"ಗಲಾಟೆ ಇಲ್ಲದೇ ಚುನಾವಣೆ": ಮೋದಿಯನ್ನು ಹಾಡಿ ಹೊಗಳಿದ Omar Abdullah; ರಾಜ್ಯ ಸ್ಥಾನಮಾನಕ್ಕಾಗಿ ಬೇಡಿಕೆ!

ಪ್ರಧಾನಿ ನರೇಂದ್ರ ಮೋದಿ 6.5 ಕಿ.ಮೀ. ಝಡ್-ಮೋರ್ ಸುರಂಗ ಮಾರ್ಗವನ್ನು ಉದ್ಘಾಟಿಸಿದ ನಂತರ ಸೋನಾಮಾರ್ಗ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ಲಾ, ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದರು.
Narendra Modi- Omar abdullah
ನರೇಂದ್ರ ಮೋದಿ- ಒಮರ್ ಅಬ್ದುಲ್ಲ online desk
Updated on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸುವವರಿಗೆ ಯಾವಾಗಲೂ ಸೋಲು ಎದುರಾಗುತ್ತದೆ ಮತ್ತು ಈ ಪ್ರದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಯಾವುದೇ ಹಾನಿ ಉಂಟುಮಾಡಲು ಅವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 6.5 ಕಿ.ಮೀ. ಝಡ್-ಮೋರ್ ಸುರಂಗ ಮಾರ್ಗವನ್ನು ಉದ್ಘಾಟಿಸಿದ ನಂತರ ಸೋನಾಮಾರ್ಗ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ಲಾ, ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಕಳೆದ ವರ್ಷ ಸುರಂಗ ನಿರ್ಮಾಣ ಕಾರ್ಮಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸ್ಥಳೀಯ ವೈದ್ಯರು ಸೇರಿದಂತೆ ಏಳು ಜನರಿಗೆ ಗೌರವ ಸಲ್ಲಿಸಿದ ಅಬ್ದುಲ್ಲಾ, ಅವರು ದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

"ಮೂರನೇ ಅವಧಿಗೆ ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಶ್ರೀನಗರದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನದಂದು ಭಾಗವಹಿಸಿದ್ದರು. ಆಗ ಜನರಿಗೆ ಚುನಾವಣೆಗಳು ನಡೆಯಲಿವೆ ಮತ್ತು ಅವರು ತಮ್ಮದೇ ಆದ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ನೀವು (ಪ್ರಧಾನಿ ಮೋದಿ) ನಿಮ್ಮ ಭರವಸೆಯನ್ನು ಈಡೇರಿಸಿದ್ದೀರಿ, ಮತ್ತು ನಾಲ್ಕು ತಿಂಗಳೊಳಗೆ ಚುನಾವಣೆಗಳು ನಡೆದವು. ಹೊಸ ಸರ್ಕಾರ ಆಯ್ಕೆಯಾಯಿತು, ಮತ್ತು ಫಲಿತಾಂಶವೆಂದರೆ, ಮುಖ್ಯಮಂತ್ರಿಯಾಗಿ, ನಾನು ಇಲ್ಲಿ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ" ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

Narendra Modi- Omar abdullah
Watch | ಇಂಡಿಯಾ ಬ್ಲಾಕ್ ಮುಚ್ಚೋದೆ ವಾಸಿ: ಒಮರ್ ಅಬ್ದುಲ್ಲಾ

ಜನರು ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು, ಮತ್ತು ಎಲ್ಲಿಯೂ ಯಾವುದೇ ರಿಗ್ಗಿಂಗ್ ಅಥವಾ ಅಧಿಕಾರ ದುರುಪಯೋಗದ ದೂರುಗಳು ಬಂದಿಲ್ಲ, ಇದಕ್ಕಾಗಿ ನಿಮಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com