ದೆಹಲಿ: 207 ಮೀ. ಉಕ್ಕಿದ ಯಮುನೆ, ದೆಹಲಿ ಸಚಿವಾಲಯಕ್ಕೆ ನುಗ್ಗಿದ ಪ್ರವಾಹ ನೀರು

ದೆಹಲಿ ಮುಖ್ಯಮಂತ್ರಿ, ಸಂಪುಟ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ ಬಳಿ ಪ್ರವಾಹ ನೀರು ತಲುಪಿದೆ.
A flooded residential area after the Yamuna river water enters the Jaitpur Yamuna Pushta locality during the monsoon season
ಯಮುನಾ ನದಿ ನೀರು ಜೈತ್‌ಪುರ ಯಮುನಾ ಪುಷ್ಟಾ ಪ್ರದೇಶವನ್ನು ಪ್ರವೇಶಿಸಿದ ನಂತರ ಜಲಾವೃತಗೊಂಡ ವಸತಿ ಪ್ರದೇಶ
Updated on

ನವದೆಹಲಿ: ದೆಹಲಿಯ ಹಳೆಯ ರೈಲ್ವೆ ಸೇತುವೆಯಲ್ಲಿ ಯಮುನಾ ನದಿಯ ನೀರಿನ ಮಟ್ಟ ಇಂದು ಬೆಳಗ್ಗೆ 7 ಗಂಟೆಗೆ 207.48 ಮೀಟರ್‌ನಷ್ಟಿತ್ತು, ಉಕ್ಕಿ ಹರಿಯುವ ನದಿಯಿಂದ ಬರುವ ಪ್ರವಾಹದ ನೀರು ಹತ್ತಿರದ ಪ್ರದೇಶಗಳನ್ನು ಮುಳುಗಿಸಿವೆ.

ಅಧಿಕೃತ ಮಾಹಿತಿಯ ಪ್ರಕಾರ, ಬೆಳಗ್ಗೆ 6 ರಿಂದ 7 ರವರೆಗೆ 207.48 ಮೀಟರ್‌ನಲ್ಲಿ ನೀರಿನ ಮಟ್ಟ ಸ್ಥಿರವಾಗಿತ್ತು. ಬೆಳಗ್ಗೆ 5 ಗಂಟೆಗೆ 207.47 ಮೀಟರ್‌ನಷ್ಟಿದ್ದರೂ, 6 ಗಂಟೆಗೆ 207.48 ಮೀಟರ್‌ನಷ್ಟಿತ್ತು. ಅಧಿಕಾರಿಗಳ ಪ್ರಕಾರ, ನಸುಕಿನ ಜಾವ 2 ಗಂಟೆಯಿಂದ 5 ರವರೆಗೆ ನೀರಿನ ಮಟ್ಟ 207.47 ಮೀಟರ್‌ನಲ್ಲಿ ಸ್ಥಿರವಾಗಿತ್ತು.

ದೆಹಲಿ ಮುಖ್ಯಮಂತ್ರಿ, ಸಂಪುಟ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ ಬಳಿ ಪ್ರವಾಹ ನೀರು ತಲುಪಿದೆ. ವಾಸುದೇವ್ ಘಾಟ್ ಸುತ್ತಮುತ್ತಲಿನ ಪ್ರದೇಶಗಳು ಸಹ ಜಲಾವೃತಗೊಂಡವು.

A flooded residential area after the Yamuna river water enters the Jaitpur Yamuna Pushta locality during the monsoon season
207 ಮೀಟರ್ ಎತ್ತರಕ್ಕೆ ಉಕ್ಕಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ

ಕಾಶ್ಮೀರಿ ಗೇಟ್ ಬಳಿಯ ಶ್ರೀ ಮಾರ್ಗಟ್ ವಾಲೆ ಹನುಮಾನ್ ಬಾಬಾ ಮಂದಿರಕ್ಕೂ ಪ್ರವಾಹ ನೀರು ತಲುಪಿತು. ನದಿಯ ಹರಿವು ಮತ್ತು ಸಂಭಾವ್ಯ ಪ್ರವಾಹ ಅಪಾಯಗಳನ್ನು ಪತ್ತೆಹಚ್ಚಲು ಹಳೆಯ ರೈಲ್ವೆ ಸೇತುವೆ ಪ್ರಮುಖ ವೀಕ್ಷಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಕಂದಾಯ ಇಲಾಖೆಯ ಪ್ರಕಾರ, 8,018 ಜನರನ್ನು ಡೇರೆಗಳಿಗೆ ಸ್ಥಳಾಂತರಿಸಲಾಗಿದ್ದು, 2,030 ಜನರನ್ನು 13 ಶಾಶ್ವತ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ 24/7 ನಿಗಾ ಇಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com