ಬಿಜೆಪಿ ತಂಡ ಪುನಾರಚನೆ: ಹಳೇ ಹುಲಿಗಳಿಗೆ ಮಣೆ; ಅಧಿಕಾರ ಇಲ್ಲದಿದ್ದರೂ ವರ್ಚಸ್ಸು ಕಡೆಗಣಿಸಲಾಗದು ಎಂಬುದಕ್ಕೆ ವಸುಂದರಾ ಸಾಕ್ಷಿ!

ತಳಮಟ್ಟದ ರಾಜಕೀಯದಲ್ಲಿ ಇನ್ನೂ ಪರಿಗಣಿಸಬೇಕಾದ ಶಕ್ತಿಯಾಗಿರುವ ಹಿರಿಯ ನಾಯಕರ ವಿಷಯಕ್ಕೆ ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂಬ ಸೂಚನೆ ನೀಡಲಾಗಿದೆ.
Vasundhara Raje
ವಸುಂದರಾ ರಾಜೇ
Updated on

ಜೈಪುರ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಭಾರಿ ಬದಲಾವಣೆ ನಡೆದಿದ್ದು, ಅನುಭವಿ ನಾಯಕರು ಹಾಗೂ ಪ್ರಮುಖ ರಾಜಕೀಯ ಮುಖಂಡರಿಗೆ ಜವಾಬ್ದಾರಿ ನೀಡುವುದರ ಮೂಲಕ ಹೊಸ ಕೇಂದ್ರ ತಂಡವನ್ನು ರಚಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಹೊಸ ಘಟಕದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಹಿರಿಯ ನಾಯಕ ರಾಮ್ ಮಾಧವ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದರೆ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಪಕ್ಷವು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ನು ಕರ್ನಾಟಕದ ಪ್ರೊ.ನಾಗರಾಜ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರೆ, ಬಿಎಲ್ ಸಂತೋಷ್ ಅವರನ್ನು ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ನಿತಿನ್ ನಬಿನ್ ಅವರ ಹೊಸ ತಂಡದಲ್ಲಿ ಸ್ಪಷ್ಟ ಸೂಚನೆ ಇದೆ. ತಳಮಟ್ಟದ ರಾಜಕೀಯದಲ್ಲಿ ಇನ್ನೂ ಪರಿಗಣಿಸಬೇಕಾದ ಶಕ್ತಿಯಾಗಿರುವ ಹಿರಿಯ ನಾಯಕರ ವಿಷಯಕ್ಕೆ ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂಬ ಸೂಚನೆ ನೀಡಲಾಗಿದೆ.

ರಾಷ್ಟ್ರೀಯ ಉಪಾಧ್ಯಕ್ಷೆ"ಯಾಗಿ ವಸುಂಧರಾ ರಾಜೇ ಅವರನ್ನು ಉಳಿಸಿಕೊಳ್ಳುವುದು, ರಾಜಸ್ಥಾನದಲ್ಲಿ ಸಕ್ರಿಯ ರಾಜಕೀಯದ ಹೊರಗಿದ್ದರೂ, ಅವರು ಇನ್ನೂ ಹೊಂದಿರುವ ವರ್ಚಸ್ಸು ಮತ್ತು ಜನಪ್ರಿಯ ನಾಯಕಿಯಾಗಿದ್ದಾರೆ. ಹೀಗಾಗಿ ಅವರಿಗೆ ಗೌರವಾನ್ವಿತ ಸ್ಥಾನಮಾನ ನೀಡುವುದು ಪಕ್ಷದ ಕರ್ತವ್ಯವಾಗಿದೆ.

Vasundhara Raje
ಬಿಜೆಪಿ-RSS ನಾಯಕರ ಸಭೆ: ಸಂಘಟನೆ ಪುನಾರಚನೆ ಬಗ್ಗೆ ಚರ್ಚೆ; ಶೀಘ್ರದಲ್ಲೇ ಹೊಸ ತಂಡ ಘೋಷಣೆ

ನೇಮಕಾತಿಯ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವಸುಂದರಾ ರಾಜೇ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸಂಘಟನೆ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ನಾನು ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.

2023 ರ ಚುನಾವಣೆಯಲ್ಲಿ, ಬಿಜೆಪಿ ರಾಜಸ್ಥಾನದಲ್ಲಿ 115 ಸ್ಥಾನಗಳನ್ನು ಗೆದ್ದುಕೊಂಡಿತು, 2003 ರಲ್ಲಿ ವಸುಂಧರಾ ರಾಜೇ ಚುನಾವಣಾ ಕಣಕ್ಕೆ ಇಳಿದು ಪಕ್ಷವನ್ನು ಮೊದಲ ಬಾರಿಗೆ ಮುನ್ನಡೆಸಿದಾಗ 120 ಸ್ಥಾನಗಳಲ್ಲಿ ಗೆಲುವು ಕಂಡಿದ್ದರು.

ಮೋದಿ ಅಲೆಯಿಂದಾಗಿ ರಾಜಸ್ಥಾನದಲ್ಲಿ ಪಕ್ಷದ ಮುಖವಾಗಿ ಅವರು ತಮ್ಮಅಧಿಕಾರಾವಧಿಯಲ್ಲಿ, ರಾಜೇ ನೇತೃತ್ವದಲ್ಲಿ ಬಿಜೆಪಿ 163 ಸ್ಥಾನಗಳನ್ನು ಗಳಿಸಿದರು. 2023 ರ ಚುನಾವಣೆಯ ನಂತರ, ಪಕ್ಷವು ರಾಜಸ್ಥಾನದಲ್ಲಿ ಸಂಪೂರ್ಣವಾಗಿ ಹೊಸ ನಾಯಕತ್ವದೊಂದಿಗೆ ಹೋಗಲು ನಿರ್ಧರಿಸಿತು. ರಾಜೇ ಪಕ್ಷಕ್ಕಾಗಿ ಪ್ರಚಾರ ಮಾಡಿದರು ಆದರೆ ರಾಜ್ಯದಾದ್ಯಂತ ಮಾಡಲಿಲ್ಲ. ಕೇವಲ ಅವರ ಪ್ರಚಾರವು 200 ಕ್ಷೇತ್ರಗಳ ಪೈಕಿ 54 ಚುನಾವಣಾ ರ್ಯಾಲಿಗಳಿಗೆ ಸೀಮಿತವಾಗಿತ್ತು.

2023 ರಲ್ಲಿ ಭಜನ್ ಲಾಲ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ಸಂದೇಶ ಸ್ಪಷ್ಟವಾಗಿತ್ತು, ಪಕ್ಷವು ರಾಜಸ್ಥಾನದಲ್ಲಿ ಹೊಸ ಮುಖಗಳನ್ನು ಬಯಸುತ್ತಿದೆ ಎಂಬುದು ತಿಳಿಯಿತು. 2024 ರ ಲೋಕಸಭಾ ಚುನಾವಣೆಗೆ, ರಾಜೆ ಅವರು ತಮ್ಮ ಮಗ ದುಷ್ಯಂತ್ ಸಿಂಗ್ ಅವರ ಝಲಾವರ್ ಬರಾನ್ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡಿದರು. ಆ ಚುನಾವಣೆಯಲ್ಲಿ, ಬಿಜೆಪಿ ರಾಜಸ್ಥಾನದಲ್ಲಿ 11 ಸ್ಥಾನಗಳನ್ನು ಕಳೆದುಕೊಂಡಿತು.

Vasundhara Raje
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನ್ಯೂ ಟೀಂ ಘೋಷಣೆ; ರಾಮ್ ಮಾಧವ್, ಸ್ಮೃತಿ ಜೊತೆ ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ!

ರಾಜಸ್ಥಾನದಲ್ಲಿ ಹೊಸ ಸರ್ಕಾರವನ್ನು ಮತದಾರರು ಸಂಪೂರ್ಣವಾಗಿ ಮೆಚ್ಚಿಕೊಂಡಿಲ್ಲ ಎಂದು ಫಲಿತಾಂಶಗಳು ಸ್ಪಷ್ಟಪಡಿಸಿವೆ.

ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಅರ್ಧಾವಧಿ ತಲುಪುತ್ತಿದ್ದಂತೆ, ರಾಜೇ ಅವರನ್ನು ಉಳಿಸಿಕೊಳ್ಳುವುದು ರಾಜಕೀಯವಾಗಿ ಅರ್ಥಪೂರ್ಣವಾಗಿದೆ ಎಂಬ ಸೂಚನೆ ಸ್ಪಷ್ಟವಾಗಿದೆ. 2028 ರಲ್ಲಿ, ಬಿಜೆಪಿ ಮುಂದಿನ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಮಹಿಳಾ ನಾಯಕಿಯರ ಮೇಲೆ ಗಮನ ಕೇಂದ್ರೀಕರಿಸಿದೆ. ಹೀಗಾಗಿ ರಾಜೇ ಅವರನ್ನು ಕರೆ ತಂದಿದೆ. ಅವರು ಮಹಿಳಾ ಮತದಾರರನ್ನು ಆಕರ್ಷಿಸುವುದಲ್ಲದೆ, ಸಾಮೂಹಿಕ ಆಕರ್ಷಣೆಯನ್ನು ಹೊಂದಿದ್ದಾರೆ,

ಅವರ ಜಾಟ್ ಮರಾಠಾ ರಜಪೂತ ಪರಂಪರೆ ಮತ್ತು ಗುಜ್ಜರ್‌ಗಳೊಂದಿಗಿನ ಅವರ ವೈವಾಹಿಕ ಸಂಬಂಧವಿದೆ. ಅವರ ಸೊಸೆ ನಿಹಾರಿಕಾ ರಾಜೇ ರಾಜಕೀಯವಾಗಿ ಪ್ರಬಲ ಸಮುದಾಯದಿಂದ ಬಂದವರು - ರಾಜಸ್ಥಾನದ ಜಾತಿ ಸಮೀಕರಣ ಉತ್ತಮವಾಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಬಿಜೆಪಿ ಮನಗಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com