'ಇದು ನಿಮ್ಮಪ್ಪಂದಾ ರೋಡು?': ರಸ್ತೆ ಮಧ್ಯೆ ಬುಡಕಟ್ಟು ರೈತನಿಗೆ ತೀವ್ರವಾಗಿ ಥಳಿಸಿದ ಬಿಜೆಪಿ ನಾಯಕಿ; Video

ಬಿಜೆಪಿಯ ಮಹಿಳಾ ನಾಯಕಿ ಜ್ಯೋತಿ ಮಹಂತ್ ಕಾರಿಗೆ ದಾರಿ ಮಾಡಿಕೊಡುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಗಲಾಟೆ ಶುರುವಾಗಿದೆ.
ಬಿಜೆಪಿ ನಾಯಕಿ ಜ್ಯೋತಿ ಮಹಂತ್
ಬಿಜೆಪಿ ನಾಯಕಿ ಜ್ಯೋತಿ ಮಹಂತ್
Updated on

ಛತ್ತೀಸ್‌ಗಢದ ಕೊರ್ಬಾದಲ್ಲಿ ಬಿಜೆಪಿಯ ಮಹಿಳಾ ನಾಯಕಿಯ ಗೂಂಡಾಗಿರಿ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ಬಿಜೆಪಿಯ ಮಹಿಳಾ ನಾಯಕಿ ಬುಡಕಟ್ಟು ರೈತನನ್ನು ರಸ್ತೆಯ ಮಧ್ಯದಲ್ಲಿಯೇ ಥಳಿಸಿದ್ದಾರೆ. ರಸ್ತೆಯ ಮಧ್ಯದಲ್ಲಿ ನಡೆದ ಜಗಳದ ನಂತರ, ಅವರು ಬುಡಕಟ್ಟು ರೈತನನ್ನು ಪೊಲೀಸ್ ಠಾಣೆಗೆ ಕರೆತಂದು ಪೊಲೀಸರ ಮುಂದೆಯೇ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಾಸ್ತವವಾಗಿ, ಬಿಜೆಪಿಯ ಮಹಿಳಾ ನಾಯಕಿ ಜ್ಯೋತಿ ಮಹಂತ್ ಕಾರಿಗೆ ದಾರಿ ಮಾಡಿಕೊಡುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಗಲಾಟೆ ಶುರುವಾಗಿದೆ. ನಂತರ ಆತನಿಗೆ ರಸ್ತೆ ಮಧ್ಯೆಯೇ ಥಳಿಸಲಾಗಿದ್ದು ನಂತರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಬುಡಕಟ್ಟು ರೈತನಿಂದ 4 ಸಾವಿರ ರೂಪಾಯಿಯನ್ನು ಕಿತ್ತುಕೊಳ್ಳಲಾಗಿದೆ. ರೈತನನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಘಟನೆ ಕುರಿತಂತೆ ಸ್ಥಳೀಯ ಶಾಸಕಿ ಫೂಲ್ ಸಿಂಗ್ ರಥಿಯಾ ಅಸಮಾಧಾನ ವ್ಯಕ್ತಪಡಿಸಿದ್ದು ಎಸ್‌ಪಿಗೆ ಪತ್ರ ಬರೆದು ಬಿಜೆಪಿ ನಾಯಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬಂಕಿ ಮೊಗ್ರಾ ಪೊಲೀಸ್ ಠಾಣೆ ಆವರಣದಲ್ಲಿ ಬುಡಕಟ್ಟು ರೈತ ಬಲ್ವಾನ್ ಸಿಂಗ್ ಕನ್ವರ್ ಅವರನ್ನು ಜ್ಯೋತಿ ಮಹಂತ್ ನಿಂದಿಸಿ, ತೀವ್ರವಾಗಿ ಥಳಿಸಿದ್ದಾರೆ ಎಂದು ಅವರು ಬರೆದಿದ್ದಾರೆ. ಕೊರ್ಬಾ ಜಿಲ್ಲೆ ಬುಡಕಟ್ಟು ಪ್ರಾಬಲ್ಯದ ಪ್ರದೇಶ ಎಂದು ಪತ್ರದಲ್ಲಿ ಬರೆಯಲಾಗಿದೆ. ಇದರಲ್ಲಿ ಬಿಜೆಪಿ ನಾಯಕಿ ಜ್ಯೋತಿ ಮಹಂತ್ ತನ್ನ ಸಹಚರರೊಂದಿಗೆ ಬಂಕಿ ಮೊಂಗ್ರಾ ಬನಾ ಆವರಣದಲ್ಲಿ ಬುಡಕಟ್ಟು ರೈತನನ್ನು ನಿಂದಿಸಿ ಥಳಿಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಬಿಜೆಪಿ ನಾಯಕಿ ಜ್ಯೋತಿ ಮಹಂತ್
ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂದು ಮತದಾರರು ನಿರ್ಧರಿಸುತ್ತಾರೆ: ವಿಧಾನಸಭೆ ಅಖಾಡಕ್ಕಿಳಿದ ಚಿರಾಗ್ ಪಾಸ್ವಾನ್ ಘೋಷಣೆ!

ಪತ್ರದಲ್ಲಿ ಈ ಘಟನೆ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಪೊಲೀಸ್ ಆಡಳಿತದ ಸಮ್ಮುಖದಲ್ಲಿ ಬುಡಕಟ್ಟು ರೈತನೊಂದಿಗೆ ನಡೆದ ಇಂತಹ ಘಟನೆಯಿಂದ ನನಗೆ ನೋವಾಗಿದೆ. ನಾನು ಕೂಡ ಬುಡಕಟ್ಟು ಶಾಸಕಿ. ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com