ಉತ್ತರ ಪ್ರದೇಶ: ಲಾಠಿ ಚಾರ್ಜ್ ನಲ್ಲಿ ಬಿಜೆಪಿ ಕಾರ್ಯಕರ್ತನ ಸಾವು; ತನಿಖೆಗೆ ಎಸ್‌ಐಟಿ

ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಪಾರದರ್ಶಕ ತನಿಖೆ ಮತ್ತು ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಸಿಂಗ್ ಹೇಳಿದರು.
Yogi Adityanath
ಯೋಗಿ ಆದಿತ್ಯನಾಥ್ online desk
Updated on

ಲಖನೌ: ಈ ವಾರದ ಆರಂಭದಲ್ಲಿ ಘಾಜಿಪುರ ಜಿಲ್ಲೆಯಲ್ಲಿ ನಡೆದ ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡಿದ್ದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನ ಸಾವಿನ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ಭಾನುವಾರ ಎಸ್‌ಐಟಿ ರಚಿಸಿದೆ.

ಮೂವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ಕಾಶಿ ವಲಯ ಡಿಸಿಪಿ ಗೌರವ್ ಬನ್ಸ್ವಾಲ್ ನೇತೃತ್ವ ವಹಿಸಲಿದ್ದು, ಹೆಚ್ಚುವರಿ ಕಮಿಷನರ್ (ವಾರಣಾಸಿ) ಅಂಶುಮಾನ್ ಮಿಶ್ರಾ ಮತ್ತು ಸಹಾಯಕ ಕಮಿಷನರ್ (ವಾರಣಾಸಿ ಕಂಟೋನ್ಮೆಂಟ್) ನಿತಿನ್ ತನೇಜಾ ಸದಸ್ಯರಾಗಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಎಸ್ಐಟಿ ರಚನೆಗೂ ಮುನ್ನ, ಬಿಜೆಪಿಯ ಘಾಜಿಪುರ ಉಸ್ತುವಾರಿ ರಾಕೇಶ್ ತ್ರಿವೇದಿ, ಜಿಲ್ಲಾಧ್ಯಕ್ಷ ಓಂ ಪ್ರಕಾಶ್ ರೈ ಮತ್ತು ಮಾಜಿ ಜಿಲ್ಲಾ ಮುಖ್ಯಸ್ಥ ಭಾನುಪ್ರತಾಪ್ ಸಿಂಗ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು.

ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಪಾರದರ್ಶಕ ತನಿಖೆ ಮತ್ತು ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಸಿಂಗ್ ಹೇಳಿದರು.

Yogi Adityanath
ಲಖನೌ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವು, ಕೆಲವರಿಗೆ ಗಾಯ

ಸೆಪ್ಟೆಂಬರ್ 9 ರಂದು, ನೋನ್ಹರಾ ಪೊಲೀಸ್ ಠಾಣೆಯ ಹೊರಗೆ ಸುಮಾರು 20-25 ಜನರು ವಿದ್ಯುತ್ ಕಂಬ ಅಳವಡಿಸುವುದನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದಾಗ ಬಿಜೆಪಿ ಕಾರ್ಯಕರ್ತ ಸಿಯಾರಾಮ್ ಉಪಾಧ್ಯಾಯ (35) ಗಾಯಗೊಂಡರು. ಸೆಪ್ಟೆಂಬರ್ 11 ರಂದು ಚಿಕಿತ್ಸೆಯ ಸಮಯದಲ್ಲಿ ಉಪಾಧ್ಯಾಯ ನಿಧನರಾದರು. ಘಟನೆಯ ನಂತರ ಆರು ಪೊಲೀಸರನ್ನು ಅಮಾನತುಗೊಳಿಸಲಾಯಿತು ಮತ್ತು ಐವರನ್ನು ಘಾಜಿಪುರ ಎಸ್ಪಿ ಪೊಲೀಸ್ ಲೈನ್‌ಗೆ ಕಳುಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com