ದಲಿತರ ಮನೆಯಲ್ಲಿ 'ತಿಥಿ' ಊಟ ಮಾಡಿದ್ದ ಮೇಲ್ಜಾತಿ ಯುವಕ: ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಪಂಚಾಯತ್!

ರೈಸೇನ್ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ದಲಿತರ ಮನೆಯಲ್ಲಿ 'ತಿಥಿ' ಊಟ ಮಾಡಿದ್ದ ಮೇಲ್ಜಾತಿ ಯುವಕ: ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಪಂಚಾಯತ್!
Updated on

ರೈಸೇನ್ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಉದಯಪುರದ ಪಿಪಾರಿಯಾ ಪುರಿಯಾ ಗ್ರಾಮದ ಭರತ್ ಸಿಂಗ್ ಧಕಾಡ್ ಎಂಬಾತ ದಲಿತ ಕುಟುಂಬವೊಂದು ನಡೆಸಿದ ಶ್ರದ್ಧಾ ಸಮಾರಂಭದಲ್ಲಿ ಊಟ ಮಾಡಿದ್ದಕ್ಕಾಗಿ ತಮ್ಮ ಕುಟುಂಬವನ್ನು ಗ್ರಾಮ ಪಂಚಾಯತ್ ಬಹಿಷ್ಕರಿಸಿದೆ ಎಂದು ಆರೋಪಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಉದಯಪುರದ ಪಿಪಾರಿಯಾ ಪುರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತ ವ್ಯಕ್ತಿಯ ಮನೆಯಲ್ಲಿ ಊಟ ಮಾಡಿದ್ದಕ್ಕಾಗಿ ಗ್ರಾಮ ಪಂಚಾಯತ್ ಮೇಲ್ಜಾತಿಯ ಸಮುದಾಯದ ಮೂವರು ಸದಸ್ಯರಿಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿದೆ. ಹಬ್ಬಗಳಲ್ಲಿ ಭಾಗಿಯಾಗದಂತೆ ಕೆಲವು ಷರತ್ತುಗಳನ್ನು ವಿಧಿಸಿದೆ.

ಮೂವರಲ್ಲಿ ಇಬ್ಬರು ಪಂಚಾಯತ್‌ನ ಷರತ್ತುಗಳನ್ನು ಒಪ್ಪಿಕೊಂಡು 'ಪ್ರಾಯಶ್ಚಿತ್ತ' ಮಾಡಿಕೊಂಡರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆದರೆ ಅವರಲ್ಲಿ ಒಬ್ಬರಾದ ಭರತ್ ಸಿಂಗ್ ಧಾಕಡ್ ಪೊಲೀಸರನ್ನು ಸಂಪರ್ಕಿಸಿ ಗ್ರಾಮ ಪಂಚಾಯತ್ ವಿರುದ್ಧ ದೂರು ದಾಖಲಿಸಿದರು. ತಮ್ಮನ್ನು ಮತ್ತು ತಮ್ಮ ಕುಟುಂಬ ಸದಸ್ಯರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿದ್ದಾರೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಆದಾಗ್ಯೂ, ಗ್ರಾಮದ ಸರಪಂಚರು ಈ ಆರೋಪಗಳನ್ನು ನಿರಾಕರಿಸಿದರು.

ಉದಯಪುರ ತಹಶೀಲ್ದಾರ್ ದಿನೇಶ್ ಬರ್ಗಲೆ, ಧಾಕಡ್ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಪಂಚಾಯತ್ ಸಾಮಾಜಿಕ ಬಹಿಷ್ಕಾರ ಆದೇಶವನ್ನು ನೀಡಿದೆ ಎಂದು ಆರೋಪಿಸಿದ್ದಾರೆ. ಧಾಕಡ್ ಸಂಬಂಧಪಟ್ಟ ಗ್ರಾಮ ಪಂಚಾಯತ್‌ನ ಸರಪಂಚ, ಉಪ ಸರಪಂಚ ಮತ್ತು ಪಂಚರ ವಿರುದ್ಧ ಈ ಆರೋಪಗಳನ್ನು ಹೊರಿಸಿದ್ದಾರೆ ಎಂದು ಅವರು ಹೇಳಿದರು. ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಆರೋಪಗಳು ನಿಜವೆಂದು ಕಂಡುಬಂದರೆ, ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಾರ್ಗಲೆ ಹೇಳಿದರು.

ದಲಿತರ ಮನೆಯಲ್ಲಿ 'ತಿಥಿ' ಊಟ ಮಾಡಿದ್ದ ಮೇಲ್ಜಾತಿ ಯುವಕ: ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಪಂಚಾಯತ್!
ಗೋವಿಂದಾ... ಗೋವಿಂದ..: TTDಗೆ ಕೋಟ್ಯಾಂತರ ರೂ ವಂಚನೆ; "ರೇಷ್ಮೆ" ಹಗರಣದಿಂದ ಭಾರಿ ನಷ್ಟ, ಅವಮಾನ!

ಧಾಕಡ್ ಮತ್ತು ಅವರ ಸಹಚರರು, ಗ್ರಾಮ ಪಂಚಾಯತ್ ಸಹಾಯಕ ಕಾರ್ಯದರ್ಶಿ ಮನೋಜ್ ಪಟೇಲ್ ಮತ್ತು ಶಿಕ್ಷಕ ಸತ್ಯೇಂದ್ರ ಸಿಂಗ್ ರಘುವಂಶಿ ಅವರು 'ತಿಥಿ' ಕಾರ್ಯಕ್ರಮದಲ್ಲಿ ಭಾಗವಾಗಿ ಗ್ರಾಮದಲ್ಲಿ ದಲಿತ ಕುಟುಂಬದ ಮನೆಯಲ್ಲಿ ಊಟ ಮಾಡಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com