ಬಾಬ್ರಿ ಮಾದರಿಯ ಬಂಗಾಳದ ಮಸೀದಿಗೆ ಎರಡೇ ದಿನದಲ್ಲಿ 1.3 ಕೋಟಿ ರೂ. ದೇಣಿಗೆ!

2012 ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ ಮಾಜಿ ಕಾಂಗ್ರೆಸ್ ಶಾಸಕ ಕಬೀರ್, ನಂತರ ಬಿಜೆಪಿಗೆ ಸೇರ್ಪಡೆಗೊಂಡು ಅಲ್ಪಾವಧಿ ಪಕ್ಷದಲ್ಲಿ ಸಕ್ರಿಯರಾಗಿದ್ದರು.
Babri-style mosque in Bengal
ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗಲಿರುವ ಬಾಬ್ರಿ ಮಾದರಿಯ ಮಸೀದಿ online desk
Updated on

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ನಿರ್ಮಿಸಲಿರುವ ಪ್ರಸ್ತಾವಿತ ಬಾಬರಿ ಮಸೀದಿ ಮಾದರಿಯ ಮಸೀದಿಗಾಗಿ ಇರಿಸಲಾಗಿರುವ ದೇಣಿಗೆ ಪೆಟ್ಟಿಗೆಗಳು ಬಹುತೇಕ ತುಂಬಿವೆ.

ಭೌತಿಕವಾಗಿ ಮತ್ತು ಆನ್‌ಲೈನ್‌ ಮೂಲಕ ದೇಣಿಗೆಗಳು ಹರಿದುಬರುತ್ತಲೇ ಇದ್ದು ನಗದು ಎಣಿಕೆ ಯಂತ್ರಗಳು ರಾತ್ರಿಯಿಡೀ ಓಡಾಡುತ್ತಿವೆ.

ನಾಲ್ಕು ದೇಣಿಗೆ ಪೆಟ್ಟಿಗೆಗಳು ಮತ್ತು ಒಂದು ಚೀಲದಿಂದ ಕನಿಷ್ಠ 37.33 ಲಕ್ಷ ರೂ. ನಗದು ಎಣಿಕೆಯಾಗಿದ್ದು, ಕ್ಯೂಆರ್ ಕೋಡ್‌ಗಳ ಮೂಲಕ ಆನ್‌ಲೈನ್ ಕೊಡುಗೆಗಳು 93 ಲಕ್ಷ ರೂ.ಗಳನ್ನು ತಲುಪಿವೆ. ದೇಣಿಗೆಗಳು ಒಟ್ಟು 1.30 ಕೋಟಿ ರೂ.ಗಳನ್ನು ದಾಟಿದೆ ಎಂದು ಕಬೀರ್ ಅವರ ಆಪ್ತರು ಸೋಮವಾರ ತಿಳಿಸಿದ್ದಾರೆ.

ಕಬೀರ್ ಶನಿವಾರ ಭದ್ರತೆಯ ನಡುವೆ ಮುರ್ಷಿದಾಬಾದ್‌ನ ರೆಜಿನಗರದಲ್ಲಿ ಮಸೀದಿಯ ಅಡಿಪಾಯ ಹಾಕಿದರು. ಅವರು ಉದ್ದೇಶಪೂರ್ವಕವಾಗಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನವಾದ ಡಿಸೆಂಬರ್ 6 ಅನ್ನು ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕ್ರಮವು ಈಗಾಗಲೇ ಧ್ರುವೀಕೃತ ಚುನಾವಣೆಗೆ ಸಜ್ಜಾಗಿರುವ ಬಂಗಾಳಕ್ಕೆ ಹೊಸ ರಾಜಕೀಯ ನರೇಟೀವ್ ನ್ನು ಸೃಷ್ಟಿಸಿದೆ.

Babri-style mosque in Bengal
ಪಶ್ಚಿಮ ಬಂಗಾಳ: 'ಬಾಬರಿ ಮಸೀದಿ' ನಿರ್ಮಾಣಕ್ಕೆ ಇಂದು ಶಿಲಾನ್ಯಾಸ; ಸೌದಿಯಿಂದ ಬಂದ ಮೌಲ್ವಿಗಳು ಭಾಗಿ

2012 ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ ಮಾಜಿ ಕಾಂಗ್ರೆಸ್ ಶಾಸಕ ಕಬೀರ್, ನಂತರ ಬಿಜೆಪಿಗೆ ಅಲ್ಪಾವಧಿಗೆ ಸೇರ್ಪಡೆಗೊಂಡು 2020 ರಲ್ಲಿ ಆಡಳಿತ ಪಕ್ಷಕ್ಕೆ ಮರಳಿದರು. ಪಕ್ಷದ ನಾಯಕತ್ವದೊಂದಿಗೆ ಪದೇ ಪದೇ ಘರ್ಷಣೆ ನಡೆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ.

ಈ ಮಸೀದಿಗೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮ ಹತ್ತಾರು ಸಾವಿರ ಜನರನ್ನು ಆಕರ್ಷಿಸಿತು ಮತ್ತು ಸುಮಾರು 40,000 ಜನರಿಗೆ ಶಾಹಿ ಬಿರಿಯಾನಿ ಬಡಿಸುವುದು ಸೇರಿದಂತೆ ಬೃಹತ್ ವ್ಯವಸ್ಥೆಗಳಿಂದ ತುಂಬಿತ್ತು.

ಆ ದಿನ, 11 ದೊಡ್ಡ ಸ್ಟೇನ್‌ಲೆಸ್ ಸ್ಟೀಲ್ ದೇಣಿಗೆ ಪೆಟ್ಟಿಗೆಗಳನ್ನು ಸ್ಥಳದಲ್ಲಿ ಇರಿಸಲಾಗಿತ್ತು, ಕಬೀರ್ ಮಸೀದಿ ನಿರ್ಮಾಣಕ್ಕಾಗಿ ಸಾರ್ವಜನಿಕ ಕೊಡುಗೆಗಳಿಗಾಗಿ ಮನವಿ ಮಾಡಿದರು. ಅಂದಿನಿಂದ, ಬೆಂಬಲಿಗರು ಕಟ್ಟಡಕ್ಕಾಗಿ ನಗದು ಮತ್ತು ಇಟ್ಟಿಗೆಗಳೊಂದಿಗೆ ಬರುತ್ತಲೇ ಇದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಗದು ಎಣಿಕೆ ಭಾನುವಾರ ಸಂಜೆ 7 ಗಂಟೆಗೆ ಪ್ರಾರಂಭವಾಯಿತು ಮತ್ತು ಮಧ್ಯರಾತ್ರಿಯವರೆಗೆ ಮುಂದುವರೆಯಿತು, ಇದನ್ನು ವಿಶೇಷ ಯಂತ್ರಗಳನ್ನು ಬಳಸಿಕೊಂಡು 30 ಜನರ ತಂಡ ನಡೆಸಿತು.

ಉಳಿದ ಏಳು ಪೆಟ್ಟಿಗೆಗಳನ್ನು ಸೋಮವಾರ ಸಂಜೆ 5 ಗಂಟೆಯಿಂದ ತೆರೆಯಲು ನಿರ್ಧರಿಸಲಾಗಿದೆ, ಅದೇ ತಂಡವು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಎಣಿಕೆಯನ್ನು ನೇರಪ್ರಸಾರ ಮಾಡಲಾಯಿತು ಎಂದು ಕಬೀರ್ ಹೇಳಿದರು. ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿದ್ದಾಗಿದೆ ಎಂದು ಕಬೀರ್ ಹೇಳಿದ್ದಾರೆ. ಭಾರತದ ಹೊರಗಿನಿಂದಲೂ ದೇಣಿಗೆಗಳು ಬರುತ್ತಿವೆ ಎಂದು ಇದೇ ವೇಳೆ ಆರೋಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com