Constable Arti Pal and the police station in-charge Ashok Sharma, sub inspector Madanlal Ninama were in the car
ನದಿ ನೀರಿನಲ್ಲಿ ಕೊಚ್ಚಿ ಹೋದ ಪೊಲೀಸರು

ಮಧ್ಯ ಪ್ರದೇಶ: ಉಜ್ಜಯಿನಿಯಲ್ಲಿ ಸೇತುವೆಯಿಂದ ಕ್ಷಿಪ್ರಾ ನದಿಗೆ ಬಿದ್ದ ಕಾರು, ಮೂವರು ಪೊಲೀಸರು ನೀರುಪಾಲು

ಇಂದು ಭಾನುವಾರ ಬೆಳಗ್ಗೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಶೋಕ್ ಶರ್ಮಾ ಅವರ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ.
Published on

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ, ಸಬ್ ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಕಾನ್‌ಸ್ಟೆಬಲ್ ನ್ನು ಕರೆದೊಯ್ಯುತ್ತಿದ್ದ ಕಾರು ಸೇತುವೆಯಿಂದ ಕೆಳಗೆ ಬಿದ್ದು ಕ್ಷಿಪ್ರಾ ನದಿಯಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ.

ಇಂದು ಭಾನುವಾರ ಬೆಳಗ್ಗೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಶೋಕ್ ಶರ್ಮಾ ಅವರ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದ್ದು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಇಆರ್‌ಎಫ್ ತಂಡಗಳ ಶೋಧ ಕಾರ್ಯಾಚರಣೆ ಚುರುಕುಗೊಂಡಿದ್ದರೂ, ಇತರ ಇಬ್ಬರು ಪೊಲೀಸರು ಇನ್ನೂ ನದಿಯಲ್ಲಿ ನಾಪತ್ತೆಯಾಗಿದ್ದಾರೆ.

14 ವರ್ಷದ ಬಾಲಕಿಯ ನಾಪತ್ತೆ ಪ್ರಕರಣದ ತನಿಖೆಗಾಗಿ ಉಜ್ಜಯಿನಿ ಜಿಲ್ಲೆಯ ಉನ್ಹೇಲ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಮೂವರು ಪೊಲೀಸ್ ಸಿಬ್ಬಂದಿಗಳಾದ ಅಶೋಕ್ ಶರ್ಮಾ, ಸಬ್ ಇನ್ಸ್‌ಪೆಕ್ಟರ್ ಮದನ್‌ಲಾಲ್ ನಿನಾಮ ಮತ್ತು ಕಾನ್‌ಸ್ಟೆಬಲ್ ಆರತಿ ಪಾಲ್ ಉಜ್ಜಯಿನಿ ನಗರದಿಂದ ಚಿಂತಾಮನ್‌ಗೆ ತೆರಳುತ್ತಿದ್ದಾಗ ರಾತ್ರಿ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಮೂವರು ಪೊಲೀಸರು ಹತ್ತಿದ್ದ ಕಾರನ್ನು ಮಹಿಳಾ ಕಾನ್‌ಸ್ಟೆಬಲ್ ಆರ್ತಿ ಪಾಲ್ ಚಲಾಯಿಸುತ್ತಿದ್ದರು ಎನಿಸುತ್ತದೆ. ಇದ್ದಕ್ಕಿದ್ದಂತೆ ಸಮತೋಲನ ತಪ್ಪಿ, ಬಡಾ ಪುಲ್ ಸೇತುವೆಯಿಂದ ನದಿಗೆ ಬಿದ್ದಿದ್ದಾರೆ ಎಂದು ಉಜ್ಜಯಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.

ಅಪಘಾತದ ಬಗ್ಗೆ ತಿಳಿದ ಉಜ್ಜಯಿನಿ ಎಸ್ಪಿ ಪ್ರದೀಪ್ ಶರ್ಮಾ, ಪುರಸಭೆ ಆಯುಕ್ತ ಅಭಿಲಾಷ್ ಮಿಶ್ರಾ ಮತ್ತು ಹೆಚ್ಚುವರಿ ಪುರಸಭೆ ಆಯುಕ್ತ ಸಂತೋಷ್ ಟ್ಯಾಗೋರ್ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ರಾತ್ರಿ 8.30 ರ ಸುಮಾರಿಗೆ ಪ್ರಾರಂಭವಾಯಿತು.

Constable Arti Pal and the police station in-charge Ashok Sharma, sub inspector Madanlal Ninama were in the car
ಉಡುಪಿ: ದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು; ಮುಂದುವರಿದ ಶೋಧಕಾರ್ಯ

ಆರಂಭದಲ್ಲಿ ಬಿಳಿ ಬಣ್ಣದ ಕಾರನ್ನು ಯಾರು ಹತ್ತುತ್ತಿದ್ದಾರೆಂದು ಗೊತ್ತಾಗಲಿಲ್ಲ. ಉಜ್ಜಯಿನಿ ನಗರದಲ್ಲಿ ವಾಸಿಸುವ ಉನ್ಹೆಲ್ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿರುವ ಕುಟುಂಬವು ಪ್ರದೀಪ್ ಶರ್ಮಾ ಮತ್ತು ಇತರ ಇಬ್ಬರು ಪೊಲೀಸರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸುಮಾರು ಮೂರು ಗಂಟೆಗಳ ನಂತರ ಮಾಹಿತಿ ನೀಡಿತು. ನದಿಗೆ ಬಿದ್ದ ಕಾರನ್ನು ಮೂವರು ಪೊಲೀಸರು ಹತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು ಎಂದು ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ರಾತ್ರಿಯಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಲು ದೋಣಿಗಳು ಮತ್ತು ಡ್ರೋನ್ ಕ್ಯಾಮೆರಾಗಳನ್ನು ಬಳಸಿದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಇಆರ್‌ಎಫ್ ತಂಡಗಳು ಇಂದು ಮಧ್ಯರಾತ್ರಿ 1.30 ರ ಸುಮಾರಿಗೆ ಕಾರ್ಯಾಚರಣೆಯನ್ನು ನಿಲ್ಲಿಸಿ ಇಂದು ಬೆಳಗ್ಗೆ 7 ಗಂಟೆಗೆ ಪುನರಾರಂಭಿಸಿದವು.

ಅಪಘಾತ ನಡೆದ ಸ್ಥಳದಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ನದಿಯಿಂದ ಪೊಲೀಸ್ ಠಾಣೆಯ ಉಸ್ತುವಾರಿ ಅಶೋಕ್ ಶರ್ಮಾ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಸಬ್ ಇನ್ಸ್‌ಪೆಕ್ಟರ್ ಮದನ್‌ಲಾಲ್ ನಿನಾಮ ಅವರ ಮೃತದೇಹವೂ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪಘಾತ ನಡೆದ ಸ್ಥಳದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಸುಳಿಯಖೇಡಿ ಗ್ರಾಮದ ಬಳಿ ಪತ್ತೆಯಾಗಿದೆ ಎಂದು ದೃಢೀಕರಿಸದ ವರದಿಗಳು ಹೇಳುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com