

ಕೋಲ್ಕಾತ್ತಾ: ಹೌರಾ ಜಿಲ್ಲೆಯಲ್ಲಿ ಎರಡನೇ ಹಂತದ ಮತದಾನದ ಸಮಯದಲ್ಲಿ ಕೇಂದ್ರ ಪಡೆಗಳಿಂದ ಹಲ್ಲೆಗೊಳಗಾದ ವೃದ್ಧ ಮತದಾರರು ಸಾವನ್ನಪ್ಪಿದ್ದಾರೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.
X ನಲ್ಲಿ ಪೋಸ್ಟ್ ಮಾಡಿದ ಬ್ಯಾನರ್ಜಿ, ಉದಯನಾರಾಯಣಪುರದಲ್ಲಿ ವೃದ್ಧ ವ್ಯಕ್ತಿ ತನ್ನ ಮಗನೊಂದಿಗೆ ಮತ ಚಲಾಯಿಸಲು ಹೋಗಿದ್ದರು ಮತ್ತು ಮಗ ಮತಗಟ್ಟೆಗೆ ಪ್ರವೇಶಿಸಲು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾಗ ಕೇಂದ್ರ ಪಡೆಗಳು ಅವರನ್ನು ತಳ್ಳಿ ಹಲ್ಲೆ ಮಾಡಿದ ನಂತರ ಕುಸಿದುಬಿದ್ದರು ಎಂದು ಹೇಳಿದ್ದಾರೆ.
"ವೃದ್ಧನನ್ನು ಕುಸಿದು ಬಿದ್ದರು, ಅವರನ್ನು ಅಮ್ತಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಆ ವೃದ್ಧ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಬ್ಯಾನರ್ಜಿ ಬರೆದಿದ್ದಾರೆ.
ರಾಜ್ಯದಲ್ಲಿ ನಿಯೋಜಿಸಲಾದ ಕೇಂದ್ರ ಪಡೆಗಳು ಬಿಜೆಪಿಯ "ಖಾಸಗಿ ಸೈನ್ಯ" ದಂತೆ ವರ್ತಿಸುತ್ತಿವೆ ಮತ್ತು ಮತದಾರರನ್ನು ಭಯಭೀತಗೊಳಿಸುತ್ತಿವೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
ಡೈಮಂಡ್ ಹಾರ್ಬರ್ ಸಂಸದರು ಬೆಳಿಗ್ಗೆಯಿಂದ ಕೇಂದ್ರ ಪಡೆಗಳು "ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿವೆ. ವೃದ್ಧರ ಮೇಲೆ ಹಲ್ಲೆ ಮಾಡುತ್ತಿವೆ, ಮಕ್ಕಳ ಮೇಲೂ ದಾಳಿ ಮಾಡುತ್ತಿವೆ" ಎಂದು ಆರೋಪಿಸಿದ್ದಾರೆ ಮತ್ತು ಆಪಾದಿತ ಘಟನೆಗಳನ್ನು 2021 ರ "ಸಿತಾಲ್ಕುಚಿ ಮನಸ್ಥಿತಿ"ಗೆ ಅಭಿಷೇಕ್ ಬ್ಯಾನರ್ಜಿ ಹೋಲಿಸಿದ್ದಾರೆ.
2021 ರ ಸಿತಾಲ್ಕುಚಿ ಗುಂಡಿನ ದಾಳಿ ಘಟನೆಯನ್ನು ಉಲ್ಲೇಖಿಸುತ್ತಾ, ಬ್ಯಾನರ್ಜಿ ಬಿಜೆಪಿ ಆಗ ರಾಜಕೀಯ ಬೆಲೆಯನ್ನು ಪಾವತಿಸಿದೆ ಮತ್ತು "2026 ರಲ್ಲಿ ಇನ್ನೂ ಹೆಚ್ಚಿನ ಬೆಲೆಯನ್ನು ಪಾವತಿಸುತ್ತದೆ" ಎಂದು ಹೇಳಿದ್ದಾರೆ.
ಆಪಾದಿತ ಅತಿರೇಕಗಳಲ್ಲಿ ಭಾಗಿಯಾಗಿರುವವರನ್ನು "ಕಾನೂನಿನ ಸಂಪೂರ್ಣ ಬಲವನ್ನು ಎದುರಿಸುವಂತೆ ಮಾಡಲಾಗುತ್ತದೆ" ಎಂದು ಅವರು ಎಚ್ಚರಿಸಿದರು. ಆರೋಪಗಳ ಕುರಿತು ಬಿಜೆಪಿ, ಕೇಂದ್ರ ಪಡೆಗಳು ಅಥವಾ ಚುನಾವಣಾ ಆಯೋಗದಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Advertisement