ದೆಹಲಿ ಚುನಾವಣೆ: ಕೇಜ್ರಿವಾಲ್, ಮಾನ್ ಗೆ 100 ಕೋಟಿ ರೂ ಮಾನನಷ್ಟ ನೋಟಿಸ್!

21.1.2025 ರಂದು ಸುಳ್ಳು ತಪ್ಪುದಾರಿಗೆಳೆಯುವ ಹೇಳಿಕೆ, ಆಧಾರರಹಿತ ಟ್ವೀಟ್‌, ಮರು ಟ್ವೀಟ್‌ಗಳ ಮೂಲಕ ಮಾನಹಾನಿ ಮಾಡಿದ ಆರೋಪದ ಮೇಲೆ ಕೇಜ್ರಿವಾಲ್ ಮತ್ತು ಮಾನ್ ವಿರುದ್ಧ ನೋಟಿಸ್ ಕಳುಹಿಸಲಾಗಿದೆ.
Parvesh Verma, Kejriwal
ಸಂಸದ ಪರ್ವೇಶ್ ವರ್ಮಾ, ಕೇಜ್ರಿವಾಲ್
Updated on

ನವದೆಹಲಿ: ತಮ್ಮ ವಿರುದ್ಧ ಸುಳ್ಳು ಹಾಗೂ ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೇ 48 ಗಂಟೆಗಳ ಒಳಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

21.1.2025 ರಂದು ಸುಳ್ಳು ತಪ್ಪುದಾರಿಗೆಳೆಯುವ ಹೇಳಿಕೆ, ಆಧಾರರಹಿತ ಟ್ವೀಟ್‌, ಮರು ಟ್ವೀಟ್‌ಗಳ ಮೂಲಕ ಮಾನಹಾನಿ ಮಾಡಿದ ಆರೋಪದ ಮೇಲೆ ಕೇಜ್ರಿವಾಲ್ ಮತ್ತು ಮಾನ್ ವಿರುದ್ಧ ನೋಟಿಸ್ ಕಳುಹಿಸಲಾಗಿದೆ.

ನೋಟಿಸ್ ಸ್ವೀಕರಿಸಿದ 48 ಗಂಟೆಗಳ ಒಳಗಾಗಿ ಬೇಷರತ್ ಕ್ಷಮೆಯಾಚಿಸಬೇಕು. ಮಾನಹಾನಿ ನಷ್ಟ ಭರಿಸಲು ಇಬ್ಬರು ತಲಾ ರೂ. 50 ಕೋಟಿಯಂತೆ ರೂ. 100 ಕೋಟಿ ಪಾವತಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

Parvesh Verma, Kejriwal
ದೇಶದ ಮುಂದಿನ ಬಜೆಟ್ ಅನ್ನು ಮಧ್ಯಮ ವರ್ಗಕ್ಕೆ ಮೀಸಲಿಡಿ: ಕೇಂದ್ರಕ್ಕೆ ಕೇಜ್ರಿವಾಲ್ ಆಗ್ರಹ

ಪರ್ವೇಶ್ ವರ್ಮಾ ಅವರು ಪಂಜಾಬಿಗಳಿಂದ ದೇಶಕ್ಕೆ ಬೆದರಿಕೆ ಇದೆ ಎಂದು ಹೇಳಿರುವುದಾಗಿ ಇತ್ತೀಚಿಗೆ ಕೇಜ್ರಿವಾಲ್ ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ವರ್ಮಾ, ನಾನು ಮತ್ತು ನನ್ನ ಕುಟುಂಬದವರು ಸಿಖ್ ಸಮುದಾಯಕ್ಕಾಗಿ ಏನು ಮಾಡಿದ್ದೇವೆ ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com