ಸಂಭಾಲ್ ಮಸೀದಿ ನೆಲಸಮಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಕಾರ

ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಮಸೀದಿ, ಮದುವೆ ಮಂಟಪ ಮತ್ತು ಆಸ್ಪತ್ರೆ ನೆಲಸಮ ಆದೇಶಕ್ಕೆ ತಡೆ ನೀಡುವಂತೆ ಕೋರಲಾಗಿತ್ತು.
Allahabad High Court
ಅಲಹಾಬಾದ್ ಹೈಕೋರ್ಟ್
Updated on

ಲಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮಸೀದಿ, ಮದುವೆ ಸಭಾಂಗಣವನ್ನು ಮತ್ತು ಆಸ್ಪತ್ರೆಯನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡುವುದಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ಶನಿವಾರ ನಿರಾಕರಿಸಿದ್ದು, ಮುಸ್ಲಿಂ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಮಸೀದಿ, ಮದುವೆ ಮಂಟಪ ಮತ್ತು ಆಸ್ಪತ್ರೆ ನೆಲಸಮ ಆದೇಶಕ್ಕೆ ತಡೆ ನೀಡುವಂತೆ ಕೋರಿ, ಮಸೀದಿ ಷರೀಫ್ ಗೌಸುಲ್ ವಾರಾ ರಾವಾ ಬುಜುರ್ಗ್ ಮತ್ತು ಮಸೀದಿಯ ಮುತವಲ್ಲಿ ಮಿಂಜಾರ್ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಜಿಲ್ಲಾಡಳಿತದ ಮೂಲಗಳ ಪ್ರಕಾರ, ಸಂಭಾಲ್ ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಅಸ್ಮೋಲಿ ಪ್ರದೇಶದ ರಾಯನ್ ಬುಜುರ್ಗ್ ಗ್ರಾಮದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ.

Allahabad High Court
ಸಂಭಾಲ್ ಶಾಹಿ ಜಾಮಾ ಮಸೀದಿ ಬಾವಿ ವಿವಾದ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ನೊಟೀಸ್

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿದ್ದು, ಮಸೀದಿ ಸಮಿತಿಗೆ ತಡೆಯಾಜ್ಞೆ ಅರ್ಜಿಯೊಂದಿಗೆ ವಿಚಾರಣಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವಂತೆ ನಿರ್ದೇಶಿಸಿತು.

ಅಕ್ಟೋಬರ್ 2 ರಂದು, ಡಿಎಂ-ಎಸ್ಪಿ ನೇತೃತ್ವದ ಜಿಲ್ಲಾಡಳಿತ ಅಧಿಕಾರಿಗಳ ತಂಡವು ಮಸೀದಿಯನ್ನು ಕೆಡವಲು ಬುಲ್ಡೋಜರ್‌ನೊಂದಿಗೆ ಆಗಮಿಸಿತು. ಆಡಳಿತವು ಗುರುವಾರ ಮಸೀದಿಯ ಪಕ್ಕದಲ್ಲಿ ನಿರ್ಮಿಸಲಾದ ಮದುವೆ ಮಂಟಪವನ್ನು ಕೆಡವಿತ್ತು.

ಬುಲ್ಡೋಜರ್ ಮಸೀದಿಯ ಕಡೆಗೆ ಧ್ವಂಸಕ್ಕಾಗಿ ಹೋಗುತ್ತಿದ್ದಾಗ, ಸ್ಥಳೀಯ ಜನರು ಮಸೀದಿಯನ್ನು ತಾವೇ ನಾಶಪಡಿಸುವ ಭರವಸೆಯೊಂದಿಗೆ 4 ದಿನಗಳ ಕಾಲಾವಕಾಶವನ್ನು ಜಿಲ್ಲಾಧಿಕಾರಿಗೆ ಕೋರಿದ್ದರು. ಜಿಲ್ಲಾಧಿಕಾರಿ ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದರು. ಇದಾದ ನಂತರ, ಅದೇ ದಿನ, ಅಂದರೆ ಗುರುವಾರ, ಸ್ಥಳೀಯ ಜನರು ಮಸೀದಿಯ ಹೊರ ಗೋಡೆಯನ್ನು ಒಡೆಯಲು ಪ್ರಾರಂಭಿಸಿದ್ದರು. ಶುಕ್ರವಾರ, ಪ್ರಾರ್ಥನೆಯ ನಂತರ, ಕೆಲವರು ಸ್ವಯಂಪ್ರೇರಣೆಯಿಂದ ಮಸೀದಿಯ ಗಡಿ ಗೋಡೆಯನ್ನು ಕೆಡವಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com