ಸೇನೆ ಗುಂಡಿಗೆ ಚಾಲಕ ಮಿರ್ ಬಲಿ
ಸೇನೆ ಗುಂಡಿಗೆ ಚಾಲಕ ಮಿರ್ ಬಲಿTNIE

ಚೆಕ್‌ಪಾಯಿಂಟ್‌ನಲ್ಲಿ ಟ್ರಕ್ ನಿಲ್ಲಿಸದ ಚಾಲಕ: 23 ಕಿ.ಮೀ ಬೆನ್ನಟ್ಟಿದ ಸೇನೆಯಿಂದ ಗುಂಡಿನ ದಾಳಿ, ವಸೀಮ್ ಬಲಿ!

ಸಂಭವನೀಯ ಭಯೋತ್ಪಾದಕ ಚಟುವಟಿಕೆಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಪಡೆದ ನಂತರ ಫೆಬ್ರವರಿ 5ರಂದು ಬಾರಾಮುಲ್ಲಾದ ಡೆಲಿನಾದಲ್ಲಿ ಅವರು ಮೊಬೈಲ್ ವೆಹಿಕಲ್ ಚೆಕ್ ಪೋಸ್ಟ್ (ಎಂವಿಸಿಪಿ) ಅನ್ನು ಸ್ಥಾಪಿಸಿದ್ದರು.
Published on

ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಟ್ರಕ್ ಚಾಲಕನೊಬ್ಬ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಸೋಪೋರ್ ನಿವಾಸಿ ವಸೀಮ್ ಮಜೀದ್ ಮಿರ್ ಎಂದು ಗುರುತಿಸಲಾಗಿದೆ. ವಸೀಮ್ ಬಾರಾಮುಲ್ಲಾದಿಂದ ಶ್ರೀನಗರದ ಕಡೆಗೆ ಹೋಗುತ್ತಿದ್ದಾಗ ಡೆಲಿನಾದಲ್ಲಿ ಸೇನೆ ತಡೆದಿತ್ತು.

ಸೇನಾ ಹೇಳಿಕೆಯ ಪ್ರಕಾರ, ಸಂಭವನೀಯ ಭಯೋತ್ಪಾದಕ ಚಟುವಟಿಕೆಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಪಡೆದ ನಂತರ ಫೆಬ್ರವರಿ 5ರಂದು ಬಾರಾಮುಲ್ಲಾದ ಡೆಲಿನಾದಲ್ಲಿ ಅವರು ಮೊಬೈಲ್ ವೆಹಿಕಲ್ ಚೆಕ್ ಪೋಸ್ಟ್ (ಎಂವಿಸಿಪಿ) ಅನ್ನು ಸ್ಥಾಪಿಸಿದ್ದರು. ವೇಗವಾಗಿ ಚಲಿಸುತ್ತಿದ್ದ ಟ್ರಕ್ ಚಾಲಕನಿಗೆ ನಿಲ್ಲಿಸಲು ಸೂಚಿಸಲಾಯಿತು. ಆದರೆ ಆತ ಹಲವಾರು ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಚೆಕ್‌ಪಾಯಿಂಟ್ ಹತ್ತಿರ ಟ್ರಕ್ ವೇಗವನ್ನು ಹೆಚ್ಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೇ ಭದ್ರತಾ ಪಡೆಗಳು ವಾಹನವನ್ನು 23 ಕಿ.ಮೀ.ಗಳಿಗೂ ಹೆಚ್ಚು ದೂರ ಬೆನ್ನಟ್ಟಿ ಟೈರ್‌ಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಯಿತು. ಇದರಿಂದಾಗಿ ಟ್ರಕ್ ಸಂಗ್ರಾಮ್ ಚೌಕ್‌ನಲ್ಲಿ ನಿಂತಿತ್ತು ಎಂದು ಹೇಳಿಕೆ ತಿಳಿಸಿದೆ.

ವಾಹನದ ಶೋಧದ ಸಮಯದಲ್ಲಿ, ಚಾಲಕ ಗಾಯಗೊಂಡಿರುವುದು ಕಂಡುಬಂದಿದ್ದು, ಭದ್ರತಾ ಪಡೆಗಳು ಆತನನ್ನು ತಕ್ಷಣವೇ ಬಾರಾಮುಲ್ಲಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು ಎಂದು ಸೇನೆ ತಿಳಿಸಿದೆ. ಆದರೆ ವೈದ್ಯರು ಆತ ಮೃತಪಟ್ಟಿದ್ದಾರೆಂದು ಘೋಷಿಸಿದರು. ಶಂಕಿತನ ಹಿನ್ನಲೆ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಸೇನೆ ತಿಳಿಸಿದೆ. ಅದೇ ಸಮಯದಲ್ಲಿ, ಲೋಡ್ ಮಾಡಿದ ಟ್ರಕ್ ಅನ್ನು ತಪಾಸಣೆ ಮಾಡುವ ಸಲುವಾಗಿ ಹತ್ತಿರದ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಾರಾಮುಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾವಿಗೆ ಕಾರಣವನ್ನು ಕಂಡುಹಿಡಿಯಲು ಮರಣೋತ್ತರ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಭಾವ್ಯ ಬೆದರಿಕೆಗಳನ್ನು ತಡೆಗಟ್ಟಲು ಸೇನೆಯ ರಾಷ್ಟ್ರೀಯ ರೈಫಲ್ಸ್‌ನ ಪಡೆಗಳು ಮೊಬೈಲ್ ವಾಹನ ತಪಾಸಣಾ ಠಾಣೆ (ಎಂವಿಸಿಪಿ) ಸ್ಥಾಪಿಸಿವೆ ಎಂಬ ಮಾಹಿತಿ ತಮಗೆ ಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಸೇನೆ ಗುಂಡಿಗೆ ಚಾಲಕ ಮಿರ್ ಬಲಿ
ಜಮ್ಮು-ಕಾಶ್ಮೀರದಲ್ಲಿ ಅಮಿತ್ ಶಾ ಹೊಸ ಗುರಿ: ಭದ್ರತಾ ಪಡೆಗಳಿಗೆ ಖಡಕ್ ಸೂಚನೆ

ಶಾಂತಿ ಕಾಪಾಡಲು ಜನರಿಗೆ ಮನವಿ

ಘಟನೆಯ ಬಗ್ಗೆ ಜನರು ಶಾಂತಿ ಕಾಪಾಡಬೇಕು ಮತ್ತು ವದಂತಿಗಳು ಅಥವಾ ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಬೇಕು ಎಂದು ಪೊಲೀಸರು ಒತ್ತಾಯಿಸಿದರು. ಸಂಪೂರ್ಣ ತನಿಖೆ ನಡೆಯುತ್ತಿದೆ ಮತ್ತು ಎಲ್ಲಾ ನವೀಕರಣಗಳನ್ನು ಅಧಿಕೃತ ಮಾರ್ಗಗಳ ಮೂಲಕ ಹಂಚಿಕೊಳ್ಳಲಾಗುವುದು. ಸರ್ಕಾರಿ ವ್ಯವಸ್ಥೆಯನ್ನು ಅಡ್ಡಿಪಡಿಸುವ ಅಥವಾ ತಪ್ಪು ಮಾಹಿತಿ ಹರಡುವ ಯಾವುದೇ ಪ್ರಯತ್ನವನ್ನು ಕಟ್ಟುನಿಟ್ಟಾಗಿ ಎದುರಿಸಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com