ಉತ್ತರ ಪ್ರದೇಶ: ಧ್ವನಿವರ್ಧಕದಲ್ಲಿ 'ಹನುಮಾನ್ ಚಾಲೀಸಾ' ಹಾಕಿದ್ದ ಅರ್ಚಕರಿಗೆ ಬೆದರಿಕೆ!

ಟೇಪ್ ರೆಕಾರ್ಡರ್‌ನಲ್ಲಿ ಭಕ್ತಿಗೀತೆಗಳನ್ನು ನುಡಿಸಿದಾಗ ಅಬ್ದುಲ್ ನಾಸಿರ್ ಮತ್ತು ಅವರ ಮಗ ಅಲ್ಲಿಗೆ ಬಂದು ಅವರನ್ನು ನಿಂದಿಸಲು ಪ್ರಾರಂಭಿಸಿದರು ಎಂದು ಅರ್ಚಕ ಸಂಜಯ್ ಪ್ರಜಾಪತಿ ಪೊಲೀಸರಿಗೆ ತಿಳಿಸಿದ್ದಾರೆ.
Hanuman Chalisa
ಹನುಮಾನ್ ಚಾಲೀಸಾonline desk
Updated on

ನವದೆಹಲಿ: ವಾರಣಾಸಿಯ ಮದನಪುರ ಪ್ರದೇಶದಲ್ಲಿ ಧ್ವನಿ ವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದ ದೇವಾಲಯದ ಅರ್ಚಕರಿಗೆ ಬೆದರಿಕೆ ಹಾಕಲಾಗಿದೆ. ಈ ಘಟನೆ ಸಂಬಂಧ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ಟೇಪ್ ರೆಕಾರ್ಡರ್‌ನಲ್ಲಿ ಭಕ್ತಿಗೀತೆಗಳನ್ನು ನುಡಿಸಿದಾಗ ಅಬ್ದುಲ್ ನಾಸಿರ್ ಮತ್ತು ಅವರ ಮಗ ಅಲ್ಲಿಗೆ ಬಂದು ಅವರನ್ನು ನಿಂದಿಸಲು ಪ್ರಾರಂಭಿಸಿದರು ಎಂದು ಅರ್ಚಕ ಸಂಜಯ್ ಪ್ರಜಾಪತಿ ಪೊಲೀಸರಿಗೆ ತಿಳಿಸಿದ್ದಾರೆ.

Hanuman Chalisa
ಸಂಭಾಲ್‌: ಅಜಾನ್ ವೇಳೆ ಜೋರಾಗಿ ಧ್ವನಿವರ್ಧಕ ಬಳಕೆ, ಇಮಾಮ್ ವಿರುದ್ಧ FIR

ಅವರು ಧ್ವನಿವರ್ಧಕವನ್ನು ಆಫ್ ಮಾಡಲು ಕೇಳಿದರು ಮತ್ತು ಭಕ್ತಿಗೀತೆಯನ್ನು ಮತ್ತೆ ನುಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಶೀಘ್ರದಲ್ಲೇ, ಡಜನ್ಗಟ್ಟಲೆ ಜನರು ಅರ್ಚಕರನ್ನು ಸುತ್ತುವರೆದು ಅವರಿಗೆ ಬೆದರಿಕೆ ಹಾಕಿದರು ಎಂದು ಪ್ರಜಾಪತಿ ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಕಾಶಿ ವಲಯದ ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸಾಲ್ ಅವರು ಪ್ರಕರಣ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com