Jharkhand: ಏರಿಯಾ ಕಮಾಂಡರ್ ಸೇರಿ ಇಬ್ಬರು ಮಾವೋವಾದಿಗಳ ಹತ್ಯೆ

ಗಿರಿದಿಹ್ ಜಿಲ್ಲೆಯ ಚತ್ರೋ ಗ್ರಾಮದ ಏರಿಯಾ ಕಮಾಂಡರ್ ಶಾಂತಿ ಮತ್ತು ಅದೇ ಜಿಲ್ಲೆಯ ಧವತಾರ್ ಗ್ರಾಮದ ಮನೋಜ್ ನನ್ನು ಎನ್‌ಕೌಂಟರ್‌ ಮಾಡಲಾಗಿದೆ.
ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ  ಭದ್ರತಾ ಸಿಬ್ಬಂದಿಗಳು (ಸಂಗ್ರಹ ಚಿತ್ರ)
ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಗಳು (ಸಂಗ್ರಹ ಚಿತ್ರ)
Updated on

ರಾಂಚಿ: ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

ಗಿರಿದಿಹ್ ಜಿಲ್ಲೆಯ ಚತ್ರೋ ಗ್ರಾಮದ ಏರಿಯಾ ಕಮಾಂಡರ್ ಶಾಂತಿ ಮತ್ತು ಅದೇ ಜಿಲ್ಲೆಯ ಧವತಾರ್ ಗ್ರಾಮದ ಮನೋಜ್ ನನ್ನು ಎನ್‌ಕೌಂಟರ್‌ ಮಾಡಲಾಗಿದೆ.

ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಶಾಂತಿ ಕಟ್ಟಾ ಮಾವೋವಾದಿ ರಣವಿಜಯ್ ಮಹಾತೋ ​​ಅವರ ಪತ್ನಿಯಾಗಿದ್ದು, ಪೊಲೀಸರಿಗೆ ಬೇಕಾಗಿದ್ದರು ಮತ್ತು ಅವರ ತಲೆಗೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಮಂಗಳವಾರ ಬೆರ್ಮೊದಲ್ಲಿ ರಣವಿಜಯ್ ಮಹಾತೋ ​​ಅವರನ್ನು ಬಂಧಿಸಲಾಗಿದೆ.

ಮೃತ ಮಾವೋವಾದಿಗಳಿಂದ ಎಕೆ -47 ರೈಫಲ್‌ಗಳು ಮತ್ತು ಐಎನ್‌ಎಸ್‌ಎಎಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ  ಭದ್ರತಾ ಸಿಬ್ಬಂದಿಗಳು (ಸಂಗ್ರಹ ಚಿತ್ರ)
ಮೂರು ದಶಕಗಳಿಂದ ಭೂಗತವಾಗಿದ್ದ ಮಾವೋವಾದಿ: ಪತ್ನಿಯೊಂದಿಗಿನ ಸೆಲ್ಫಿ ತಂತು ಪ್ರಾಣಕ್ಕೆ ಕುತ್ತು!

ಪೆಂಕ್ ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಎನ್ ಕೌಂಟರ್ ನಡೆದಿದ್ದು, ಭದ್ರತಾ ಸಿಬ್ಬಂದಿಯ ಜಂಟಿ ತಂಡ ಅಲ್ಲಿಗೆ ತಲುಪಿದ ತಕ್ಷಣ, ಮಾವೋವಾದಿಗಳು ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು.

ಇದಕ್ಕೆ ಪ್ರತಿಯಾಗಿ, ಭದ್ರತಾ ಪಡೆಗಳು ಸಹ ಪ್ರತಿದಾಳಿ ನಡೆಸಿದ್ದು, ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಎನ್ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭದ್ರತಾ ಸಿಬ್ಬಂದಿ ಎಲ್ಲಾ ಕಡೆಯಿಂದಲೂ ಮಾವೋವಾದಿಗಳನ್ನು ಹಿಮ್ಮೆಟ್ಟಿಸಿದ್ದಾರೆ ಮತ್ತು ಇತರ ಮಾವೋವಾದಿಗಳನ್ನು ಪತ್ತೆಹಚ್ಚಲು ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com