲೆಯಲ್ಲಿ ಅಂತ್ಯ!

ಮೂವರು ವ್ಯಕ್ತಿಗಳು ಶಿಕ್ಷಕನನ್ನು ಹೊಡೆದು ಕೊಂದಿದ್ದು, ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Image used for representational purpose
ಸಾಂದರ್ಭಿಕ ಚಿತ್ರ
Updated on

ವಾರಣಾಸಿ: ಪಾರ್ಕಿಂಗ್ ಸ್ಥಳದ ವಿಚಾರಕ್ಕೆ ಆರಂಭವಾದ ಜಗಳ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಶಿಕ್ಷಕನ ಕೊಲೆಯಲ್ಲಿ ಅಂತ್ಯವಾದ ಅಮಾನವೀಯ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಮೂವರು ವ್ಯಕ್ತಿಗಳು ಶಿಕ್ಷಕನನ್ನು ಹೊಡೆದು ಕೊಂದಿದ್ದು, ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮೃತ ಪ್ರವೀಣ್ ಝಾ ಗುರುವಾರ ರಾತ್ರಿ ಪಾರ್ಕಿಂಗ್ ವಿಷಯವಾಗಿ ಆದರ್ಶ್ ಸಿಂಗ್ ಎಂಬುವವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ(ಅಪರಾಧ) ಸರವಣನ್ ಟಿ ಅವರು ಹೇಳಿದ್ದಾರೆ.

Image used for representational purpose
ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಜಗಳ; ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ, ಮೂವರಿಗೆ ಚೂರಿ ಇರಿತ!

"ಜಗಳ ವಿಕೋಪಕ್ಕೆ ತಿರುಗಿ, ಆದರ್ಶ್ ಮತ್ತು ಆತನ ಇಬ್ಬರು ಸಹಚರರು ಪ್ರವೀಣ್ ಮೇಲೆ ಇಟ್ಟಿಗೆ ಮತ್ತು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ ಪ್ರವೀಣ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮೃತ ಪ್ರವೀಣ್ ವಾರಣಾಸಿಯ ಪ್ರಮುಖ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಕುಟುಂಬದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com