ಜಮ್ಮು ಹೆದ್ದಾರಿಯಲ್ಲಿ ಹಣ್ಣು ತುಂಬಿದ ಸಾವಿರಾರು ಟ್ರಕ್ ಸ್ಥಗಿತ: ಬೆಳೆಗಾರರಿಗೆ ಭಾರೀ ನಷ್ಟ

ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಹೆದ್ದಾರಿ, ಭಾರೀ ಮಳೆಯ ನಂತರ ಉಧಂಪುರದಲ್ಲಿರುವ ಜಖೈನಿ ಮತ್ತು ಚೆನಾನಿ ನಡುವೆ ಭೂಕುಸಿತದಿಂದ ಹಾನಿಗೊಳಗಾಗಿದೆ.
Jammu-Srinagar national highway. Image used for representational purpose only.
ಹೆದ್ದಾರಿಯಲ್ಲಿ ನಿಂತಿರುವ ಟ್ರಕ್ ಗಳು
Updated on

ಶ್ರೀನಗರ: ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಒಂದು ವಾರದಿಂದ ಮುಚ್ಚಿರುವುದರಿಂದ ಕಾಶ್ಮೀರದ ಹಣ್ಣು ಬೆಳೆಗಾರರು ಭಾರಿ ನಷ್ಟವನ್ನು ಎದುರಿಸುತ್ತಿದ್ದಾರೆ, ಕೋಟಿಗಟ್ಟಲೆ ಮೌಲ್ಯದ ಸೇಬು ಮತ್ತು ಪೇರಳೆ ಹಣ್ಣುಗಳನ್ನು ಸಾಗಿಸುತ್ತಿದ್ದ 1,000 ಕ್ಕೂ ಹೆಚ್ಚು ಹಣ್ಣು ತುಂಬಿದ ಟ್ರಕ್‌ಗಳು ಹೆದ್ದಾರಿ ಮಧ್ಯೆ ಸಿಲುಕಿ ಹಾಕಿಕೊಂಡಿವೆ.

ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಹೆದ್ದಾರಿ, ಭಾರೀ ಮಳೆಯ ನಂತರ ಉಧಂಪುರದಲ್ಲಿರುವ ಜಖೈನಿ ಮತ್ತು ಚೆನಾನಿ ನಡುವೆ ಭೂಕುಸಿತದಿಂದ ಹಾನಿಗೊಳಗಾಗಿದೆ.

ಮೊಘಲ್ ರಸ್ತೆ ತೆರೆದಿದ್ದರೂ, ಅಧಿಕಾರಿಗಳು ಭಾರೀ ವಾಹನಗಳಿಗೆ ಅಲ್ಲಿ ಸಂಚಾರ ನಡೆಸಲು ಬಿಡುತ್ತಿಲ್ಲ. ಸೇಬು ಮತ್ತು ಪೇರಳೆ ಕೊಯ್ಲು ಋತು ಈಗ ಆಗಿದ್ದರೂ ಪ್ರಾಕೃತಿಕ ವಿಕೋಪ ಬೆಳೆಗಾರರಿಗೆ ಭಾರೀ ನಷ್ಟವನ್ನುಂಟುಮಾಡಿದೆ. ಪ್ರತಿ ಟ್ರಕ್ 5 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಹಣ್ಣುಗಳನ್ನು ಸಾಗಿಸುತ್ತದೆ.

Jammu-Srinagar national highway. Image used for representational purpose only.
ಜಮ್ಮು: ಹಠಾತ್ ಪ್ರವಾಹದಿಂದ ತತ್ತರ; ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ - Photos

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com