ಪಶ್ಚಿಮ ಬಂಗಾಳದ ರಾಜಭವನದಲ್ಲಿ ಶಸ್ತ್ರಾಸ್ತ್ರ ದಾಸ್ತಾನಿದೆ: ಟಿಎಂಸಿ ಸಂಸದನ ಆರೋಪಕ್ಕೆ ರಾಜ್ಯಪಾಲರ ಎಚ್ಚರಿಕೆ

ಪಶ್ಚಿಮ ಬಂಗಾಳದ ರಾಜಭವನದಲ್ಲಿ ಶಸ್ತ್ರಾಸ್ತ್ರ ದಾಸ್ತಾನಿದೆ ಎಂಬ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಆರೋಪಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ತಮ್ಮ ಹೇಳಿಕೆಗೆ ಟಿಎಂಸಿ ಸಂಸದ ಕ್ಷಮೆಯಾಚಿಸಬೇಕು
CV Ananda Bose-Kalyan Banerjee
ಸಿವಿ ಆನಂದ್ ಬೋಸ್-ಕಲ್ಯಾಣ್ ಬ್ಯಾನರ್ಜಿ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಭವನದಲ್ಲಿ ಶಸ್ತ್ರಾಸ್ತ್ರ ದಾಸ್ತಾನಿದೆ ಎಂಬ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಆರೋಪಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ತಮ್ಮ ಹೇಳಿಕೆಗೆ ಟಿಎಂಸಿ ಸಂಸದ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಾಜ್ಯಪಾಲರು ಎಚ್ಚರಿಸಿದ್ದಾರೆ.

ಈ ಆರೋಪಗಳು ಗಂಭೀರ ಪರಿಣಾಮಗಳನ್ನು ಬೀರಬಹುದು. ಆಡಳಿತ ಪಕ್ಷದ ಸಂಸದರು ರಾಜಭವನದಲ್ಲಿ ಶಸ್ತ್ರಾಸ್ತ್ರಗಳು ಲಭ್ಯವಿದೆ ಎಂದು ಹೇಳಿದ್ದು ಅವರಿಗೆ ತಮ್ಮದೇ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದರ್ಥವೇ? ಇದರ ಹಿಂದೆ ಏನಾದರೂ ಆಂತರಿಕ ರಾಜಕೀಯ ವಿರೋಧವಿದೆಯೇ?" ರಾಜ್ಯಪಾಲರು ಹೇಳಿದ್ದಾರೆ. ರಾಜಭವನದಲ್ಲಿ ಶಸ್ತ್ರಾಸ್ತ್ರಗಳನ್ನು ಹುಡುಕುವುದು ಕತ್ತಲೆಯ ಕೋಣೆಯಲ್ಲಿ ಕಪ್ಪು ಬೆಕ್ಕನ್ನು ಹುಡುಕುವ ಕುರುಡನಂತೆ, ಅದು ಅಲ್ಲಿಲ್ಲ. ರಾಜಭವನ ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದು ರಾಜ್ಯಪಾಲರು ಹೇಳಿದರು. ಬೆಳಿಗ್ಗೆ 5 ಗಂಟೆಯಿಂದ ಸಾರ್ವಜನಿಕರು, ನಾಗರಿಕ ಸಮಾಜದ ಸದಸ್ಯರು ಮತ್ತು ಮಾಧ್ಯಮ ಸಿಬ್ಬಂದಿ ರಾಜಭವನದಲ್ಲಿ ಶಸ್ತ್ರಾಸ್ತ್ರಗಳಿವೆಯೇ ಎಂದು ನೋಡಲು ರಾಜಭವನಕ್ಕೆ ಬರಬಹುದು ಎಂದು ಅವರು ಹೇಳಿದರು.

ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮಾಡಿರುವ ಆರೋಪಗಳ ಕುರಿತು ಕಾನೂನು ಅಭಿಪ್ರಾಯ ಕೇಳಿರುವುದಾಗಿ ಆನಂದ ಬೋಸ್ ಹೇಳಿದ್ದಾರೆ. ಟಿಎಂಸಿ ಸಂಸದರ ಹೇಳಿಕೆಯನ್ನು ಖಂಡಿಸಿ ಶೇಕ್ಸ್‌ಪಿಯರ್ ಕವಿತೆಯ ಒಂದು ಭಾಗವನ್ನು ಅವರು ಓದಿದರು. ಇದು ಮೂರ್ಖ ಹೇಳಿದ, ಧ್ವನಿ ಮತ್ತು ಕೋಪದಿಂದ ತುಂಬಿದ, ಅರ್ಥಹೀನ ಕಥೆ ಎಂದು ಹೇಳಿದರು. ಬೆಳಿಗ್ಗೆ 5 ಗಂಟೆಯಿಂದ ರಾಜಭವನದ ಬಾಗಿಲುಗಳು ತೆರೆದಿವೆ. ಬ್ಯಾನರ್ಜಿ ಅವರು ಎತ್ತಿರುವ ವಿಷಯಗಳ ಪುರಾವೆಗಳನ್ನು ಸಂಗ್ರಹಿಸಲು ಆವರಣವನ್ನು ಪರಿಶೀಲಿಸಲು ಕಾಯುತ್ತಿದ್ದೇನೆ ಎಂದು ರಾಜ್ಯಪಾಲರು ಹೇಳಿದರು. ಅವರು ಹೇಳಿದ್ದನ್ನು ಸಾಬೀತುಪಡಿಸಲು ವಿಫಲವಾದರೆ, ಅವರ ವಿರುದ್ಧ ಕಾನೂನು ಕ್ರಮ ಏಕೆ ಪ್ರಾರಂಭಿಸಬಾರದು?" ಟಿಎಂಸಿ ಸಂಸದರು ಗಂಭೀರ ಆರೋಪಗಳನ್ನು ಮಾಡಿರುವುದರಿಂದ, ಈ ವಿಷಯದಲ್ಲಿ ರಾಜ್ಯಪಾಲರು ಲೋಕಸಭಾ ಸ್ಪೀಕರ್‌ಗೆ ಸಹ ಪತ್ರ ಬರೆಯಲಿದ್ದಾರೆ ಎಂದು ರಾಜಭವನ ಹೇಳಿಕೆಯಲ್ಲಿ ತಿಳಿಸಿದೆ.

CV Ananda Bose-Kalyan Banerjee
ದೆಹಲಿ ಸ್ಫೋಟಕ್ಕೆ 'Mother of Satan' ಬಾಂಬ್ ಬಳಕೆ ಸಾಧ್ಯತೆ: ಇದು ಎಷ್ಟು 'ವಿನಾಶಕಾರಿ' ತನಿಖಾಧಿಕಾರಿಗಳು ಹೇಳಿದ್ದೇನು?

ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜ್ಯಪಾಲ ಸಿವಿ ಆನಂದ್ ಬೋಸ್ ಬಿಜೆಪಿ ಅಪರಾಧಿಗಳನ್ನು ರಾಜಭವನಕ್ಕೆ ಆಹ್ವಾನಿಸುತ್ತಿದ್ದಾರೆ ಮತ್ತು ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ಮಾಡಲು ಅವರಿಗೆ ಶಸ್ತ್ರಾಸ್ತ್ರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಬಂಗಾಳದ ರಾಜ್ಯಪಾಲರಿಗೆ ಬಿಜೆಪಿ ಅಪರಾಧಿಗಳನ್ನು ರಾಜಭವನಕ್ಕೆ ಆಹ್ವಾನಿಸುವುದನ್ನು ನಿಲ್ಲಿಸುವಂತೆ ಹೇಳಿ. ಅವರು ಅವರನ್ನು ಅಲ್ಲಿಯೇ ಇಟ್ಟುಕೊಂಡು ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ಮಾಡಲು ಶಸ್ತ್ರಾಸ್ತ್ರಗಳನ್ನು ನೀಡುತ್ತಿದ್ದಾರೆ. ಈ ರಾಜ್ಯಪಾಲರು ರಾಜಭವನದಲ್ಲಿ ಇರುವವರೆಗೆ, ಬಂಗಾಳಕ್ಕೆ ಏನೂ ಒಳ್ಳೆಯದಾಗುವುದಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com