ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಪುನಃಸ್ಥಾಪನೆಗೆ ಸೂಕ್ತ ಸಮಯ ಯಾವಾಗ?' ಕೇಂದ್ರಕ್ಕೆ ಸಿಎಂ ಒಮರ್

ರಾಜ್ಯತ್ವದ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸಬಾರದು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ನೀಡಿದ ಹೇಳಿಕೆಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.
Omar abdullah- Narendra Modi
ಒಮರ್ ಅಬ್ದುಲ್ಲಾ- ನರೇಂದ್ರ ಮೋದಿonline desk
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೇಂದ್ರ ಸರ್ಕಾರಕ್ಕೆ ಕಣಿವೆ ರಾಜ್ಯದ ಸ್ಥಾನಮಾನವನ್ನು ಯಾವಾಗ ಪುನಃಸ್ಥಾಪಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.

ಶ್ರೀನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಒಮರ್, ರಾಜ್ಯತ್ವದ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸಬಾರದು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ನೀಡಿದ ಹೇಳಿಕೆಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.

"ಅವರು ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರ ಜನರಿಗೆ ನೀಡಿದ ಭರವಸೆಗಳ ಬಗ್ಗೆ ಮಾತನಾಡಬೇಕು. ಅವರು ರಾಜ್ಯತ್ವದ ಬಗ್ಗೆ ಏಕೆ ಹೆದರುತ್ತಾರೆ? ಅವರು ಅಧಿಕಾರವನ್ನು ಏಕೆ ತ್ಯಜಿಸಲು ಬಯಸುವುದಿಲ್ಲ? ಕಾಶ್ಮೀರ ಜನರಿಗೆ ಭರವಸೆ ನೀಡಲಾಗಿದೆ ಮತ್ತು ಅವರು ಆ ಆಧಾರದ ಮೇಲೆ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೆ, ರಾಜ್ಯತ್ವದ ಭರವಸೆಯನ್ನು ಏಕೆ ಈಡೇರಿಸಲಾಗಿಲ್ಲ?" ಎಂದು ಪ್ರಶ್ನಿಸಿದರು.

Omar abdullah- Narendra Modi
"ಗಾಂಧಿ ಕೊಂದವರನ್ನು ನೀವು ಸಂಭ್ರಮಿಸುತ್ತೀರಾ...": ಹುತಾತ್ಮರ ದಿನ ಆಚರಿಸದಂತೆ ತಡೆ ಬಗ್ಗೆ ಒಮರ್ ಅಬ್ದುಲ್ಲಾ ಆಕ್ರೋಶ; Video

ಶ್ರೀನಗರದಲ್ಲಿ ಕೇಂದ್ರಾಡಳಿತ ಪ್ರದೇಶದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರು, ಕೇಂದ್ರ ಸರ್ಕಾರವು "ಸೂಕ್ತ ಸಮಯದಲ್ಲಿ" ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುತ್ತದೆ ಎಂದು ಪುನರುಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com