ಮಹಾರಾಷ್ಟ್ರದಲ್ಲಿ BJP ಗೆಲುವು ಶರದ್ ಪವಾರ್'ರ ದೀರ್ಘಕಾಲೀನ ದ್ರೋಹ ರಾಜಕಾರಣ ಅಂತ್ಯ: ಅಮಿತ್ ಶಾ

ದೆಹಲಿ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದ ಶಾ, ವಿರೋಧ ಪಕ್ಷವಾದ ಇಂಡಿ ಬ್ಲಾಕ್‌ನ ಅವನತಿ ಪ್ರಾರಂಭವಾಗಿದೆ ಎಂದು ಹೇಳಿದರು.
ಅಜಿತ್ ಪವಾರ್-ಶರದ್ ಪವಾರ್-ಅಮಿತ್ ಶಾ
ಅಜಿತ್ ಪವಾರ್-ಶರದ್ ಪವಾರ್-ಅಮಿತ್ ಶಾPTI
Updated on

ಮುಂಬೈ: ಬಿಜೆಪಿ ನೇತೃತ್ವದ ಮಹಾಯುತಿ ಪ್ರಚಂಡ ಗೆಲುವಿನೊಂದಿಗೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ನಿಜವಾದ ಶಿವಸೇನೆ ಮತ್ತು ನಿಜವಾದ ರಾಷ್ಟ್ರೀಯವಾದಿಗಳು ದೊಡ್ಡ ಜಯ ಸಾಧಿಸಿವೆ. ಶರದ್ ಪವಾರ್ 1978ರಲ್ಲಿ ಮಹಾರಾಷ್ಟ್ರದಲ್ಲಿ ವಿಶ್ವಾಸಘಾತುಕತನದಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2019ರಲ್ಲಿ ಉದ್ಧವ್ ಠಾಕ್ರೆ ದೇಶದ್ರೋಹ ಎಸಗಿದರು. ನಾನು ಅವರನ್ನು ಸೋಲಿಸಲು ಬಯಸಿದ್ದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ದೆಹಲಿ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದ ಶಾ, ವಿರೋಧ ಪಕ್ಷವಾದ ಇಂಡಿ ಬ್ಲಾಕ್‌ನ ಅವನತಿ ಪ್ರಾರಂಭವಾಗಿದೆ ಎಂದು ಹೇಳಿದರು. ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಶಾ ಭರವಸೆ ವ್ಯಕ್ತಪಡಿಸಿದರು.

2024 ಒಂದು ಮಹತ್ವದ ವರ್ಷ. ಮೋದಿ ಮೂರನೇ ಪ್ರಧಾನಿಯಾದರು. ಮಹಾರಾಷ್ಟ್ರದಲ್ಲಿ 40 ಲಕ್ಷ ಸದಸ್ಯರು ದಾಖಲಾಗಿದ್ದಾರೆ. ಒಂದು ಕೋಟಿ ಸದಸ್ಯರನ್ನು ಮಾಡಬೇಕು. ಈ ವಿಷಯವನ್ನು ಒಂದು ತಿಂಗಳೊಳಗೆ ವಿವರವಾಗಿ ಚರ್ಚಿಸಲಾಗುವುದು. ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಅಜಿತ್ ಪವಾರ್-ಶರದ್ ಪವಾರ್-ಅಮಿತ್ ಶಾ
ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ 8,500 ರೂ. ಗ್ಯಾರಂಟಿ ಯೋಜನೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com