AAP ಪಕ್ಷ ಸಂಘಟನೆಯಲ್ಲಿ ಭಾರಿ ಬದಲಾವಣೆ: ಪಂಜಾಬ್ ಗೆ ಮನೀಶ್ ಸಿಸೋಡಿಯಾ ನೇತೃತ್ವ; ದೆಹಲಿ ಮುಖ್ಯಸ್ಥರು ಯಾರು?

ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಪಂಜಾಬ್‌ನ ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ ಪ್ರಮುಖ ಸಾಂಸ್ಥಿಕ ಪುನರ್ರಚನೆಯನ್ನು ಘೋಷಿಸಿದೆ.
A collage of AAP leaders Saurabh Bharadwaj (L) and Manish Sisodia (R).
ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್, ಮನೀಷ್ ಸಿಸೋಡಿಯಾonline desk
Updated on

ನವದೆಹಲಿ: ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ತನ್ನ ತವರು ಕ್ಷೇತ್ರವನ್ನು ಕಳೆದುಕೊಂಡ ನಂತರ, ಆಮ್ ಆದ್ಮಿ ಪಕ್ಷ ಶುಕ್ರವಾರ ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ.

ಪಂಜಾಬ್ ಘಟಕಕ್ಕೆ ನೂತನ ಸಾರಥಿಯನ್ನು ಆಮ್ ಆದ್ಮಿ ಪಕ್ಷ ಘೋಷಣೆ ಮಾಡಿದೆ. ಮಾಜಿ ಸಚಿವ ಸೌರಭ್ ಭಾರದ್ವಾಜ್ ಅವರನ್ನು ತನ್ನ ದೆಹಲಿ ಘಟಕದ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಪಂಜಾಬ್‌ನ ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ ಪ್ರಮುಖ ಸಾಂಸ್ಥಿಕ ಪುನರ್ರಚನೆಯನ್ನು ಘೋಷಿಸಿದೆ.

ಗೋಪಾಲ್ ರೈ ಸ್ಥಾನಕ್ಕೆ ಸೌರಭ್ ಭಾರದ್ವಾಜ್ ನೇಮಕಗೊಂಡಿದ್ದಾರೆ. ಸಿಸೋಡಿಯಾ ಪಂಜಾಬ್‌ನ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದು ಆಮ್ ಆದ್ಮಿ ಪಕ್ಷ (ಎಎಪಿ) ಪ್ರಸ್ತುತ ಅಧಿಕಾರದಲ್ಲಿರುವ ದೇಶದ ಏಕೈಕ ರಾಜ್ಯವಾಗಿದೆ.

ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಹೊಸ ಜವಾಬ್ದಾರಿಗಳನ್ನು ಸ್ವೀಕರಿಸಿದ ನಾಯಕರಿಗೆ ಕೇಜ್ರಿವಾಲ್, ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಅಭಿನಂದನೆ ಸಲ್ಲಿಸಿದರು. ಪಿಎಸಿ ಸಭೆಯ ನಂತರ ಎಎಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್ ಪಾಠಕ್, ಗೋಪಾಲ್ ರೈ ಈಗ ಗುಜರಾತ್‌ನ ಉಸ್ತುವಾರಿ ವಹಿಸಲಿದ್ದಾರೆ ಎಂದು ಹೇಳಿದರು, ಅಲ್ಲಿ ಪಕ್ಷ ತನ್ನ ನೆಲೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

A collage of AAP leaders Saurabh Bharadwaj (L) and Manish Sisodia (R).
ಪಂಜಾಬ್‌ನಲ್ಲಿ ಯೋಗಿ ಮಾಡೆಲ್: Drug Mafia ವಿರುದ್ಧ AAP ಸಮರ; ಡ್ರಗ್ ಪೆಡ್ಲರ್‌ಗಳ ಮನೆ ಮೇಲೆ ಬುಲ್ಡೋಜರ್ ಕ್ರಮ!

ರಾಜ್ಯಸಭಾ ಸಂಸದ ಪಾಠಕ್ ಅವರನ್ನು ಎಎಪಿಯ ಛತ್ತೀಸ್‌ಗಢ ಘಟಕದ ಉಸ್ತುವಾರಿಯಾಗಿ ನೇಮಿಸಲಾಗಿದ್ದು, ಪಂಕಜ್ ಗುಪ್ತಾ ಪಕ್ಷದ ಗೋವಾ ರಾಜ್ಯವನ್ನು ಮುನ್ನಡೆಸಲಿದ್ದಾರೆ. ಪಂಜಾಬ್, ಗುಜರಾತ್ ಮತ್ತು ಗೋವಾದಲ್ಲಿ ಎರಡು ವರ್ಷಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಪಕ್ಷದ ಜಮ್ಮು ಮತ್ತು ಕಾಶ್ಮೀರ ಘಟಕದ ಹೊಸ ಮುಖ್ಯಸ್ಥರನ್ನಾಗಿ ಮೆಹ್ರಾಜ್ ಮಲಿಕ್ ಅವರನ್ನು ನೇಮಿಸಲಾಗಿದೆ. ಪಂಜಾಬ್‌ಗೆ ಸತ್ಯೇಂದರ್ ಜೈನ್, ಗುಜರಾತ್‌ಗೆ ದುರ್ಗೇಶ್ ಪಾಠಕ್ ಮತ್ತು ಗೋವಾಕ್ಕೆ ಅಂಕುಶ್ ನಾರಂಗ್, ಅಭಾಷ್ ಚಾಂಡೇಲಾ ಮತ್ತು ದೀಪಕ್ ಸಿಂಘ್ಲಾ ಸೇರಿದಂತೆ ರಾಜ್ಯ ಘಟಕಗಳಿಗೆ ಪಕ್ಷ ಸಹ-ಪ್ರಭಾರಿಗಳನ್ನು ನೇಮಿಸಿದೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಎಎಪಿ ಸುಮಾರು 43.5 ಪ್ರತಿಶತದಷ್ಟು ಮತಗಳನ್ನು ಪಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com