ಕೇರಳ ಸರ್ಕಾರದಿಂದ ದೇಶದಲ್ಲೇ ಮೊದಲ ಹಿರಿಯ ನಾಗರಿಕರ ಆಯೋಗ ಸ್ಥಾಪನೆ

ಕೇರಳ ರಾಜ್ಯ ಹಿರಿಯ ನಾಗರಿಕರ ಆಯೋಗದ ಅಧ್ಯಕ್ಷರಾಗಿ ತಿರುವನಂತಪುರಂ ಮೂಲದ ಕೆ. ಸೋಮಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ
Kerala govt sets up first Senior Citizens Commission in India
ಸಾಂದರ್ಭಿಕ ಚಿತ್ರ
Updated on

ತಿರುವನಂತಪುರಂ: ಕೇರಳ ಸರ್ಕಾರವು ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು "ನಿರ್ಲಕ್ಷ್ಯ ಹಾಗೂ ನಿಂದನೆ"ಯಂತಹ ಸಮಸ್ಯೆಗಳನ್ನು ಪರಿಹರಿಸಲು ದೇಶದ ಮೊದಲ ಹಿರಿಯ ನಾಗರಿಕರ ಆಯೋಗವನ್ನು ಸ್ಥಾಪಿಸಿದೆ.

ಕೇರಳ ರಾಜ್ಯ ಹಿರಿಯ ನಾಗರಿಕರ ಆಯೋಗದ ಅಧ್ಯಕ್ಷರಾಗಿ ತಿರುವನಂತಪುರಂ ಮೂಲದ ಕೆ. ಸೋಮಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಆರ್. ಬಿಂದು ಅವರು ಬುಧವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಮರವಿಲಾ ರಾಮಕೃಷ್ಣನ್, ಇ.ಎಂ. ರಾಧಾ, ಕೆ.ಎನ್.ಕೆ. ನಂಬೂದಿರಿ ಮತ್ತು ಲೋಪ್ಸ್ ಮ್ಯಾಥ್ಯೂ ಅವರನ್ನು ಆಯೋಗದ ಸದಸ್ಯರಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Kerala govt sets up first Senior Citizens Commission in India
ಬೆಂಗಳೂರಿನಲ್ಲಿ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಅಗತ್ಯವಿದೆ: ಇಂಧನ ಸಚಿವ ಕೆಜೆ ಜಾರ್ಜ್

"ನಿರ್ಲಕ್ಷ್ಯ, ಶೋಷಣೆ ಮತ್ತು ಅನಾಥ ಭಾವನೆ ಸೇರಿದಂತೆ ವೃದ್ಧರು ಎದುರಿಸುತ್ತಿರುವ ಕಷ್ಟಗಳ" ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಈ ಆಯೋಗ ಪರಿಹರಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಕೇರಳ ರಾಜ್ಯ ಹಿರಿಯ ನಾಗರಿಕರ ಆಯೋಗವನ್ನು ಮಾರ್ಚ್‌ನಲ್ಲಿ ರಾಜ್ಯ ವಿಧಾನಸಭೆ ಅಂಗೀಕರಿಸಿದ ಕೇರಳ ಹಿರಿಯ ನಾಗರಿಕರ ಆಯೋಗ ಕಾಯ್ದೆ, 2025 ರ ಅಡಿಯಲ್ಲಿ ರಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com