ಧಾರ್ಮಿಕ ಉದ್ದೇಶಕ್ಕಾಗಿ ದಾನ ಇರುವುದು ಇಸ್ಲಾಮ್ ನಲ್ಲಿ ಮಾತ್ರವೇ? ಹಿಂದೂ ಧರ್ಮದಲ್ಲಿಲ್ಲವೇ?: ವಕ್ಫ್ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ವಾದದ ಅಂತ್ಯದ ವೇಳೆಗೆ ಅರ್ಜಿದಾರರು ವಕ್ಫ್ ತಿದ್ದುಪಡಿ ಕಾಯ್ದೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
Supreme court
ಸುಪ್ರೀಂ ಕೋರ್ಟ್ online desk
Updated on

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನಲ್ಲಿ ಹಲವು ಗಮನಾರ್ಹ ಸಂಗತಿಗಳ ಕುರಿತು ವಾದ ನಡೆಯಿತು.

ದತ್ತಿ ದೇಣಿಗೆಯನ್ನು ಇಸ್ಲಾಮ್ ಬೇರೆಯಾಗಿಸಬೇಕೆ? ಅಥವಾ ಆಧ್ಯಾತ್ಮಿಕ ಲಾಭಕ್ಕಾಗಿ, ದೇವರಿಗೆ ಸಮರ್ಪಣೆ ಮಾಡಿರುವ, ಧರ್ಮದ ಅವಿಭಾಜ್ಯ ಅಂಗವಾಗಿಸಬೇಕೇ? ಎಂಬುದು ವಾದದ ಪ್ರಮುಖಾಂಶವಾಗಿತ್ತು. ವಾದದ ಅಂತ್ಯದ ವೇಳೆಗೆ ಅರ್ಜಿದಾರರು ವಕ್ಫ್ ತಿದ್ದುಪಡಿ ಕಾಯ್ದೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.

'ವಕ್ಫ್' ಇಸ್ಲಾಮಿಕ್ ಪರಿಕಲ್ಪನೆಯಾಗಿದ್ದರೂ, ಅದು ಧರ್ಮದ ಅತ್ಯಗತ್ಯ ಭಾಗವಲ್ಲ ಮತ್ತು ಆದ್ದರಿಂದ ಮೂಲಭೂತ ಹಕ್ಕಲ್ಲ ಎಂಬ ಸರ್ಕಾರದ ವಾದಕ್ಕೆ ಬುಧವಾರ ಪ್ರತಿಕ್ರಿಯಿಸಿದ ಹಿರಿಯ ವಕೀಲ, ಅರ್ಜಿದಾರರ ಪರ ವಾದಿಸುತ್ತಿರುವ ಕಪಿಲ್ ಸಿಬಲ್, "ವಕ್ಫ್ ದೇವರಿಗೆ ಸಮರ್ಪಣೆ... ಮರಣಾನಂತರದ ಜೀವನಕ್ಕಾಗಿ. ಇತರ ಧರ್ಮಗಳಿಗಿಂತ ಭಿನ್ನವಾಗಿದ್ದು, ವಕ್ಫ್ ದೇವರಿಗೆ ನೀಡಿದ ದಾನವಾಗುತ್ತದೆ." ಎಂದು ಹೇಳಿದರು.

ಆದಾಗ್ಯೂ, 'ಧಾರ್ಮಿಕ ದಾನ' ಇಸ್ಲಾಂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ನ್ಯಾಯಾಲಯ ಗಮನಸೆಳೆದಿದೆ; ಹಿಂದೂ ಧರ್ಮದಲ್ಲಿ 'ಮೋಕ್ಷ' ಎಂಬುದಿದೆ" ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದರು. "ದಾನವು ಇತರ ಧರ್ಮಗಳ ಮೂಲಭೂತ ಪರಿಕಲ್ಪನೆಯೂ ಆಗಿದೆ"ಎಂದು ಸಿಜೆಐ ಹೇಳಿದ್ದಾರೆ.

Supreme court
ಸರ್ಕಾರಕ್ಕೆ ಅಕ್ರಮ ವಕ್ಫ್ ಆಸ್ತಿಗಳನ್ನು ಮರಳಿ ಪಡೆಯಲು ಅಧಿಕಾರವಿದೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ

ಪೀಠದ ಎರಡನೇ ನ್ಯಾಯಾಧೀಶರಾದ ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರು ಕ್ರಿಶ್ಚಿಯನ್ ಧರ್ಮದಲ್ಲಿ ಇದೇ ರೀತಿಯ ನಿಬಂಧನೆಯನ್ನು ಉಲ್ಲೇಖಿಸಿ, "ನಾವೆಲ್ಲರೂ 'ಸ್ವರ್ಗ'ಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಅರ್ಜಿದಾರರ ವಾದಗಳ ಕೊನೆಯಲ್ಲಿ - ಇದರ ಮೇಲೆ, ವಿಚಾರಣೆಯ ಮೂರನೇ ದಿನ - ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ವಿವಾದಾತ್ಮಕ ಶಾಸನವನ್ನು ಮಧ್ಯಂತರವಾಗಿ ಸ್ಥಗಿತಗೊಳಿಸುವ ಮನವಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com