ಮನೆ ಬಾಡಿಗೆ ಕೇಳಿದ್ದೇ ತಪ್ಪಾಯ್ತು: ಮಾಲಕಿಯನ್ನು ಕೊಂದು ಸೂಟ್ ಕೇಸ್ ಗೆ ತುಂಬಿದ ಖತರ್ನಾಕ್ ದಂಪತಿ!

ಉಮೇಶ್ ಶರ್ಮಾ ಮತ್ತು ದೀಪ್ಸಿಕಾ ಶರ್ಮಾ ಸೊಸೈಟಿಯಲ್ಲಿ ಎರಡು ಫ್ಲಾಟ್‌ಗಳನ್ನು ಹೊಂದಿದ್ದರು. ಒಂದರಲ್ಲಿ ಅವರು ವಾಸಿಸುತ್ತಿದ್ದರು. ಇನ್ನೊಂದನ್ನು ಗುಪ್ತಾ ದಂಪತಿಗಳಿಗೆ ಬಾಡಿಗೆಗೆ ನೀಡಲಾಗಿತ್ತು.
Deepshika Sharma and couple
ಕೊಲೆಯಾದ ದೀಪ್ಸಿಕಾ ಶರ್ಮ ಮತ್ತು ಆರೋಪಿ ದಂಪತಿ
Updated on

ಗಾಜಿಯಾಬಾದ್: ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲಕಿಯನ್ನೇ ಬಾಡಿಗೆದಾರರು ಕೊಂದಿರುವ ಘಟನೆ ಗಾಜಿಯಾಬಾದ್​ನ ರಾಜನಗರದಲ್ಲಿ ನಡೆದಿದೆ.

ಔರಾ ಚಿಮೆರಾ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯ ನಂತರ, ಆರೋಪಿ ದಂಪತಿ ಮಹಿಳೆಯ ದೇಹವನ್ನು ಸೂಟ್‌ಕೇಸ್‌ನಲ್ಲಿರಿಸಿದ್ದರು ಎಂದು ಆರೋಪಿಸಲಾಗಿದೆ. ಮನೆ ಮಾಲೀಕಳನ್ನು ಕೊಲೆ ಮಾಡಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಲಾಗಿದೆ. ಮನೆ ಮಾಲಕಿ ದೀಪ್ಸಿಕಾ ಶರ್ಮಾ (48) ಕೊಲೆ ಯಾದವರು. ಅಜಯ್ ಗುಪ್ತಾ ಮತ್ತು ಅಕೃತಿ ಗುಪ್ತಾ ದಂಪತಿಯನ್ನು ವಶಕ್ಕೆ ಪಡೆಯಲಾಗಿದೆ.

ಉಮೇಶ್ ಶರ್ಮಾ ಮತ್ತು ದೀಪ್ಸಿಕಾ ಶರ್ಮಾ ಸೊಸೈಟಿಯಲ್ಲಿ ಎರಡು ಫ್ಲಾಟ್‌ಗಳನ್ನು ಹೊಂದಿದ್ದರು. ಒಂದರಲ್ಲಿ ಅವರು ವಾಸಿಸುತ್ತಿದ್ದರು. ಇನ್ನೊಂದನ್ನು ಗುಪ್ತಾ ದಂಪತಿಗಳಿಗೆ ಬಾಡಿಗೆಗೆ ನೀಡಲಾಗಿತ್ತು. ಅಜಯ್ ಗುಪ್ತಾ ಸಾರಿಗೆ ವ್ಯವಹಾರದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಗುಪ್ತಾ ದಂಪತಿ ಸುಮಾರು ನಾಲ್ಕು ತಿಂಗಳಿನಿಂದ ಬಾಡಿಗೆ ಪಾವತಿಸಿರಲಿಲ್ಲ, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ದೀಪ್ಸಿಕಾ ಅವರನ್ನು ಎದುರಿಸಿ ಹಣ ಕೇಳಲು ನಿರ್ಧರಿಸಿದರು. ಬುಧವಾರ ಆಕೆ ಗುಪ್ತಾ ದಂಪತಿಗಳ ಮನೆಗೆ ಹೋದರು. ಆ ಸಮಯದಲ್ಲಿ, ಅವರ ಪತಿ ಉಮೇಶ್ ಶರ್ಮಾ ಮನೆಯಲ್ಲಿ ಇರಲಿಲ್ಲ. ಅವರು ಗಂಟೆಗಟ್ಟಲೆ ಹಿಂತಿರುಗದಿದ್ದಾಗ, ಅವರ ಮನೆ ಕೆಲಸದಾಕೆ ಮೀನಾ ಅವರನ್ನು ಹುಡುಕಲು ಪ್ರಾರಂಭಿಸಿದರು.

Deepshika Sharma and couple
ಅಂತರ್ಧಮೀಯ ವಿವಾಹಕ್ಕೆ ಪೋಷಕರ ವಿರೋಧ: ಹೆತ್ತ ತಂದೆ- ತಾಯಿಯ ಹತ್ಯೆ; ಗರಗಸದಿಂದ ದೇಹಗಳನ್ನು ಕತ್ತರಿಸಿ, ನದಿಗೆ ಎಸೆದ ಮಗ!

ಮೀನಾ ಗುಪ್ತಾ ದಂಪತಿ ಮನೆಗೆ ತೆರಳಿ ದೀಪ್ಸಿಕಾ ಬಗ್ಗೆ ವಿಚಾರಿಸಿದ್ದಾರೆ. ಆದರೆ ಅವರ ಉತ್ತರಗಳು ಅನುಮಾನವನ್ನು ಹುಟ್ಟುಹಾಕಿದವು. ಮೀನಾ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೀಪ್ಸಿಕಾ ಶರ್ಮಾ, ಗುಪ್ತಾ ದಂಪತಿ ಮನೆ ಒಳ ಹೋಗಿದ್ದಾರೆ, ಆದರೆ ಫ್ಲಾಟ್‌ನಿಂದ ಹೊರಬರಲಿಲ್ಲ ಎಂದು ತಿಳಿದ ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ.

ಈ ಸಮಯದಲ್ಲಿ, ಗುಪ್ತಾ ದಂಪತಿಗಳು ದೊಡ್ಡ ಸೂಟ್‌ಕೇಸ್‌ನೊಂದಿಗೆ ಕಟ್ಟಡದಿಂದ ಹೊರಟು ಆಟೋರಿಕ್ಷಾವನ್ನು ಸಹ ಕರೆದಿದ್ದರು, ಆದರೆ ಅವರು ಹೊರಡುವ ಮೊದಲು, ಕೆಲಸದಾಕೆ ಮೀನಾ ಅವರನ್ನು ತಡೆದರು. ಅವರನ್ನು ತಮ್ಮ ಫ್ಲಾಟ್‌ಗೆ ಹಿಂತಿರುಗಿಸಿದರು. ದೀದಿ ಪತ್ತೆಯಾಗುವವರೆಗೆ ಅವರು ಎಲ್ಲಿಯೂ ಹೋಗದಂತೆ ನಾನು ಅವರನ್ನು ತಡೆದೆ ಎಂದು ಮೀನಾ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಬಂದ ನಂತರ, ಗುಪ್ತಾ ದಂಪತಿಗಳ ಮನೆಯನ್ನು ಶೋಧಿಸಲಾಯಿತು, ದೀಪ್ಸಿಕಾ ಶರ್ಮಾ ಅವರ ದೇಹವು ಸೂಟ್‌ಕೇಸ್‌ನಲ್ಲಿತ್ತು. ಆಕೆ ಬಾಡಿಗೆ ಕೇಳಲು ಬಂದಾಗ, ಜಗಳ ನಡೆದು, ಬಾಡಿಗೆದಾರ ದಂಪತಿಗಳು ಅವರನ್ನು ಕೊಂದು, ಶವವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ, ಕೆಲಸದಾಕೆ ತಮ್ಮ ಯೋಜನೆಯನ್ನು ವಿಫಲಗೊಳಿಸದಿದ್ದರೆ ಅದನ್ನು ವಿಲೇವಾರಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com