ದೆಹಲಿ ಸ್ಫೋಟದ ನಂತರ ಅಮಿತ್ ಶಾ ಗುಜರಾತ್ ಭೇಟಿ ರದ್ದು

ಅಮಿತ್ ಶಾ ಅವರು ನಾಳೆ ಗುಜರಾತ್ ಗೆ ತೆರಳಬೇಕಿತ್ತು. ಆದರೆ ಇಂದು ಅವರ ಗುಜರಾತ್ ಭೇಟಿ ರದ್ದಾಗಿದೆ.
Amit Shah
ಆಸ್ಪತ್ರೆಯಲ್ಲಿ ಅಮಿತ್ ಶಾ
Updated on

ಅಹಮದಾಬಾದ್: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗುಜರಾತ್ ಭೇಟಿ ರದ್ದಾಗಿದೆ ಎಂದು ಬಿಜೆಪಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಮಿತ್ ಶಾ ಅವರು ನಾಳೆ ಗುಜರಾತ್ ಗೆ ತೆರಳಬೇಕಿತ್ತು. ಆದರೆ ಇಂದು ಅವರ ಗುಜರಾತ್ ಭೇಟಿ ರದ್ದಾಗಿದ್ದು, ರದ್ದತಿಗೆ ಯಾವುದೇ ಅಧಿಕೃತ ಕಾರಣ ನೀಡಲಾಗಿಲ್ಲವಾದರೂ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರು ಸ್ಫೋಟದ ನಂತರ ಕೇಂದ್ರ ಗೃಹ ಸಚಿವರು ಆ ವಿಚಾರದಲ್ಲಿ ಹೆಚ್ಚು ಕಾರ್ಯನಿರತರಾಗಿದ್ದಾರೆ ಎಂದು ನಂಬಲಾಗಿದೆ.

ನವೆಂಬರ್ 13 ರಂದು ಸಬರಮತಿ ನದಿ ಮುಂಭಾಗದ ಈವೆಂಟ್ ಸೆಂಟರ್‌ನಲ್ಲಿ ಅಹಮದಾಬಾದ್ ಆಹಾರ ಉತ್ಸವ ಮತ್ತು ಅಹಮದಾಬಾದ್ ಅಂತರರಾಷ್ಟ್ರೀಯ ಪುಸ್ತಕ ಉತ್ಸವ 2025 ಅನ್ನು ಅಮಿತ್ ಶಾ ಅವರು ಉದ್ಘಾಟಿಸಬೇಕಾಗಿತ್ತು. ಮೆಹ್ಸಾನಾದ ಬೋರಿಯಾವಿಯಲ್ಲಿರುವ ದೂಧ್‌ಸಾಗರ್ ಡೈರಿಯಲ್ಲಿ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರನ್ನು ಆಹ್ವಾನಿಸಲಾಗಿತ್ತು ಎಂದು ಗಾಂಧಿನಗರ ಲೋಕಸಭಾ ವಕ್ತಾರ ಮತ್ತು ಬಿಜೆಪಿ ನಾಯಕ ಬಿಮಲ್ ಜೋಶಿ ತಿಳಿಸಿದ್ದಾರೆ.

Amit Shah
Delhi Blast: ದೇಹದ ಮಾದರಿ ಮ್ಯಾಚ್ ಮಾಡುವಂತೆ ವಿಧಿವಿಜ್ಞಾನ ತಜ್ಞರಿಗೆ ಅಮಿತ್ ಶಾ ಸೂಚನೆ

"ಅಹಮದಾಬಾದ್ ಮತ್ತು ಮೆಹ್ಸಾನಾಗೆ ಅಮಿತ್ ಶಾ ಅವರ ಭೇಟಿ ರದ್ದಾಗಿದೆ. ಕೇಂದ್ರ ಸಚಿವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬೋರಿಯಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ" ಎಂದು ಜೋಶಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com