Thar ವಾಹನ ಗುದ್ದಿಸಿ ರೈತನ ಕೊಂದ BJP ಮುಖಂಡ; ಹೆಣ್ಣುಮಕ್ಕಳ ಬಟ್ಟೆ ಹರಿದು ನೀಚ ಕೃತ್ಯ; 14 ಮಂದಿ ವಿರುದ್ಧ FIR!

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬಿಜೆಪಿ ಮುಖಂಡನೊಬ್ಬ ತನ್ನ ಥಾರ್ ಕಾರ್ ಗುದ್ದಿಸಿ ರೈತನೋರ್ವನನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
Thar ವಾಹನ ಗುದ್ದಿಸಿ ರೈತನ ಕೊಂದ BJP ಮುಖಂಡ; ಹೆಣ್ಣುಮಕ್ಕಳ ಬಟ್ಟೆ ಹರಿದು ನೀಚ ಕೃತ್ಯ; 14 ಮಂದಿ ವಿರುದ್ಧ FIR!
Updated on

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬಿಜೆಪಿ ಮುಖಂಡನೊಬ್ಬ ತನ್ನ ಥಾರ್ ಕಾರ್ ಗುದ್ದಿಸಿ ರೈತನೋರ್ವನನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಫತೇಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ರೈತ ರಾಮಸ್ವರೂಪ್ ಧಾಕಡ್ ತನ್ನ ಪತ್ನಿಯೊಂದಿಗೆ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಬಿಜೆಪಿ ನಾಯಕ ಮಹೇಂದ್ರ ನಗರ್ ಮತ್ತು ಅವನ ಸಹಚರರು ಅವರನ್ನು ಸುತ್ತುವರೆದು ದಾಳಿ ಮಾಡಿದರು. ಆ ನಂತರ ರೈತನ ಮೇಲೆ ಥಾರ್ ಕಾರು ಹರಿಸಿ ಕೊಂದಿದ್ದಾನೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಆರೋಪಿ ಮಹೇಂದ್ರ ನಗರ್ ಮೊದಲು ರಾಮ್‌ಸ್ವರೂಪ್ ಧಾಕಡ್ ಅವರನ್ನು ತೀವ್ರವಾಗಿ ಥಳಿಸಿ ನಂತರ ಗಾಯಗೊಂಡ ರೈತನ ಮೇಲೆ ತನ್ನ ಥಾರ್ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ರಾಮಸ್ವರೂಪ್ ಅವರನ್ನು ಥಳಿಸುತ್ತಿದ್ದಾಗ ರೈತನ ಹೆಣ್ಣುಮಕ್ಕಳು ತಮ್ಮ ತಂದೆಯನ್ನು ರಕ್ಷಿಸಲು ಬಂದಾಗ, ಅವರನ್ನೂ ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಆರೋಪಿ ಮಹೇಂದ್ರ ನಗರ್ ಹೆಣ್ಣುಮಕ್ಕಳ ಮೇಲೆ ದಾಳಿ ಮಾಡಿ ಅವರ ಬಟ್ಟೆ ಹರಿದು, ಗಾಳಿಯಲ್ಲಿ ಗುಂಡು ಹಾರಿಸಿ, ಭಯದ ವಾತಾವರಣ ನಿರ್ಮಿಸಿದ್ದಾನೆ.

ಆರೋಪಿಗಳು ಸುಮಾರು ಒಂದು ಗಂಟೆ ಕಾಲ ಹಲ್ಲೆ ನಡೆಸಿದರು ಎಂದು ಸಂತ್ರಸ್ತೆಯ ಸಹೋದರ ರಾಮ್‌ಕುಮಾರ್ ಹೇಳಿದ್ದಾರೆ. ಅವರು ಇಬ್ಬರೂ ಹುಡುಗಿಯರ ಬಟ್ಟೆಗಳನ್ನು ಹರಿದು ಹಾಕಿದ್ದರು. ಅಲ್ಲದೆ ಹಲವು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಇದು ನಮ್ಮನ್ನು ಭಯಭೀತಗೊಳಿಸಿತು. ಬಂದೂಕು ತೋರಿಸಿ ಬೆದರಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸುಮಾರು ಒಂದು ಗಂಟೆ ಆಸ್ಪತ್ರೆಗೆ ಕರೆದೊಯ್ಯಲು ಅವಕಾಶ ಸಿಗಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಂತಿಮವಾಗಿ ಧಕಾದ್ ನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು ಚಿಕಿತ್ಸೆಯ ವೇಳೆ ಅವರು ಸಾವನ್ನಪ್ಪಿದರು. ಸಾವಿನ ಸುದ್ದಿ ತಲುಪಿದ ನಂತರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿತ್ತು.

Thar ವಾಹನ ಗುದ್ದಿಸಿ ರೈತನ ಕೊಂದ BJP ಮುಖಂಡ; ಹೆಣ್ಣುಮಕ್ಕಳ ಬಟ್ಟೆ ಹರಿದು ನೀಚ ಕೃತ್ಯ; 14 ಮಂದಿ ವಿರುದ್ಧ FIR!
"ಅವರಿಗೆ ಪಾಠ", ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರ್ತಾರೆ: ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ಬಗ್ಗೆ ಮಧ್ಯಪ್ರದೇಶದ ಸಚಿವ ಶಾಕಿಂಗ್ ಹೇಳಿಕೆ!

ಆರೋಪಿ ಮಹೇಂದ್ರ ನಗರ್ ಮತ್ತು ಅವರ ಮೂವರು ಮಹಿಳಾ ಸಂಬಂಧಿಕರು ಸೇರಿದಂತೆ 14 ಜನರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮಹೇಂದ್ರ ನಗರ್ ಹೆಸರು ಗ್ರಾಮದಲ್ಲಿ ಭಯೋತ್ಪಾದನೆಯ ಸಂಕೇತವಾಗಿದೆ ಎಂದು ಮೃತನ ಕುಟುಂಬ ಆರೋಪ ಮಾಡಿದೆ. ಆತ ರಾಮಸ್ವರೂಪ್‌ನನ್ನು ಕೊಲೆ ಮಾಡಿ ತನ್ನ ಹೆಣ್ಣುಮಕ್ಕಳ ಬಟ್ಟೆಗಳನ್ನು ಹರಿದು ಭೂಮಿಯನ್ನು ಕಬಳಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಬಲಿಪಶುವಿನ ಕುಟುಂಬದವರ ಹೇಳಿಕೆಗಳನ್ನು ದಾಖಲಿಸಲಾಗಿದ್ದು ಆರೋಪಿಗಳನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಫತೇಘರ್ ಪೊಲೀಸ್ ಠಾಣೆಯ ಉಸ್ತುವಾರಿ ಜಯನಾರಾಯಣ್ ಶರ್ಮಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com