
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಆಡಳಿತ ಮಂಡಳಿ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ನಾಲ್ವರು ನೌಕರರನ್ನು, ಹಿಂದೂಗಳಲ್ಲ ಮತ್ತು ಇತರ ಧರ್ಮ ಪಾಲಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅಮಾನತುಗೊಳಿಸಿವೆ.
ಟಿಟಿಡಿ, ಉಪ ಕಾರ್ಯನಿರ್ವಾಹಕ ಎಂಜಿನಿಯರ್(ಗುಣಮಟ್ಟ ನಿಯಂತ್ರಣ) ಬಿ ಎಲಿಜರ್, ಬಿಐಆರ್ಆರ್ಡಿ ಆಸ್ಪತ್ರೆಯ ಸ್ಟಾಫ್ ನರ್ಸ್ ಎಸ್ ರೋಸಿ, ಬಿಐಆರ್ಆರ್ಡಿ ಆಸ್ಪತ್ರೆಯ ಗ್ರೇಡ್ -1 ಫಾರ್ಮಸಿಸ್ಟ್ ಎಂ ಪ್ರೇಮಾವತಿ ಮತ್ತು ಎಸ್ವಿ ಆಯುರ್ವೇದ ಫಾರ್ಮಸಿಯ ಜಿ ಅಸುಂತ ಅವರನ್ನು ಅಮಾನತುಗೊಳಿಸಿದೆ.
ಟಿಟಿಡಿ ತನ್ನ ನಾಲ್ವರು ಉದ್ಯೋಗಿಗಳನ್ನು ಇತರ ಧರ್ಮಗಳನ್ನು ಪಾಲಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅಮಾನತುಗೊಳಿಸಿದೆ ಎಂದು ಶನಿವಾರ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈ ನೌಕರರು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಯನ್ನು ಪ್ರತಿನಿಧಿಸುವಾಗ ಮತ್ತು ಕೆಲಸ ಮಾಡುವಾಗ ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ನಂಬಲಾಗಿದೆ ಎಂದು ಟಿಟಿಡಿ ಹೇಳಿದೆ.
Advertisement