ತಜಕಿಸ್ತಾನ ವಾಯುನೆಲೆಯಿಂದ ಭಾರತ ನಿರ್ಗಮನ: 'ದೇಶದ ರಾಜತಾಂತ್ರಿಕತೆ'ಗೆ ಮತ್ತೊಂದು ಹಿನ್ನಡೆ; ಕಾಂಗ್ರೆಸ್ ಕಿಡಿ!

ಭಾರತವು ಅಯ್ನಿಯಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಪ್ರಮುಖ ಯೋಜನೆಗಳನ್ನು ಹೊಂದಿತ್ತು. "ಆದರೆ ನಾಲ್ಕು ವರ್ಷಗಳ ಹಿಂದೆ ಭಾರತವು ಕ್ರಮೇಣ ಹಿಂತೆಗೆದುಕೊಳ್ಳಬೇಕು ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಗಿತ್ತು.
Casual images
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ತಜಕಿಸ್ತಾನದ ಅಯ್ನಿ ವಾಯುನೆಲೆಯಲ್ಲಿ ಭಾರತ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದು ದೇಶದ ಕಾರ್ಯತಂತ್ರದ ರಾಜತಾಂತ್ರಿಕತೆಗೆ ಆದ "ಮತ್ತೊಂದು ಹಿನ್ನಡೆ" ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2000 ರ ದಶಕದ ಆರಂಭದಲ್ಲಿ ತಜಕಿಸ್ತಾನ್‌ನಲ್ಲಿ ಭಾರತವು ತನ್ನ ಅಯ್ನಿ ವಾಯುಪಡೆಯ ನೆಲೆಯನ್ನು ಸ್ಥಾಪಿಸಿ, ಅಲ್ಲಿ ಮೂಲಸೌಕರ್ಯವನ್ನು ವಿಸ್ತರಿಸಲಾಗಿತ್ತು.

ಭಾರತವು ಅಯ್ನಿಯಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಪ್ರಮುಖ ಯೋಜನೆಗಳನ್ನು ಹೊಂದಿತ್ತು. "ಆದರೆ ನಾಲ್ಕು ವರ್ಷಗಳ ಹಿಂದೆ ಭಾರತವು ಕ್ರಮೇಣ ಹಿಂತೆಗೆದುಕೊಳ್ಳಬೇಕು ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಗಿತ್ತು.

ಈಗ ಭಾರತವು ತನ್ನ ಏಕೈಕ ಸಾಗರೋತ್ತರ ಮಿಲಿಟರಿ ಸೌಲಭ್ಯವನ್ನು ಅಂತಿಮವಾಗಿ ಮುಚ್ಚಿದೆ ಎಂದು ತೋರುತ್ತಿದೆ. ಇದು ನಿಸ್ಸಂಶವಾಗಿ, ನಮ್ಮ ಕಾರ್ಯತಂತ್ರದ ರಾಜತಾಂತ್ರಿಕತೆಗೆ ಮತ್ತೊಂದು ಹಿನ್ನಡೆಯಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಅಯ್ನಿ ವಾಯುನೆಲೆ ತಜಕಿಸ್ತಾನದ ರಾಜಧಾನಿ ದುಶಾನ್ಬೆಯಿಂದ ಸುಮಾರು 10 ಕಿಮೀ ದೂರದಲ್ಲಿದ್ದು, ಅದ್ಭುತವಾದ ವಸ್ತುಸಂಗ್ರಹಾಲಯವನ್ನು ಹೊಂದಿದೆ. 1,500 ವರ್ಷಗಳಷ್ಟು ಹಳೆಯದು ಎಂದು ನಂಬಲಾದ ಬುದ್ಧನ ನಿರ್ವಾಹಣದ ಅತ್ಯಂತ ಗಮನಾರ್ಹವಾದ ಪ್ರದರ್ಶನಗಳಲ್ಲಿ ಒಂದಾಗಿದೆ.

ದ್ವಿಪಕ್ಷೀಯ ಒಪ್ಪಂದದ ಕೊರತೆಯ ನಂತರ ಭಾರತವು ತಜಕಿಸ್ತಾನದ ಅಯ್ನಿಯಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದು ತಿಳಿದುಬಂದಿದೆ ಎಂದು ಜೈರಾಮ್ ರಮೇಶ್ ಬರೆದುಕೊಂಡಿದ್ದಾರೆ.

Casual images
ಬಾಗ್ರಾಮ್ ಜೂಜು: ಅಮೆರಿಕದ ಅಪಾಯಕಾರಿ ಪುನರಾಗಮನ (ಜಾಗತಿಕ ಜಗಲಿ)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com