ಕೊಯಮತ್ತೂರು: ತಮಿಳು ಮಾತನಾಡದ್ದಕ್ಕೆ ವಲಸೆ ಕಾರ್ಮಿಕನಿಗೆ ಚಾಕು ಇರಿತ; ಆರೋಪಿಗಳಿಗೆ ಹುಡುಕಾಟ

ಗೋವಿಂದ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಕರುಮತಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Migrant worker stabbed for not speaking Tamil at Coimbatore bakery; police hunt suspects
ತಮಿಳು ಮಾತನಾಡದಿದ್ದಕ್ಕೆ ವಲಸೆ ಕಾರ್ಮಿಕನಿಗೆ ಚಾಕು ಇರಿತ
Updated on

ಕೊಯಮತ್ತೂರು: ಕೊಯಮತ್ತೂರು ಬಳಿಯ ಕರುಮತಂಪಟ್ಟಿಯಲ್ಲಿರುವ ಬೇಕರಿಯೊಂದರಲ್ಲಿ ನಡೆದ ಸಣ್ಣ ವಾಗ್ವಾದದ ನಂತರ ವಲಸೆ ಕಾರ್ಮಿಕನಿಗೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ಈ ಘಟನೆ ಡಿಸೆಂಬರ್ 15 ರಂದು ನಡೆದಿದ್ದರೂ, ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಗಮನ ಸೆಳೆದಿದೆ.

ಪೊಲೀಸರ ಪ್ರಕಾರ, ದೂರುದಾರರಾದ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಗೋವಿಂದ್ ಕೊಂಡ್(27) ಖಾಸಗಿ ಸಂಸ್ಥೆಯಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ಡಿಸೆಂಬರ್ 9, 2025 ರಿಂದ ಕರುಮತಂಪಟ್ಟಿಯ ಖಾಸಗಿ ಹಾಲ್‌ನಲ್ಲಿ ವಾಸಿಸುತ್ತಿದ್ದಾರೆ.

ಡಿಸೆಂಬರ್ 15 ರಂದು ಸಂಜೆ 5 ಗಂಟೆ ಸುಮಾರಿಗೆ ಗೋವಿಂದ್ ಮತ್ತು ಅವರ ಸಹೋದ್ಯೋಗಿ ರಾಕೇಶ್(19) ಚಹಾ ಕುಡಿಯಲು ಬೇಕರಿಗೆ ಹೋಗಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಗೋವಿಂದ್ ಅವರನ್ನು ತಮಿಳಿನಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಹಿಂದಿಯಲ್ಲಿ ತಮಿಳು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

Migrant worker stabbed for not speaking Tamil at Coimbatore bakery; police hunt suspects
ಅಪರಾಧ ಕೃತ್ಯಗಳಲ್ಲಿ ವಲಸೆ ಕಾರ್ಮಿಕರು ಭಾಗಿ: ಕಾರ್ಮಿಕ ಇಲಾಖೆಯೊಂದಿಗೆ ಸಭೆ, ಶೂಟೌಟ್ ಬಗ್ಗೆ ತನಿಖೆ

ಈ ಮಾತಿನ ಚಕಮಕಿ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಈ ಸಂದರ್ಭದಲ್ಲಿ ರಾಕೇಶ್‌ಗೆ ಕಪಾಳಮೋಕ್ಷ ಮಾಡಲಾಗಿದೆ. ನಂತರ ಗೋವಿಂದ್ ಮಧ್ಯಪ್ರವೇಶಿಸಿದಾಗ, ಹಲ್ಲೆಕೋರರಲ್ಲಿ ಒಬ್ಬನು ತನ್ನ ಬಳಿ ಇದ್ದ ಚಾಕುವಿನಿಂದ ಎದೆ, ಸೊಂಟದ ಎಡಭಾಗ ಮತ್ತು ಕೈಗಳಿಗೆ ಇರಿದಿದ್ದಾನೆ. ಬೇಕರಿ ಸಿಬ್ಬಂದಿ ಮಧ್ಯಪ್ರವೇಶಿಸಿ, ಹಲ್ಲೆಕೋರರು ಪರಾರಿಯಾಗುವಂತೆ ಒತ್ತಾಯಿಸಿದ್ದಾರೆ.

ಗೋವಿಂದ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಕರುಮತಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇತ್ತೀಚಿಗೆ ವಲಸೆ ಯುವಕನೊಬ್ಬನ ಮೇಲೆ ನಡೆದ ಮತ್ತೊಂದು ಹಿಂಸಾತ್ಮಕ ದಾಳಿಯ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಚೆನ್ನೈನಲ್ಲಿ, ತಿರುತ್ತಣಿ ಪಟ್ಟಣ ಪೊಲೀಸರು ಭಾನುವಾರ ಓಲ್ಡ್ ರೈಲ್ವೆ ಕ್ವಾರ್ಟರ್ಸ್ ಬಳಿ ಒಡಿಶಾದ 20 ವರ್ಷದ ಯುವಕನ ಮೇಲೆ ಕುಡುಗೋಲುನಿಂದ ಹಲ್ಲೆ ಮಾಡಿದ್ದಕ್ಕಾಗಿ 17 ವರ್ಷದ ನಾಲ್ವರು ಹುಡುಗರನ್ನು ಬಂಧಿಸಿದ್ದಾರೆ.

ಉಪನಗರ ರೈಲಿನಲ್ಲಿ ಕುಡಿದು ಜಗಳವಾಡಿದ ನಂತರ ಈ ಹಲ್ಲೆ ನಡೆಸಲಾಗಿದೆ ಮತ್ತು ಇದನ್ನು ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಬಾಲಾಪರಾಧಿಗಳಲ್ಲಿ ಒಬ್ಬ ವಿಡಿಯೋ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಬಾಲಾಪರಾಧಿಗಳನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದ್ದು, ಪುರಸೈವಾಕಂನಲ್ಲಿರುವ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com