ಭಾರತದ ಹೆಮ್ಮೆಯ ನಾಗರಿಕನಾಗಿ Op Sindoor ಬಗ್ಗೆ ಹೇಳಿಕೆ ನೀಡಿದ್ದೇನೆ, ನಾನು ಕಾಂಗ್ರೆಸ್ ವಕ್ತಾರನಲ್ಲ: Shashi Tharoor

ಕೆಲವು ವಿಷಯಗಳ ಬಗ್ಗೆ ನನಗೆ ಜ್ಞಾನವಿದೆ ಎಂದು ಜನರು ಭಾವಿಸುವಂತೆ ತೋರುತ್ತದೆ. ಆದ್ದರಿಂದ ಅವರು ಬಂದು ನನ್ನ ಅಭಿಪ್ರಾಯಗಳನ್ನು ಕೇಳುತ್ತಾರೆ. ಮತ್ತು ನಾನು ಭಾರತೀಯನಾಗಿ, ಹೆಮ್ಮೆಯ ನಾಗರಿಕನಾಗಿ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಶಶಿ ತರೂರ್ ಹೇಳಿದ್ದಾರೆ.
Shashi Tharoor- Mallikarjuna Kharge
ಶಶಿ ತರೂರ್- ಮಲ್ಲಿಕಾರ್ಜುನ ಖರ್ಗೆonline desk
Updated on

ನವದೆಹಲಿ: ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ತಮ್ಮ ಹೇಳಿಕೆಗಳನ್ನು "ಭಾರತೀಯ ಮತ್ತು ಹೆಮ್ಮೆಯ ನಾಗರಿಕ" ಎಂದು ವೈಯಕ್ತಿಕವಾಗಿ ಹೇಳಲಾಗಿದ್ದು, ಪಕ್ಷದ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳದ ತಿರುವನಂತಪುರಂನ ಲೋಕಸಭಾ ಸಂಸದ, ಸಂಘರ್ಷದ ಕುರಿತು ಪದೇ ಪದೇ ಹೇಳಿಕೆ ನೀಡುವ ಮೂಲಕ ಶಶಿ ತರೂರ್ ಪಕ್ಷದ ಲಕ್ಷ್ಮಣ ರೇಖೆ ದಾಟಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಒಂದು ವರ್ಗ ಭಾವಿಸಿದೆ ಎಂಬ ವರದಿಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

"ಕೆಲವು ವಿಷಯಗಳ ಬಗ್ಗೆ ನನಗೆ ಜ್ಞಾನವಿದೆ ಎಂದು ಜನರು ಭಾವಿಸುವಂತೆ ತೋರುತ್ತದೆ. ಆದ್ದರಿಂದ ಅವರು ಬಂದು ನನ್ನ ಅಭಿಪ್ರಾಯಗಳನ್ನು ಕೇಳುತ್ತಾರೆ. ಮತ್ತು ನಾನು ಭಾರತೀಯನಾಗಿ, ಹೆಮ್ಮೆಯ ನಾಗರಿಕನಾಗಿ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಕೆಲವೊಮ್ಮೆ ಸ್ಪಷ್ಟವಾಗಿ ಮತ್ತು ಕೆಲವೊಮ್ಮೆ ಸೂಚ್ಯವಾಗಿ ಹೇಳುತ್ತೇನೆ" ಎಂದು ತರೂರ್ ವರದಿಗಾರರಿಗೆ ತಿಳಿಸಿದರು.

ಕೆಲವು ಕಾಂಗ್ರೆಸ್ ನಾಯಕರು, ಶಶಿ ತರೂರ್ ತಮ್ಮ ಮಿತಿಗಳನ್ನು ಮೀರಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಕೇಳಿದಾಗ, ಪ್ರತಿಕ್ರಿಯೆ ನೀಡಿದ ಅವರು, "ಇದು ಎಲ್ಲಿಂದ ಬರುತ್ತದೆ ಎಂದು ನನಗೆ ತಿಳಿದಿಲ್ಲ. ನಾನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಯ ಗೌಪ್ಯ ಸಭೆಯಲ್ಲಿದ್ದೆ. ಸಂಜೆ 4.30 ಕ್ಕೆ ಪ್ರಾರಂಭವಾದ ಸಭೆಗೆ ನಾನು ಸಂಜೆ 6.35 ರವರೆಗೆ ಅಲ್ಲಿದ್ದೆ. ಮತ್ತು ಆ ಸಮಯದಲ್ಲಿ, ಇವುಗಳಲ್ಲಿ ಯಾವುದನ್ನೂ ಉಲ್ಲೇಖಿಸಲಾಗಿಲ್ಲ ಮತ್ತು ನನ್ನ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ನಾನು ಹೇಳಲೇಬೇಕು. ನಂತರ ಏನಾದರೂ ಸಂಭವಿಸಿದಲ್ಲಿ, ಅದರ ಬಗ್ಗೆ ನನಗೆ ಇನ್ನೂ ತಿಳಿಸಲಾಗಿಲ್ಲ. ಆದ್ದರಿಂದ ನನಗೆ ತಿಳಿಸಿದಾಗ, ನಾನು ಅದಕ್ಕೆ ಪ್ರತಿಕ್ರಿಯಿಸುತ್ತೇನೆ" ಎಂದು ಹೇಳಿದ್ದಾರೆ.

Shashi Tharoor- Mallikarjuna Kharge
Op Sindoor: ಮೋದಿ, ಕೇಂದ್ರ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ Shashi Tharoor ವಿರುದ್ಧ ಕಾಂಗ್ರೆಸ್ ಕೆಂಗಣ್ಣು!

"ನನಗೆ ಯಾವುದೇ ರೀತಿಯ ಅಧಿಕೃತ ಸಂವಹನ ಬಂದಿಲ್ಲ. ನಾನು ಭಾಗವಾಗಿದ್ದ ಸಭೆಯಲ್ಲಿ ನಡೆಯದ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲ." ಎಂದು ಶಶಿ ತರೂರ್ ತಿಳಿಸಿದ್ದಾರೆ.

ಬುಧವಾರ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ, ಕೆಲವು ನಾಯಕರು, ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಪದೇ ಪದೇ ಹೇಳಿಕೆ ನೀಡುವ ಮೂಲಕ ಶಶಿ ತರೂರ್ "ಲಕ್ಷ್ಮಣ ರೇಖೆ"ಯನ್ನು ದಾಟಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂಬ ವರದಿಗಳಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com