Mann ki Baat: ಶುಭಾಂಶು ಶುಕ್ಲಾರಿಂದ ಮಕ್ಕಳಲ್ಲಿ ಬಾಹ್ಯಾಕಾಶ ಆಸಕ್ತಿ, ಸ್ಟಾರ್ಟಪ್ ಸಂಖ್ಯೆ ಹೆಚ್ಚಳ; ಪ್ರಧಾನಿ ಮೋದಿ

ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಹಿಂದಿರುಗಿದ್ದು, ಚಂದ್ರಯಾನ -3 ಯಶಸ್ಸಿನ ನಂತರದ ಈ ಕ್ಷೇತ್ರದಲ್ಲಿನ ನಿರಂತರ ಸಾಧನೆಯನ್ನು ಕೊಂಡಾಡಿದರು.
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಭಾರತದಾದ್ಯಂತ ಬಾಹ್ಯಾಕಾಶದ ಬಗ್ಗೆ ಹೊಸ ಕುತೂಹಲದ ಅಲೆ ಬೀಸುತ್ತಿದೆ, ಇದು ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ರಾಷ್ಟ್ರದ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಹಿಂದಿರುಗಿದ್ದು, ಚಂದ್ರಯಾನ -3 ಯಶಸ್ಸಿನ ನಂತರದ ಈ ಕ್ಷೇತ್ರದಲ್ಲಿನ ನಿರಂತರ ಸಾಧನೆಯನ್ನು ಕೊಂಡಾಡಿದರು.

ತಮ್ಮ ಮಾಸಿಕ ಮನ್ ಕಿ ಬಾತ್ ರೇಡಿಯೋ ಪ್ರಸಾರದ 124ನೇ ಕಂತಿನಲ್ಲಿ ಮಾತನಾಡಿರುವ ಮೋದಿ, ವಿಕಸಿತ ಭಾರತದ ಹಾದಿಯು ಸ್ವಾವಲಂಬನೆಯ ಮೂಲಕ ಸಾಗುತ್ತದೆ. 'ಸ್ಥಳೀಯರಿಗೆ ಧ್ವನಿ' ಎಂಬುದು 'ಆತ್ಮನಿರ್ಭರ ಭಾರತ'ದ ಬಲವಾದ ಅಡಿಪಾಯವಾಗಿದೆ ಎಂದು ಹೇಳಿದರು.

ನಾವು ಯಶಸ್ಸು, ಸಾಧನೆಯ ಬಗ್ಗೆ ಮಾತನಾಡುತ್ತೇವೆ, ಕಳೆದ ಕೆಲವು ವಾರಗಳಲ್ಲಿ ವಿಜ್ಞಾನ, ಸಂಸ್ಕೃತಿಯಲ್ಲಿ ಅನೇಕ ವಿಷಯಗಳು ನಡೆದಿವೆ. ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಹಿಂತಿರುಗಿದರು, ಚಂದ್ರಯಾನ 3 ಯಶಸ್ವಿಯಾದಾಗ, ದೇಶದಲ್ಲಿ ಉತ್ಸಾಹವಿತ್ತು. ಬಾಹ್ಯಾಕಾಶ ನವೋದ್ಯಮಗಳು ಹೆಚ್ಚುತ್ತಿವೆ ಎಂದು ಪ್ರಧಾನಿ ಹೇಳಿದರು.

ಭಾರತದಾದ್ಯಂತ ಮಕ್ಕಳಲ್ಲಿ ಬಾಹ್ಯಾಕಾಶದ ಬಗ್ಗೆ ಹೊಸ ಕುತೂಹಲದ ಅಲೆ ವ್ಯಾಪಿಸುತ್ತಿದೆ. ದೇಶದಲ್ಲಿ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ಸಹ ವೇಗವಾಗಿ ಬರುತ್ತಿವೆ. ಐದು ವರ್ಷಗಳ ಹಿಂದೆ 50 ಕ್ಕಿಂತ ಕಡಿಮೆ ಸ್ಟಾರ್ಟ್‌ಅಪ್‌ಗಳು ಇದ್ದವು. ಇಂದು, ಬಾಹ್ಯಾಕಾಶ ವಲಯದಲ್ಲಿಯೇ 200 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ ಎಂದು ಹೇಳಿದರು.

PM Narendra Modi
ಕೋಟ್ಯಾಂತರ ಕನಸುಗಳಿಗೆ ಸ್ಫೂರ್ತಿ: ಶುಭಾಂಶು ಶುಕ್ಲಾ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ

ಬಾಹ್ಯಾಕಾಶ ಸಾಧನೆಗಳಿಗೆ ಸಂಬಂಧಿಸಿದ ವಿಡಿಯೊ ಹಂಚಿಕೊಳ್ಳಿ

ಭಾರತದ ಬಾಹ್ಯಾಕಾಶ ಸಾಧನೆಗಳಿಗೆ ಸಂಬಂಧಿಸಿದ ಈ ದಿನವನ್ನು ಹೇಗೆ ಆಚರಿಸುವುದು ಎಂಬುದರ ಕುರಿತು ತಮ್ಮ ಆಲೋಚನೆಗಳು, ಸಲಹೆಗಳು ಅಥವಾ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಜನರು - ವಿಶೇಷವಾಗಿ ಯುವಕರು ಮತ್ತು ಬಾಹ್ಯಾಕಾಶ ಉತ್ಸಾಹಿಗಳು - ಈ ಸಂದರ್ಭದಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.

ಈ ಸಲಹೆಗಳನ್ನು ಪ್ರಧಾನ ಮಂತ್ರಿಯವರ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿರುವ ನಮೋ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದು. ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವಿದೆ, ನಮೋ ಅಪ್ಲಿಕೇಶನ್‌ನಲ್ಲಿ ಸಲಹೆಗಳನ್ನು ಕಳುಹಿಸಬೇಕು ಎಂದು ಹೇಳಿದರು.

PM Narendra Modi
‘ಬಾಹ್ಯಾಕಾಶದಿಂದ ಭಾರತ ಇನ್ನಷ್ಟು ಭವ್ಯವಾಗಿ ಕಾಣುತ್ತಿದೆ’: ಶುಭಾಂಶು ಶುಕ್ಲಾ ಜತೆ ಪ್ರಧಾನಿ ಮೋದಿ ಮಾತುಕತೆ

ಆಕ್ಸಿಯಮ್ -4 ಕಾರ್ಯಾಚರಣೆಯಲ್ಲಿ ನಾಲ್ಕು ಗಗನಯಾತ್ರಿಗಳಲ್ಲಿ ಶುಭಾಂಶು ಶುಕ್ಲಾ ಒಬ್ಬರು, ಜೂನ್ 25 ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಉಡಾವಣೆ ಮಾಡಲಾಯಿತು. ಸುಮಾರು 20 ದಿನಗಳ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಕಳೆದ ನಂತರ, ತಂಡವು ಜುಲೈ 15 ರಂದು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಯಿತು.

ಜೂನ್ 25 ರಂದು ಉಡಾವಣೆಯಾದ ಈ ಕಾರ್ಯಾಚರಣೆಯು, ಭಾರತೀಯನೊಬ್ಬ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಪ್ರವೇಶಿಸಿ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಪ್ರಯೋಗಗಳನ್ನು ನಡೆಸಿದ ಮೊದಲ ಬಾರಿಗೆ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿತು.

ಭಾರತೀಯ ಸಂಶೋಧನಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ, ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದಿಂದ ಸಂಯೋಜಿಸಲ್ಪಟ್ಟ ಏಳು ವೈಜ್ಞಾನಿಕ ಪ್ರಯೋಗಗಳ ಫಲಿತಾಂಶಗಳೊಂದಿಗೆ ಶುಭಾಂಶು ಶುಕ್ಲಾ ಕೂಡ ಮರಳಿದರು.

ರಾಷ್ಟ್ರೀಯ ಬಾಹ್ಯಾಕಾಶ ದಿನ

ಚಂದ್ರಯಾನ-3 ಕಾರ್ಯಾಚರಣೆಯ ಐತಿಹಾಸಿಕ ಯಶಸ್ಸು ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ದೇಶದ ಬೆಳೆಯುತ್ತಿರುವ ಸಾಧನೆಗಳನ್ನು ಸ್ಮರಿಸುವ ಸಲುವಾಗಿ ಆಗಸ್ಟ್ 23 ರಂದು ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತದೆ.

ನೀವು ಇನ್​ಸ್ಪೈರ್ ಮಾನಕ್ ಅಭಿಯಾನದ ಹೆಸರನ್ನು ಕೇಳಿರಬೇಕು. ಇದು ಮಕ್ಕಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಅಭಿಯಾನವಾಗಿದೆ. ಈ ಅಭಿಯಾನದಲ್ಲಿ, ಪ್ರತಿ ಶಾಲೆಯಿಂದ ಐದು ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಮಗುವೂ ಹೊಸ ಕಲ್ಪನೆಯನ್ನು ತರುತ್ತದೆ. ಇಲ್ಲಿಯವರೆಗೆ ಲಕ್ಷಾಂತರ ಮಕ್ಕಳು ಇದರಲ್ಲಿ ಸೇರಿದ್ದಾರೆ ಮತ್ತು ಚಂದ್ರಯಾನ-3 ಕಾರ್ಯಾಚರಣೆಯ ನಂತರ, ಅವರ ಸಂಖ್ಯೆ ದ್ವಿಗುಣಗೊಂಡಿದೆ.

ಆಗಸ್ಟ್ ತಿಂಗಳ ವಿಶೇಷತೆ

1908 ರಲ್ಲಿ ಮುಜಫರ್ಪುರದಲ್ಲಿ ಒಬ್ಬ ಯುವಕನನ್ನು ಗಲ್ಲಿಗೇರಿಸಬೇಕಾಗಿತ್ತು. ಅವನು ಭಯದಿಂದಿರಲಿಲ್ಲ, ಅವನ ಮುಖದಲ್ಲಿ ಆತ್ಮವಿಶ್ವಾಸ ತುಂಬಿತ್ತು, ಅವನು ಖುದಿರಾಮ್ ಬೋಸ್, 18 ನೇ ವಯಸ್ಸಿನಲ್ಲಿ, ಅವನು ದೇಶವನ್ನೇ ನಡುಗಿಸಿದ್ದ. ಅಂತಹ ಅನೇಕ ತ್ಯಾಗಗಳ ನಂತರ, ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆಗಸ್ಟ್ ತಿಂಗಳು ಕ್ರಾಂತಿಯ ತಿಂಗಳು. ಆಗಸ್ಟ್ 15 ರಂದು, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಆಗಸ್ಟ್ 7, 1905 ರಂದು ಹೊಸ ಕ್ರಾಂತಿ ಪ್ರಾರಂಭವಾಯಿತು. ಸ್ವದೇಶಿ ಚಳುವಳಿಯು ಸ್ಥಳೀಯ ಉತ್ಪನ್ನಗಳಿಗೆ, ವಿಶೇಷವಾಗಿ ಕೈಮಗ್ಗಗಳಿಗೆ ಹೊಸ ಶಕ್ತಿಯನ್ನು ತುಂಬಿತು. ಈ ನೆನಪಿಗಾಗಿ, ದೇಶವು ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತದೆ... ಜವಳಿ ವಲಯವು ದೇಶದ ಶಕ್ತಿಯಾಗುತ್ತಿದೆ.

ಮಹಾರಾಷ್ಟ್ರದ ಪೈಥಾನ್ ಗ್ರಾಮದ ಕವಿತಾ ಧಾವಳೆ ಯಾವುದೇ ಸ್ಥಳ ಮತ್ತು ಸೌಲಭ್ಯಗಳಿಲ್ಲದ ಸಣ್ಣ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು. ಸರ್ಕಾರದ ಸಹಾಯದಿಂದ, ಅವರು ಸ್ವಯಂ ನೇಯ್ದ ಪೈಥಾನಿ ಸೀರೆಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಾರೆ... ಒಡಿಶಾದ ಮಯೂರ್‌ಭಂಜ್‌ನಲ್ಲಿ, ಬುಡಕಟ್ಟು ಮಹಿಳೆಯರು ಸಂತಾಲಿ ಸೀರೆಗಳಿಗೆ ಹೊಸ ಜೀವ ನೀಡಿದರು. ಬಿಹಾರದ ನಳಂದದ ನವೀನ್ ಕುಮಾರ್ ಅವರ ಸಾಧನೆಗಳು ಸಹ ಸ್ಪೂರ್ತಿದಾಯಕವಾಗಿವೆ.

ಭಾರತ ಒಲಿಂಪಿಕ್ಸ್ ಮತ್ತು ಒಲಿಂಪಿಯಾಡ್‌ಗಾಗಿ ಮುನ್ನಡೆಯುತ್ತಿದೆ. ಯುನೆಸ್ಕೋ ಮಹಾರಾಷ್ಟ್ರದಲ್ಲಿ 12 ಕೋಟೆಗಳನ್ನು ಗುರುತಿಸಿದೆ. ಇವು ದೇಶದ ಭವ್ಯ ಇತಿಹಾಸಕ್ಕೆ ಸಾಕ್ಷಿ. ನಾನು ಸ್ವಲ್ಪ ಸಮಯದ ಹಿಂದೆ ರಾಯಗಡಕ್ಕೆ ಹೋಗಿದ್ದೆ, ಅಲ್ಲಿನ ಕೋಟೆಗಳು ನಮ್ಮ ಸ್ವಾಭಿಮಾನವನ್ನು ಪ್ರದರ್ಶಿಸುತ್ತವೆ. ದೇಶಾದ್ಯಂತ ಅನೇಕ ಕೋಟೆಗಳಿವೆ. ಜನರು ಈ ಕೋಟೆಗಳಿಗೆ ಭೇಟಿ ನೀಡಿ ದೇಶದ ಇತಿಹಾಸ ಬಗ್ಗೆ ತಿಳಿದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ಮಹಿಳೆಯರು ಸಂತಾಲಿ ಸೀರೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ... ಜವಳಿ ವಲಯವು ನಮ್ಮ ಸಾಂಸ್ಕೃತಿಕ ಪರಂಪರೆಯಾಗಿದೆ. ದೇಶದಲ್ಲಿ 3,000 ಕ್ಕೂ ಹೆಚ್ಚು ನವೋದ್ಯಮಗಳಿವೆ. 2047 ರ ವೇಳೆಗೆ ವಿಕ್ಷಿತ್ ಭಾರತ್ ಕನಸು ಆತ್ಮನಿರ್ಭರತಕ್ಕೆ ಸಂಬಂಧಿಸಿದೆ, ಜಾನಪದ ಗೀತೆಗಳು ನಮ್ಮ ದೇಶದ ಸಂಸ್ಕೃತಿಯನ್ನು ಪ್ರದರ್ಶಿಸುತ್ತವೆ.

ನಾವು ವರ್ತಮಾನ ಮತ್ತು ಭೂತಕಾಲದ ಲಿಪಿಗಳನ್ನು ತಿಳಿದುಕೊಳ್ಳಬೇಕು, ಅವುಗಳನ್ನು ಸಂರಕ್ಷಿಸಬೇಕು. ಈ ಕೆಲಸವನ್ನು ತಮ್ಮ ಜೀವನವನ್ನಾಗಿ ಮಾಡಿಕೊಂಡ ಜನರು ಇದ್ದಾರೆ. ತಮಿಳುನಾಡಿನ ಮಣಿ ಮಾರನ್ 'ಪಂಡುಲಿಪಿ'ಯನ್ನು ಕಲಿಸುತ್ತಿದ್ದಾರೆ, ಸಂಶೋಧನೆ ನಡೆಯುತ್ತಿದೆ. ಇದನ್ನು ದೇಶಾದ್ಯಂತ ಅನುವಾದಿಸಿದರೆ, ಹಳೆಯ ಜ್ಞಾನವು ವರ್ತಮಾನ ಕಾಲದಲ್ಲಿ ಪ್ರಸ್ತುತವಾಗುತ್ತದೆ.

ಒಡಿಶಾದ ಕಿಯೋಂಜಾರ್‌ನಲ್ಲಿ ಗಮನಾರ್ಹವಾದ ಏನೋ ನಡೆಯುತ್ತಿದೆ. 'ರಾಧಾ ಕೃಷ್ಣ ಸಂಕೀರ್ತನ್' ಎಂಬ ಗುಂಪು ಇದೆ. ಭಕ್ತಿಯ ಜೊತೆಗೆ, ಈ ಗುಂಪು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಮಂತ್ರಗಳನ್ನು ಸಹ ಪಠಿಸುತ್ತದೆ. ಈ ಹೆಜ್ಜೆಯ ಹಿಂದಿನ ಸ್ಫೂರ್ತಿ ಪ್ರಮೀಳಾ ಪ್ರಧಾನ್. ಅವರ ಗುಂಪು ಅನೇಕ ಹಳ್ಳಿಗಳಿಗೆ ಭೇಟಿ ನೀಡಿ ಕಾಡ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸಿತು.

ನಾನು ಸುತ್ತಮುತ್ತಲಿನ ಪಕ್ಷಿಗಳ ಬಗ್ಗೆ ಕೇಳಿದರೆ, ನೀವು 4-5 ಜಾತಿಗಳನ್ನು ಗುರುತಿಸುತ್ತೀರಿ. ಆದರೆ ನಾವು ಸುತ್ತಮುತ್ತಲಿನ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಬೇಕು. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ, ಹುಲ್ಲುಗಾವಲು ಪಕ್ಷಿಗಳಿವೆ, 40 ಕ್ಕೂ ಹೆಚ್ಚು ಜಾತಿಗಳಿವೆ, ತಂತ್ರಜ್ಞಾನ ಸಹಾಯ ಮಾಡಿದೆ, ಜನಗಣತಿ ತಂಡವು ಧ್ವನಿಗಳನ್ನು ರೆಕಾರ್ಡ್ ಮಾಡಿದೆ, ಜಾತಿಗಳನ್ನು ಗುರುತಿಸಲು ಎಐಯನ್ನು ಬಳಸಿದೆ. ತಂತ್ರಜ್ಞಾನ ಮತ್ತು ಸೂಕ್ಷ್ಮತೆ ಒಟ್ಟಿಗೆ ಸೇರಿದಾಗ, ಎಲ್ಲವೂ ಸುಲಭವಾಗುತ್ತದೆ.

ದೇಶದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲಾಗುತ್ತಿದೆ. ಸರ್ಕಾರವು ಬೆಂಬಲ ನೀಡಲಿದೆ. ನಮ್ಮ ಯುವಕರು ಸ್ಥಳೀಯ ಉಪಕರಣಗಳೊಂದಿಗೆ ಆಟವಾಡಬೇಕು. ಅನೇಕ ನವೋದ್ಯಮಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com