ನಿಮ್ಮ ರಾಜಕೀಯಕ್ಕಾಗಿ ಸುಳ್ಳು ಹೇಳಬೇಡಿ, ಅದರಿಂದ ರಾಷ್ಟ್ರಕ್ಕೆ ಹಾನಿ: Rahul Gandhi ವಿರುದ್ಧ Jaishankar ಕೆಂಡ!

ವಿಪಕ್ಷ ನಾಯಕ ಹೇಳಿಕೆಯನ್ನು ಸರ್ಕಾರ ಸದನದಲ್ಲಿ ಖಂಡಿಸಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು 'ಆಧಾರರಹಿತ ಹೇಳಿಕೆ'ಗಾಗಿ ವಿರೋಧ ಪಕ್ಷದ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
Rahul Gandhi- S Jaishankar
ರಾಹುಲ್ ಗಾಂಧಿ- ಎಸ್ ಜೈಶಂಕರ್ online desk
Updated on

ನವದೆಹಲಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಗ್ರಹಣ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಆಹ್ವಾನವನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ವಿದೇಶಾಂಗ ಸಚಿವರನ್ನು ಅಮೇರಿಕಾಗೆ ಕಳುಹಿಸಲಾಗಿತ್ತು ಎಂಬ ರಾಹುಲ್ ಗಾಂಧಿ ಹೇಳಿಕೆ ಈಗ ಚರ್ಚೆಯಾಗುತ್ತಿದೆ.

ವಿಪಕ್ಷ ನಾಯಕ ಹೇಳಿಕೆಯನ್ನು ಸರ್ಕಾರ ಸದನದಲ್ಲಿ ಖಂಡಿಸಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು 'ಆಧಾರರಹಿತ ಹೇಳಿಕೆ'ಗಾಗಿ ವಿರೋಧ ಪಕ್ಷದ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಅಮೇರಿಕಾಗೆ ತಮ್ಮ ಭೇಟಿಯ ಕುರಿತು ಸುಳ್ಳು ಮಾಹಿತಿಯನ್ನು ನೀಡಿರುವುದಕ್ಕಾಗಿ ರಾಹುಲ್ ಗಾಂಧಿಗೆ ಸ್ವತಃ ವಿದೇಶಾಂಗ ಸಚಿವ ಜೈಶಂಕರ್ ಕ್ಲಾಸ್ ತೆಗೆದುಕೊಂಡಿದ್ದಾರೆ.

"ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಡಿಸೆಂಬರ್ 2024 ರಲ್ಲಿ ನನ್ನ ಅಮೆರಿಕ ಭೇಟಿಯ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ್ದಾರೆ. ನಾನು ಬೈಡನ್ ಆಡಳಿತದ ವಿದೇಶಾಂಗ ಕಾರ್ಯದರ್ಶಿ ಮತ್ತು NSA ಅವರನ್ನು ಭೇಟಿ ಮಾಡಲು ಹೋಗಿದ್ದೆ. ನಮ್ಮ ಕಾನ್ಸುಲೇಟ್ ಜನರಲ್ ಸಭೆಯ ಅಧ್ಯಕ್ಷತೆ ವಹಿಸಲು ಸಹ ಹೋಗಿದ್ದೆ. ನನ್ನ ವಾಸ್ತವ್ಯದ ಸಮಯದಲ್ಲಿ, ಮುಂಬರುವ NSA-ನಿಯೋಜಿತರು ನನ್ನನ್ನು ಭೇಟಿಯಾದರು" ಎಂದು ಅವರು ಹೇಳಿದರು.

Rahul Gandhi- S Jaishankar
China ಅತಿಕ್ರಮಣಕ್ಕೆ Make In India ವೈಫಲ್ಯ ಕಾರಣ!: ಲೋಕಸಭೆಯಲ್ಲಿ Rahul Gandhi

"ಪ್ರಧಾನಿ ಮೋದಿ ಅವರಿಗೆ ಟ್ರಂಪ್ ಪದಗ್ರಹಣಕ್ಕಾಗಿ ಆಹ್ವಾನದ ಬಗ್ಗೆ ಯಾವುದೇ ಹಂತದಲ್ಲೂ ಚರ್ಚಿಸಲಾಗಿಲ್ಲ. ನಮ್ಮ ಪ್ರಧಾನಿ ಅಂತಹ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ. ವಾಸ್ತವವಾಗಿ, ಭಾರತವನ್ನು ಸಾಮಾನ್ಯವಾಗಿ ವಿಶೇಷ ರಾಯಭಾರಿಗಳು ಪ್ರತಿನಿಧಿಸುತ್ತಾರೆ" ಎಂದು ಜೈಶಂಕರ್ ಹೇಳಿದರು.

"ರಾಹುಲ್ ಗಾಂಧಿಯವರ ಸುಳ್ಳುಗಳು ರಾಜಕೀಯ ಉದ್ದೇಶವನ್ನು ಹೊಂದಿರಬಹುದು. ಆದರೆ ಅವು ವಿದೇಶದಲ್ಲಿ ರಾಷ್ಟ್ರಕ್ಕೆ ಹಾನಿ ಮಾಡುತ್ತವೆ" ಎಂದು ಜೈಶಂಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com