Maharashtra: Uddhav Thackeray ಬಣದ ಶಿವಸೇನೆ ಮತ್ತೆ ಇಬ್ಭಾಗ?; 8 ಸಂಸದರು ಶಿಂಧೆ ಬಣಕ್ಕೆ?

ಸುದ್ದಿಗಾರರೊಂದಿಗೆ ಮಾತನಾಡಿದ ಸಮಂತ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷವೇ ನಿಜವಾದ ಶಿವಸೇನೆ ಎಂದು ಜನರು ಅರಿತುಕೊಂಡಿದ್ದಾರೆ ಎಂದು ಹೇಳಿದರು.
Eight Shiv Sena-UBT MPs
ಉದ್ಧವ್ ಠಾಕ್ರೆ ಬಣದ ಶಿವಸೇನೆಯ 8 ಸಂಸದರುonline desk
Updated on

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಪಕ್ಷಾಂತರ ಪರ್ವ ನಡೆಯುವ ಸಾಧ್ಯತೆ ಇದೆ. ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ 8 ಸಂಸದರು ಮಾಜಿ ಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರ ಸಚಿವ ಉದಯ್ ಸಮಂತ್ ಈ ಬಗ್ಗೆ ಮಾತನಾಡಿದ್ದು, ವಿರೋಧ ಪಕ್ಷವಾದ ಶಿವಸೇನೆ-ಯುಬಿಟಿಯ ಅನೇಕ ನಾಯಕರು ಶಿಂಧೆ ಬಣದ ಶಿವಸೇನೆಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಹಂತ ಹಂತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಮಂತ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷವೇ ನಿಜವಾದ ಶಿವಸೇನೆ ಎಂದು ಜನರು ಅರಿತುಕೊಂಡಿದ್ದಾರೆ. ಅದು ಸಂಸ್ಥಾಪಕ ಬಾಳಾ ಠಾಕ್ರೆ ಅವರ ಆದರ್ಶಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.

"ಶಿಂಧೆ ಅವರ ನಾಯಕತ್ವ ಶಿವಸೇನೆ (ಯುಬಿಟಿ) ಗಿಂತ ಉತ್ತಮವಾಗಿದೆ ಎಂದು ಜನರು ಅರಿತುಕೊಂಡಿದ್ದಾರೆ. ಅವರ ನಾಯಕತ್ವ ಉತ್ತಮ ಮತ್ತು ಸೂಕ್ಷ್ಮವಾಗಿದೆ, ಅದಕ್ಕಾಗಿಯೇ ಉದ್ಧವ್ ಬಣದ ಅನೇಕ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಅವರು ಹಂತ ಹಂತವಾಗಿ ಪಕ್ಷಕ್ಕೆ ಸೇರುವುದು ಖಚಿತ ಎಂದು ಸಚಿವರು ಹೇಳಿದರು. "ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳಬೇಕಾದರೆ, ಅದನ್ನು ಬಹಿರಂಗವಾಗಿ ಮಾಡಲಾಗುವುದಿಲ್ಲ. ಆದರೂ ಶಿಂಧೆ ಮಾಡಿರುವ ಕೆಲಸವನ್ನು ಪರಿಗಣಿಸಿ ಇಲ್ಲಿ ಯಾವುದೇ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸುವ ಅಗತ್ಯವಿಲ್ಲ" ಎಂದು ಸಮಂತ್ ಹೇಳಿದರು.

ಸಮಂತ್ ಅವರ ಹೇಳಿಕೆಗಳನ್ನು ತಿರಸ್ಕರಿಸಿದ ಶಿವಸೇನೆ-ಯುಬಿಟಿಯ ಎಂಟು ಲೋಕಸಭಾ ಸದಸ್ಯರಾದ ಅರವಿಂದ್ ಸಾವಂತ್, ಅನಿಲ್ ದೇಸಾಯಿ, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ, ರಾಜಭಾವು ವಾಜೆ, ಸಂಜಯ್ ಜಾಧವ್, ನಾಗೇಶ್ ಅಷ್ಟಿಕರ್ ಮತ್ತು ಸಂಜಯ್ ದೇಶಮುಖ್ ಅವರು ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಪ್ರತಿಪಾದಿಸಲು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಶಿವಸೇನೆ-ಯುಬಿಟಿ ಸಂಸದರಲ್ಲಿ ಯಾರಿಗೂ ಯಾವುದೇ ಫೋನ್ ಕರೆಗಳು ಬಂದಿಲ್ಲ ಎಂದು ಸಾವಂತ್ ಹೇಳಿದ್ದಾರೆ ಮತ್ತು ಠಾಕ್ರೆ ನೇತೃತ್ವದ ಪಕ್ಷದಿಂದ ಸಾಮೂಹಿಕವಾಗಿ ಹೊರಹೋಗುವ ಬಗ್ಗೆ "ವದಂತಿಗಳನ್ನು ಹರಡುವ" ಪ್ರಯತ್ನಗಳನ್ನು ಖಂಡಿಸಿದ್ದಾರೆ.

Eight Shiv Sena-UBT MPs
ಮಹಾರಾಷ್ಟ್ರಕ್ಕೆ ಮೂರನೇ ಉಪಮುಖ್ಯಮಂತ್ರಿ ನೇಮಕ- ರಾವತ್: ಶಿಂಧೆ ನೇತೃತ್ವದ ಶಿವಸೇನೆಯಲ್ಲಿ ಬಿರುಕು

ಶಿವಸೇನೆ-ಯುಬಿಟಿ ಸಂಸದರು ಕಷ್ಟದ ಸಮಯದಲ್ಲಿ ಪಕ್ಷದೊಂದಿಗೆ ಇದ್ದರು ಮತ್ತು ಅದನ್ನು ಮುಂದುವರಿಸುತ್ತಾರೆ ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು. ಶಿಂಧೆ ನೇತೃತ್ವದ ಶಿವಸೇನೆ ವಿಧಾನಸಭಾ ಚುನಾವಣೆಯಲ್ಲಿ 57 ಸ್ಥಾನಗಳನ್ನು ಗೆದ್ದು, ಠಾಕ್ರೆ ನೇತೃತ್ವದ ಸಂಘಟನೆಗಿಂತ ಮೇಲುಗೈ ಸಾಧಿಸಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com