ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

ಸಾಯಿಬಾಬಾಗೆ "ಹಿಂದೂ ಧರ್ಮಗ್ರಂಥಗಳು ಅಥವಾ ಸಂಪ್ರದಾಯದಲ್ಲಿ ಯಾವುದೇ ಸ್ಥಾನವಿಲ್ಲ" ಎಂದು ಉಲ್ಲೇಖಿಸಿ ದೇವಾಲಯ ಸಮಿತಿ ಮತ್ತು ಭಕ್ತರು ಕಳೆದ ವಾರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.
sai baba (file pic)
ಸಾಯಿ ಬಾಬ (ಸಂಗ್ರಹ ಚಿತ್ರ)online desk
Updated on

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಿವ ದೇವಾಲಯದಲ್ಲಿರುವ ಸಾಯಿಬಾಬಾ ವಿಗ್ರಹವನ್ನು ಮಂಗಳವಾರ ಬೆಳಗಿನ ಜಾವ ತೆಗೆದು ಗಂಗಾ ನದಿಯಲ್ಲಿ ವಿಸರ್ಜಿಸಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಗಣೇಶ ಚತುರ್ಥಿಯಂದು ದೇವಾಲಯದಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ಅವರು ಹೇಳಿದರು. ಸಾಯಿಬಾಬಾಗೆ "ಹಿಂದೂ ಧರ್ಮಗ್ರಂಥಗಳು ಅಥವಾ ಸಂಪ್ರದಾಯದಲ್ಲಿ ಯಾವುದೇ ಸ್ಥಾನವಿಲ್ಲ" ಎಂದು ಉಲ್ಲೇಖಿಸಿ ದೇವಾಲಯ ಸಮಿತಿ ಮತ್ತು ಭಕ್ತರು ಕಳೆದ ವಾರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.

sai baba (file pic)
ಬಿಟ್ಟುಬಿಡೋ ಮಾತೇ ಇಲ್ಲ: ಸಂಭಾಲ್ ಇತಿಹಾಸ ಇಸ್ಲಾಂಗಿಂತ ಹಿಂದಿನದು, ಅಲ್ಲಿ ವಿಷ್ಣು ದೇವಾಲಯ ಕೆಡವಲಾಗಿತ್ತು- ಯೋಗಿ ಆದಿತ್ಯನಾಥ್

ದೇವಾಲಯದ ಅರ್ಚಕ ಆಚಾರ್ಯ ಪಂಡಿತ್ ಅವನೀಶ್ ಶಾಸ್ತ್ರಿ ಮಾತನಾಡಿ, "ಸಾಯಿಬಾಬಾ ಅವರ ವಿಗ್ರಹವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ನಮ್ಮ ಧರ್ಮಗ್ರಂಥಗಳು, ವೇದಗಳು ಅಥವಾ ಗ್ರಂಥಗಳಲ್ಲಿ ಅವರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

"ಯಾವುದೇ ಫಕೀರ ಅಥವಾ ವ್ಯಕ್ತಿಯ ಪೂಜೆಯನ್ನು ದೇವಾಲಯಗಳಿಗೆ ಅಲ್ಲ, ಖಾಸಗಿ ಸ್ಥಳಗಳಿಗೆ ಸೀಮಿತಗೊಳಿಸಬೇಕು. ಆದಿ ಶಂಕರಾಚಾರ್ಯ ಅಥವಾ ತುಳಸಿದಾಸರಂತಹ ಮಹಾನ್ ಸಂತರು ಮತ್ತು ತತ್ವಜ್ಞಾನಿಗಳ ವಿಗ್ರಹಗಳನ್ನೂ ಸಹ ದೇವಾಲಯಗಳಲ್ಲಿ ಸ್ಥಾಪಿಸಲಾಗುವುದಿಲ್ಲ, ಹಾಗಾದರೆ ಸಾಯಿಬಾಬಾ ಏಕೆ ಬೇಕು? ಅವರನ್ನು 2011 ರಲ್ಲಿ ಇಲ್ಲಿ ಪ್ರತಿಷ್ಠಾಪಿಸಲಾಯಿತು ಮತ್ತು 14 ವರ್ಷಗಳ ನಂತರ, ಸಮಿತಿಯ ಅನುಮೋದನೆಯೊಂದಿಗೆ ನಾವು ವಿಸರ್ಜಿಸಲು ನಿರ್ಧರಿಸಿದ್ದೇವೆ." ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com