ಡಿ. 6 ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಬಾಬ್ರಿ ಮಸೀದಿಗೆ ಶಿಲಾನ್ಯಾಸ: TMC ಶಾಸಕ ಹೇಳಿಕೆ

ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದಿತ ರಚನೆಯನ್ನು ಡಿಸೆಂಬರ್ 6, 1992 ರಂದು ಕರಸೇವಕರು ಕೆಡವಿದರು.
ಡಿ. 6 ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಬಾಬ್ರಿ ಮಸೀದಿಗೆ ಶಿಲಾನ್ಯಾಸ: TMC ಶಾಸಕ ಹೇಳಿಕೆ
Updated on

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಡಿಸೆಂಬರ್ 6 ರಂದು ಬಾಬರಿ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಹೇಳಿದ್ದು, ಅಯೋಧ್ಯೆಯಲ್ಲಿ ವಿವಾದಿತ ರಚನೆಯನ್ನು ಕೆಡವಿ 33 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ತಲೆಯೆತ್ತಲಿದೆ ಎಂದಿದ್ದಾರೆ.

ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಇದು ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕಾಗುತ್ತದೆ. ಆ ಕಾರ್ಯಕ್ರಮದಲ್ಲಿ ವಿವಿಧ ಮುಸ್ಲಿಂ ನಾಯಕರು ಭಾಗವಹಿಸಲಿದ್ದಾರೆ ಎಂದು ಕಬೀರ್ ಹೇಳಿದರು.

ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದಿತ ರಚನೆಯನ್ನು ಡಿಸೆಂಬರ್ 6, 1992 ರಂದು ಕರಸೇವಕರು ಕೆಡವಿದರು.

ಕಬೀರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯದರ್ಶಿ ಪ್ರಿಯಾಂಕಾ ತಿಬ್ರೆವಾಲ್, ಇದು ಓಲೈಕೆ ರಾಜಕೀಯವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದಾರೆ.

ಡಿ. 6 ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಬಾಬ್ರಿ ಮಸೀದಿಗೆ ಶಿಲಾನ್ಯಾಸ: TMC ಶಾಸಕ ಹೇಳಿಕೆ
ಬಾಬರಿ ಮಸೀದಿ ಧ್ವಂಸಕ್ಕೆ ಸೇಡು: ಡಿಸೆಂಬರ್ 6 ರಂದು ಸರಣಿ ಬಾಂಬ್ ಸ್ಫೋಟಕ್ಕೆ ಸಂಚು; 32 ಕಾರು ಸಜ್ಜುಗೊಳಿಸಿದ್ದ ಉಗ್ರರು!

ಟಿಎಂಸಿಯ ಜಾತ್ಯತೀತತೆಯು ಧರ್ಮಕ್ಕೆ ನಿರ್ದಿಷ್ಟವಾಗಿದೆ. ಅವರು ಬಾಬರಿ ಮಸೀದಿಯನ್ನು ಪುನಃ ಸ್ಥಾಪಿಸುತ್ತೇವೆ ಎಂದು ಹೇಳಿದಾಗ, ಅವರು ಆ ಬಾಬರಿ ಮಸೀದಿಗೆ ಯಾರನ್ನು ಕರೆಯುತ್ತಾರೆಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಗಡಿ ಪ್ರದೇಶಗಳಿಗೆ ಓಡಿಹೋಗುವ ಭಯದಲ್ಲಿರುವ ರೋಹಿಂಗ್ಯಾಗಳು ಎಸ್ ಐಆರ್ ಬಗ್ಗೆ ಭೀತಿಯನ್ನು ಹೊಂದಿದ್ದಾರೆ, ಬಾಬರ್ ಮೂಲತಃ ಎಲ್ಲಿಯವರು, ಇದು ತುಷ್ಟೀಕರಣ ರಾಜಕೀಯವಲ್ಲದೆ ಬೇರೇನೂ ಅಲ್ಲ ಎಂದು ಆರೋಪಿಸಿದರು.

ಬಿಜೆಪಿ ಹೇಳುವುದೇನು?

ಬಿಜೆಪಿ ನಾಯಕ ರಾಹುಲ್ ಸಿನ್ಹಾ, ರಾಜ್ಯದಲ್ಲಿ ಮಸೀದಿ ನಿರ್ಮಿಸುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ, ಆದರೆ ಇದು ಓಲೈಕೆ ರಾಜಕೀಯವಷ್ಟೆ ಎಂದು ಹೇಳಿದರು.

ಯಾರಾದರೂ ಮಸೀದಿ ನಿರ್ಮಿಸಬಹುದು, ಆದರೆ ಅದು ಸರಿಯಾದ ಸ್ಥಳದಲ್ಲಿರಬೇಕು. ಯಾರಾದರೂ ತಮ್ಮ ಧರ್ಮವನ್ನು ಅನುಸರಿಸುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಮಸೀದಿಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವವರು ಮುಸ್ಲಿಂ ಧರ್ಮವನ್ನು ಅವಮಾನಿಸುತ್ತಿದ್ದಾರೆ. ಧರ್ಮಕ್ಕಾಗಿ ಮಾತ್ರ ಮಸೀದಿಯನ್ನು ನಿರ್ಮಿಸುವುದು ಬೇರೆ ವಿಷಯ. ಎಲ್ಲಾ ಮುಸ್ಲಿಮರು, ಭಾರತೀಯ ಮುಸ್ಲಿಮರು ಒಟ್ಟಾಗಿ ಮಸೀದಿಯನ್ನು ನಿರ್ಮಿಸಿದರೆ, ನಮ್ಮದು ಯಾವ ಆಕ್ಷೇಪವೂ ಇಲ್ಲ ಎಂದರು.

ಉತ್ತರ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಕೂಡ ಕಬೀರ್ ಅವರನ್ನು ಟೀಕಿಸಿದರು. ನಾವು ತುಂಬಾ ಸ್ಪಷ್ಟವಾಗಿದ್ದೇವೆ. ನಾವು ಉದ್ಯೋಗ, ಶಿಕ್ಷಣ, ಆರೋಗ್ಯ, ಭದ್ರತೆ, ಮಹಿಳೆಯರು, ರೈತರು, ಕಾರ್ಮಿಕರು, ಸಮಾನತೆ ಮತ್ತು ಸೇರ್ಪಡೆಯ ಬಗ್ಗೆ ಮಾತನಾಡುತ್ತೇವೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಸಂವಿಧಾನದ ಬಗ್ಗೆ ಮಾತನಾಡುತ್ತದೆ, ಇವು ಚುನಾವಣೆಗಳಿಗೆ ಮಾನದಂಡಗಳಾಗಿರಬೇಕು ಎಂದರು.

ಹುಮಾಯೂನ್ ಕಬೀರ್ 2024 ರಲ್ಲಿ ರಾಜ್ಯದಲ್ಲಿ ಬಾಬರಿ ಮಸೀದಿಯಂತಹ ಮಸೀದಿಯನ್ನು ನಿರ್ಮಿಸುವ ಬಗ್ಗೆಯೂ ಮಾತನಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com