ಮ್ಯಾನ್ಮಾರ್‌ನಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್?: ಡ್ರೋನ್ ದಾಳಿಯಲ್ಲಿ ULFA ಹಿರಿಯ ಕಮಾಂಡರ್ ಸೇರಿ 19 ಮಂದಿ ಸಾವು; ಭಾರತೀಯ ಸೇನೆ ಹೇಳಿದ್ದೇನು?

ಮ್ಯಾನ್ಮಾರ್‌ನ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ULFA) ತನ್ನ ಪೂರ್ವ ಪ್ರಧಾನ ಕಚೇರಿಯ ಮೇಲೆ ಭಾರತೀಯ ಸೇನೆಯು ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.
Nayan Asom alias Nayan Medhi
ಉಲ್ಫಾ-ಐ ಕಮಾಂಡರ್ ನಯನ್ ಮೇಧಿ
Updated on

ಮ್ಯಾನ್ಮಾರ್‌ನ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ULFA) ತನ್ನ ಪೂರ್ವ ಪ್ರಧಾನ ಕಚೇರಿಯ ಮೇಲೆ ಭಾರತೀಯ ಸೇನೆಯು ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಇದರಲ್ಲಿ ಹಿರಿಯ ಉಲ್ಫಾ-ಐ ಕಮಾಂಡರ್ ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ.

ಡ್ರೋನ್ ದಾಳಿ ನಡೆಸಿದವರು ಯಾರು?

ಭಾರತೀಯ ಸೇನೆಯು ಉಲ್ಫಾ-ಐನ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಗುವಾಹಟಿಯಲ್ಲಿ ಮಾತನಾಡಿದ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್, ಅಂತಹ ಯಾವುದೇ ಕಾರ್ಯಾಚರಣೆಯ ಬಗ್ಗೆ ಭಾರತೀಯ ಸೇನೆಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು. ವರದಿಗಳ ಪ್ರಕಾರ, ಉಲ್ಫಾ (ಐ) ಹಿರಿಯ ಕಮಾಂಡರ್ ನಯನ್ ಮೇಧಿ ದಾಳಿಯಲ್ಲಿ ಸಾವನ್ನಪ್ಪಿದ್ದು ಸ್ಥಳದಲ್ಲಿದ್ದ ಮಣಿಪುರಿ ದಂಗೆಕೋರ ಗುಂಪುಗಳ ಕೆಲವು ಕಾರ್ಯಕರ್ತರು ಸಹ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಉಲ್ಫಾ (ಐ) ನಂತರ ಮತ್ತೊಂದು ಹೇಳಿಕೆಯಲ್ಲಿ ತನ್ನ ಮೃತ ಸದಸ್ಯನ ಅಂತ್ಯಕ್ರಿಯೆ ನಡೆಸುತ್ತಿದ್ದಾಗ ತನ್ನ ಶಿಬಿರದ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಹೇಳಿಕೊಂಡಿದೆ. ಎರಡನೇ ಸುತ್ತಿನ ದಾಳಿಯಲ್ಲಿ, 'ಬ್ರಿಗೇಡಿಯರ್' ಗಣೇಶ್ ಅಸೋಮ್ ಮತ್ತು 'ಕರ್ನಲ್' ಪ್ರದೀಪ್ ಅಸೋಮ್ ಎಂಬ ಇಬ್ಬರು ಹಿರಿಯ ಸದಸ್ಯರು ಸಾವನ್ನಪ್ಪಿದ್ದು ಇತರ ಅನೇಕ ಸದಸ್ಯರು ಮತ್ತು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಪರೇಶ್ ಬರುವಾ ನೇತೃತ್ವದ ಉಲ್ಫಾ (I) ನಲ್ಲಿ ಈಗ ಒಬ್ಬ ಹಿರಿಯ ಕಮಾಂಡರ್ ಮಾತ್ರ ಉಳಿದಿದ್ದಾರೆ ಎಂಬುದು ಗಮನಾರ್ಹ. ಆತ ಮ್ಯಾನ್ಮಾರ್‌ನಲ್ಲಿದ್ದಾನೆ. ಆತನ ಹೆಸರು ಅರುಣೋದಯ್ ದೋಹೋಟಿಯಾ ಎಂದು ಹೇಳಲಾಗುತ್ತದೆ. ಮ್ಯಾನ್ಮಾರ್ ಶಿಬಿರಗಳಿಂದ ಸಕ್ರಿಯವಾಗಿರುವ ಮತ್ತೊಬ್ಬ ಉಲ್ಫಾ (I) ಕಮಾಂಡರ್ ರೂಪೋಮ್ ಅವರನ್ನು ಮೇ ತಿಂಗಳಲ್ಲಿ ಅಸ್ಸಾಂ ಪೊಲೀಸರು ಬಂಧಿಸಿದರು.

Nayan Asom alias Nayan Medhi
ಮ್ಯಾನ್ಮಾರ್‌ನ ಬೌದ್ಧ ಮಠವೊಂದರ ಮೇಲೆ ವೈಮಾನಿಕ ದಾಳಿ: 4 ಮಕ್ಕಳು ಸೇರಿ 23 ಮಂದಿ ಸಾವು!

ಪರೇಶ್ ಬರುವಾ ಅವರ ಐಎಸ್‌ಐ ಸಂಪರ್ಕ

ಪರೇಶ್ ಬರುವಾ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಆಳವಾದ ಸಂಪರ್ಕ ಹೊಂದಿರುವುದರಿಂದ ಮತ್ತು ಚೀನಾ-ಮ್ಯಾನ್ಮಾರ್-ಭಾರತದ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿರುವುದರಿಂದ ಪರೇಶ್ ಬರುವಾ ಭಾರತ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಉಲ್ಫಾ (ಐ) ಪ್ರಧಾನ ಕಚೇರಿಯ ಮೇಲಿನ ದಾಳಿಗಳು ಈ ನಿಷೇಧಿತ ಸಂಘಟನೆಗಳ ನಡುವಿನ ಅಂತಃಕಲಹದಿಂದಾಗಿರಬಹುದು ಎಂದು ಈ ವಿಷಯದ ಬಗ್ಗೆ ತಿಳಿದಿರುವ ವಿಶ್ಲೇಷಕರು ಏಜೆನ್ಸಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com