ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ್ತಿ, ಧಕ್ ವಾದಕ, ಕುವೈತ್‌ನ ಯೋಗ ಪಟು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ...

2021 ರಲ್ಲಿ, ಅವರು ಯೆಮೆನ್ ನಿರಾಶ್ರಿತರು ಮತ್ತು ಯುದ್ಧಪೀಡಿತ ಯೆಮೆನ್‌ನಲ್ಲಿ ಸ್ಥಳಾಂತರಗೊಂಡ ಜನರಿಗೆ ನಿಧಿಸಂಗ್ರಹಣೆಯಾದ ಯೋಮ್ನಾಕ್ ಲಿಲ್ ಯಮನ್ ನ್ನು ಮುನ್ನಡೆಸಿದರು.
100-year-old Libia Lobo Sardesai, who played an important role in Goa's freedom movement is among the Padma Shri awardees
ಲಿಬಿಯಾ ಲೊಬೊ ಸರ್ದೇಸಾಯಿ
Updated on

ನವದೆಹಲಿ: ಗೋವಾದ 100 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರ್ತಿ, ಕುವೈತ್‌ನ ಯೋಗ ಪಟು ಮತ್ತು ಬಿಲ್ಲುಗಾರಿಕೆಯಲ್ಲಿ ಪ್ಯಾರಾಲಿಂಪಿಕ್ ಚಿನ್ನದ ಪದಕ ಗೆದ್ದ ಪ್ಯಾರಾ ಅಥ್ಲೀಟ್ ಸೇರಿದಂತೆ ದೇಶ ಪ್ರಸಿದ್ಧ ವೀರರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ಘೋಷಿಸಿದೆ.

ಪ್ರಶಸ್ತಿ ಪುರಸ್ಕೃತರಲ್ಲಿ ಕುವೈತ್‌ನ 48 ವರ್ಷದ ಯೋಗ ಪಟು ಶೈಖಾ ಎಜೆ ಅಲ್ ಸಬಾ ಕೂಡ ಒಬ್ಬರು. ಕುವೈತ್‌ನ ಮೊದಲ ಪರವಾನಗಿ ಪಡೆದ ಯೋಗ ಸ್ಟುಡಿಯೊ ದಾರಾತ್ಮವನ್ನು ಸ್ಥಾಪಿಸಿದ ಶೈಖಾ, ಸಾಂಪ್ರದಾಯಿಕ ತಂತ್ರಗಳನ್ನು ಬಳಸಿಕೊಂಡು ಗಲ್ಫ್ ಪ್ರದೇಶದಲ್ಲಿ ಯೋಗವನ್ನು ಉತ್ತೇಜಿಸಲು ನೀಡಿದ ಕೊಡುಗೆಗಾಗಿ ಗುರುತಿಸಲ್ಪಟ್ಟಿದ್ದಾರೆ.

2021 ರಲ್ಲಿ, ಅವರು ಯೆಮೆನ್ ನಿರಾಶ್ರಿತರು ಮತ್ತು ಯುದ್ಧಪೀಡಿತ ಯೆಮೆನ್‌ನಲ್ಲಿ ಸ್ಥಳಾಂತರಗೊಂಡ ಜನರಿಗೆ ನಿಧಿಸಂಗ್ರಹಣೆಯಾದ ಯೋಮ್ನಾಕ್ ಲಿಲ್ ಯಮನ್ ನ್ನು ಮುನ್ನಡೆಸಿದರು.

ಗೋವಾದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೊ ಸರ್ದೇಸಾಯಿ, 1955 ರಲ್ಲಿ ಪೋರ್ಚುಗೀಸ್ ಆಳ್ವಿಕೆಯ ವಿರುದ್ಧ ರ್ಯಾಲಿ ಮಾಡುವ ಭೂಗತ ರೇಡಿಯೋ ಸ್ಟೇಷನ್ ವೋಜ್ ಡಾ ಲಿಬರ್ಡೇಡ್ (ವಾಯ್ಸ್ ಆಫ್ ಫ್ರೀಡಮ್) ನ್ನು ಸಹ-ಸ್ಥಾಪಿಸಿದರು. ಗೋವಾದ ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಪ್ರಯತ್ನಗಳಿಂದ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಮತ್ತೊಬ್ಬರಾದ ಪಶ್ಚಿಮ ಬಂಗಾಳದ 57 ವರ್ಷದ ಧಕ್ ವಾದಕ ಗೋಕುಲ್ ಚಂದ್ರ ಡೇ ಅವರಿಗೆ ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲಿ ಲಿಂಗ ಅಡೆತಡೆಗಳನ್ನು ನಿವಾರಿಸಿದ್ದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಚಂದ್ರ ಡೇ 150 ಮಹಿಳೆಯರಿಗೆ ಸಾಂಪ್ರದಾಯಿಕ ವಾದ್ಯವಾದ ಧಕ್ ನುಡಿಸುವಲ್ಲಿ ತರಬೇತಿ ನೀಡಿ, ಈ ಕಲಾ ಪ್ರಕಾರವನ್ನು ಜನಪ್ರಿಯಗೊಳಿಸಲು ಅವರಿಗೆ ಅಧಿಕಾರ ನೀಡಿದರು.

100-year-old Libia Lobo Sardesai, who played an important role in Goa's freedom movement is among the Padma Shri awardees
2025ರ ಪದ್ಮಪ್ರಶಸ್ತಿ ಘೋಷಣೆ: ನಟ ಅನಂತನಾಗ್, ರಿಕ್ಕಿ ಕೇಜ್‌ ಸೇರಿ ಕರ್ನಾಟಕದ 9 ಸಾಧಕರಿಗೆ ಗೌರವ

2024 ರ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹರಿಯಾಣದ ಪ್ಯಾರಾ ಬಿಲ್ಲುಗಾರ ಹರ್ವಿಂದರ್ ಸಿಂಗ್ ಕೂಡ ಗೌರವದ ಪಟ್ಟಿಯಲ್ಲಿದ್ದಾರೆ. ನಮ್ಮ ರಾಷ್ಟ್ರದ ಏಕತೆ ಮತ್ತು ಶಕ್ತಿಯ ಸಂಕೇತವಾದ ಭಾರತದ ಗೌರವಾನ್ವಿತ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಹರ್ವಿಂದರ್ ಸಿಂಗ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಹಣ್ಣು ಬೆಳೆಯುವ ಕೃಷಿಕ ಎಲ್ ಹ್ಯಾಂಗ್‌ಥಿಂಗ್, ಪುದುಚೇರಿಯ ವಾದ್ಯ ವಾದಕ ಪಿ ದಚ್ಚನಮೂರ್ತಿ, ಮಧ್ಯಪ್ರದೇಶದ ಸಾಮಾಜಿಕ ಉದ್ಯಮಿ ಸ್ಯಾಲಿ ಹೋಳ್ಕರ್ ಮತ್ತು ಮರಾಠಿ ಲೇಖಕ ಮಾರುತಿ ಭುಜಂಗರಾವ್ ಚಿಟಂಪಲ್ಲಿ ಇತರ ಗಮನಾರ್ಹ ಪ್ರಶಸ್ತಿ ಪುರಸ್ಕೃತರು, ಇವರೆಲ್ಲರೂ ಆಯಾ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com