'ಒಂದು ರಾಷ್ಟ್ರ, ಒಂದು ತೆರಿಗೆ'ಯ ಕನಸು ನನಸಾಗಿದೆ: GST ಸುಧಾರಣೆ ಕುರಿತು ಪ್ರಧಾನಿ ಮೋದಿ

ದೇಶದಲ್ಲಿ ಡಜನ್ಗಟ್ಟಲೆ ವಿಭಿನ್ನ ತೆರಿಗೆಗಳಿದ್ದವು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಳ್ಳಲು ಲೆಕ್ಕವಿಲ್ಲದಷ್ಟು ಅಡೆತಡೆಗಳಿದ್ದವು.
Narendra Modi
ನರೇಂದ್ರ ಮೋದಿ
Updated on

ನವದೆಹಲಿ: ಜಿಎಸ್‌ಟಿ 'ಒಂದು ರಾಷ್ಟ್ರ, ಒಂದು ತೆರಿಗೆ'ಯ ಕನಸನ್ನು ನನಸಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ತೆರಿಗೆಗಳು ಮತ್ತು ಸುಂಕಗಳ ಜಟಿಲತೆಯು ವ್ಯವಹಾರಗಳು ಮತ್ತು ಗ್ರಾಹಕರಿಗೆ ಹೇಗೆ ತೊಂದರೆಗಳನ್ನುಂಟು ಮಾಡಿದೆ ಎಂಬುದನ್ನು ಮೋದಿ ವಿವರಿಸಿದರು.

ದೇಶದ ವ್ಯವಹಾರಗಳು ವಿವಿಧ ತೆರಿಗೆಗಳ ಜಾಲದಲ್ಲಿ ಸಿಲುಕಿಕೊಂಡಿತ್ತು. ದೇಶದಲ್ಲಿ ಡಜನ್ಗಟ್ಟಲೆ ವಿಭಿನ್ನ ತೆರಿಗೆಗಳಿದ್ದವು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಳ್ಳಲು ಲೆಕ್ಕವಿಲ್ಲದಷ್ಟು ಅಡೆತಡೆಗಳಿದ್ದವು. ವಿಭಿನ್ನ ತೆರಿಗೆ ನಿಯಮಗಳಿದ್ದವು ಅದೆಲ್ಲಾ ಇಂದು ಜಿಎಸ್ ಟಿ ಮೂಲಕ ನಿವಾರಣೆಯಾಗಿದೆ ಎಂದು ಮೋದಿ ಹೇಳಿದರು.

2014ರಲ್ಲಿ ದೇಶದ ಪ್ರಧಾನಿಯಾಗಿ ನಾನು ಜವಾಬ್ದಾರಿ ವಹಿಸಿಕೊಂಡಾಗ ವಿದೇಶಿ ಪತ್ರಿಕೆಯೊಂದು ಕಂಪನಿಯ ತೊಂದರೆಗಳ ಬಗ್ಗೆ ಉಲ್ಲೇಖಿಸಿತ್ತು. ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಸರಕುಗಳನ್ನು ಕಳುಹಿಸಲು ಕೇಳಿದ್ದರು. ಮೊದಲು ಬೆಂಗಳೂರಿನಿಂದ ಯುರೋಪಿಗೆ ಸರಕುಗಳನ್ನು ಕಳುಹಿಸಲು ಮತ್ತು ನಂತರ ಅದೇ ಸರಕುಗಳನ್ನು ಯುರೋಪಿನಿಂದ ಹೈದರಾಬಾದ್‌ಗೆ ಕಳುಹಿಸಲು ಅವರಿಗೆ ಹೇಳಲಾಯಿತು. ತೆರಿಗೆಗಳು ಮತ್ತು ಸುಂಕಗಳ ಸಂಕೀರ್ಣತೆಯಿಂದಾಗಿ ಆ ಸಮಯದಲ್ಲಿ ಪರಿಸ್ಥಿತಿ ಹೀಗಿತ್ತು.

ನಾನು ಪ್ರಧಾನಿಯಾದ ನಂತರ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಜಿಎಸ್‌ಟಿಯನ್ನು ಆದ್ಯತೆಯನ್ನಾಗಿ ಮಾಡಿದೆ ಎಂದು ಅವರು ಹೇಳಿದರು. ಪ್ರತಿಯೊಂದು ರಾಜ್ಯದ ಕಳವಳಗಳನ್ನು ಪರಿಹರಿಸಿದೆ. ಪ್ರತಿಯೊಂದು ಪ್ರಶ್ನೆಗೆ ಪರಿಹಾರಗಳನ್ನು ಕಂಡುಕೊಂಡುಕೊಳ್ಳಲಾಯಿತು. ಎಲ್ಲರನ್ನೂ ಮಂಡಳಿಯಲ್ಲಿ ತೆಗೆದುಕೊಂಡು ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಮಾಡಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳ ಪರಿಣಾಮವಾಗಿ ದೇಶವು ಡಜನ್ಗಟ್ಟಲೆ ತೆರಿಗೆ ಬಲೆಗಳಿಂದ ಮುಕ್ತವಾಯಿತು. ಒಂದು ರಾಷ್ಟ್ರ, ಒಂದು ತೆರಿಗೆಯ ಕನಸು ನನಸಾಯಿತು ಎಂದು ಮೋದಿ ಹೇಳಿದರು.

Narendra Modi
ನಾನು ಬ್ರಾಹ್ಮಣ, ಮೀಸಲಾತಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ದೇವರ ದಯದಿಂದ ನಮ್ಮ ಸಮುದಾಯಕ್ಕೆ ಬಂದಿಲ್ಲ: ನಿತಿನ್ ಗಡ್ಕರಿ

ಇದು ದಿನನಿತ್ಯದ ವಸ್ತುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಆರೋಗ್ಯ ಮತ್ತು ಜೀವ ವಿಮೆ, ಇತರ ಹಲವು ಸೇವೆಗಳೊಂದಿಗೆ ತೆರಿಗೆ ಮುಕ್ತವಾಗಿರುತ್ತದೆ ಅಥವಾ ಕೇವಲ ಶೇಕಡ 5ರಷ್ಟು ತೆರಿಗೆ ಮಾತ್ರ ಇರುತ್ತದೆ. ಶೇಕಡ 12ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಶೇಕಡ 99ರಷ್ಟು ವಸ್ತುಗಳಿಗೆ ಈಗ ಶೇಕಡ 5ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ಮೋದಿ ಹೇಳಿದರು.

12 ಲಕ್ಷ ರೂಪಾಯಿ ಆದಾಯ ತೆರಿಗೆ ವಿನಾಯಿತಿ ಉಡುಗೊರೆಯನ್ನು ನೀಡಲಾಯಿತು. ಈಗ ಬಡವರ ಸರದಿ. ಹೊಸ ಮಧ್ಯಮ ವರ್ಗವು ಈಗ ಡಬಲ್ ಬೊನಾಂಜಾವನ್ನು ಅನುಭವಿಸುತ್ತಿದೆ. ಕಡಿಮೆ ಜಿಎಸ್‌ಟಿ ದರವು ನಾಗರಿಕರು ತಮ್ಮ ಕನಸುಗಳನ್ನು ಈಡೇರಿಸಲು ಸುಲಭಗೊಳಿಸುತ್ತದೆ. ಅಮೆರಿಕದ ಕಾರ್ಮಿಕರನ್ನು ಬದಲಾಯಿಸದಂತೆ ರಕ್ಷಿಸುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com