

ಲಖನೌ: ಸ್ವಾತಂತ್ರ್ಯದಿನಾಚರಣೆ ಮುನ್ನದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶ ವಿಭಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವನ್ನು ದೂಷಿಸಿದರು. ಒಂದು ವೇಳೆ ನರೇಂದ್ರ ಮೋದಿ ಆಗ ಭಾರತದ ಪ್ರಧಾನಿಯಾಗಿದ್ದರೆ, ರಾಷ್ಟ್ರಕ್ಕೆ ಯಾವುದೇ ಹಾನಿಯಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ವ್ಯಕ್ತಿ ಆ ಸಮಯದಲ್ಲಿ ಪ್ರಧಾನಿಯಾಗಿದ್ದರೆ, ಭಾರತವನ್ನು ಯಾರೂ ವಿಘಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.
1947 ರ ವಿಭಜನೆಯ ಭಯಾನಕತೆಗೆ ಸಂಬಂಧಿಸಿದಂತೆ ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಆದಿತ್ಯನಾಥ್, "ವಿಭಜನೆ ಮತ್ತು ನಂತರದ ಹತ್ಯಾಕಾಂಡಕ್ಕೆ ಕಾಂಗ್ರೆಸ್ ನಿಜವಾಗಿಯೂ ಕಾರಣವಾಗಿದೆ" ಎಂದು ಆರೋಪಿಸಿದರು.
"ಸ್ವಾತಂತ್ರ್ಯದ ಸಮಯದಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿದ್ದರೆ, ಯಾರೂ ಭಾರತಕ್ಕೆ ಸ್ವಲ್ಪವೂ ಹಾನಿ ಮಾಡಲು ಸಾಧ್ಯವಾಗುತ್ತಿರಲಿಲ್ಲ" ಎಂದು ಅವರು ಹೇಳಿದರು.
"ಆ ಸಮಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ವ್ಯಕ್ತಿ ಪ್ರಧಾನಿಯಾಗಿದ್ದರೆ, ಯಾರೂ ಭಾರತವನ್ನು ವಿಘಟಿಸಲು ಸಾಧ್ಯವಾಗುತ್ತಿರಲಿಲ್ಲ ... ಈ ಕಾಂಗ್ರೆಸ್ ಸದಸ್ಯರ ಹೇಡಿತನಕ್ಕೆ ದೇಶ ಭಾರಿ ಬೆಲೆ ತೆರಬೇಕಾಯಿತು - ಸಿಎಎ ಪ್ರತಿಭಟನೆಯ ಸಮಯದಲ್ಲಿ ನೀವೆಲ್ಲರೂ ಕಂಡ ಪಾತ್ರ ಇದು" ಎಂದು ಅವರು ಹೇಳಿದರು.
1947 ರಲ್ಲಿ ಪಾಕಿಸ್ತಾನ ತಾನು ಎಂದಿಗೂ ಕೇಳದ ಭೂಮಿಯ ಪಾಲನ್ನು ಪಡೆದುಕೊಂಡಿತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಸಿಂಧ್ ಹಿಂದೂ ಪ್ರಾಬಲ್ಯ ಮತ್ತು ಸಿಂಧಿ ಪ್ರಾಬಲ್ಯದ ಪ್ರದೇಶವಾಗಿದ್ದು, ಅದನ್ನು ಬಲವಂತವಾಗಿ ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಯಿತು; ಅದೇ ರೀತಿ, ಪಂಜಾಬಿ ಪ್ರಾಬಲ್ಯದ ಪಂಜಾಬ್ ನ್ನು ಹಸ್ತಾಂತರಿಸಲಾಯಿತು ಎಂದು ಅವರು ಹೇಳಿಕೊಂಡರು.
"ಬಂಗಾಳ ಬಂಗಾಳಿ ಪ್ರಾಬಲ್ಯದ್ದಾಗಿತ್ತು. ಎಲ್ಲಾ ಹಿಂದೂ ಗ್ರಾಮಗಳನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ನೀಡಲಾಯಿತು. ಈ ನಾಚಿಕೆಗೇಡಿನ ಕೃತ್ಯವನ್ನು ಕಾಂಗ್ರೆಸ್ ಮಾಡಿದೆ, ಅದು ಅಧಿಕಾರಕ್ಕಾಗಿ ಹೆಚ್ಚು ಚಂಚಲವಾಗಿತ್ತು ಮತ್ತು ದೇಶ ಅವರ ಮೇಲೆ ನಂಬಿಕೆ ಇಟ್ಟಿತ್ತು. ಅದು ಆ ನಂಬಿಕೆಗೆ ದ್ರೋಹ ಬಗೆಯಿತು " ಎಂದು ಆದಿತ್ಯನಾಥ್ ಹೇಳಿದರು.