ಮಹಾರಾಷ್ಟ್ರದಲ್ಲಿ 'Operation Tiger' ಭೀತಿ: DCM ಶಿಂಧೆ ಸಂಪರ್ಕದಲ್ಲಿ ಉದ್ಧವ್ ಬಣದ 7 ಸಂಸದರು, 16 ಶಾಸಕರು!

ಮಹಾರಾಷ್ಟ್ರ ರಾಜಕೀಯದಲ್ಲಿ 'Operation Tiger' ಬಗ್ಗೆ ಚರ್ಚೆಗಳು ನಿರಂತರವಾಗಿ ನಡೆಯುತ್ತಿವೆ. ಏತನ್ಮಧ್ಯೆ, ಶಿವಸೇನಾ (ಶಿಂಧೆ ಬಣ) ವಿಧಾನ ಪರಿಷತ್ ಸದಸ್ಯ ಕೃಪಾಲ್ ತುಮ್ನೆ ಅವರು ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿರುವ ಹೇಳಿಕೆ ನೀಡಿದ್ದಾರೆ.
Uddhav Thackeray, Eknath Shinde
ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ
Updated on

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ 'Operation Tiger' ಬಗ್ಗೆ ಚರ್ಚೆಗಳು ನಿರಂತರವಾಗಿ ನಡೆಯುತ್ತಿವೆ. ಏತನ್ಮಧ್ಯೆ, ಶಿವಸೇನಾ (ಶಿಂಧೆ ಬಣ) ವಿಧಾನ ಪರಿಷತ್ ಸದಸ್ಯ ಕೃಪಾಲ್ ತುಮ್ನೆ ಅವರು ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿರುವ ಹೇಳಿಕೆ ನೀಡಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT)ದ ಏಳು ಸಂಸದರು ಮತ್ತು 16 ಶಾಸಕರು ಏಕನಾಥ್ ಶಿಂಧೆ ಅವರೊಂದಿಗೆ ಸಂಪರ್ಕದಲ್ಲಿದ್ದು ಶೀಘ್ರದಲ್ಲೇ ಪ್ರಮುಖ ರಾಜಕೀಯ ಬೆಳವಣಿಗೆಯನ್ನು ನಿರೀಕ್ಷಿಸಬಹುದು ಎಂದು ತುಮ್ನೆ ಹೇಳಿದ್ದಾರೆ.

ಮಂಗಳವಾರ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಶಿವಸೇನಾ ಅಧ್ಯಕ್ಷ ಏಕನಾಥ್ ಶಿಂಧೆ ಮುಂಬೈನ ಮಂತ್ರಾಲಯಕ್ಕೆ ಆಗಮಿಸಿದರು. ಶಿವಸೇನಾ (ಯುಬಿಟಿ)ದ ಐದು ಶಾಸಕರು ಪ್ರತ್ಯೇಕ ಬಣವನ್ನು ರಚಿಸಿ ಶಿಂಧೆ ಬಣವನ್ನು ಸೇರಿದ್ದಾರೆ ಎಂಬ ಊಹಾಪೋಹದ ಬಗ್ಗೆ ಶಿಂಧೆ ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ. ಏತನ್ಮಧ್ಯೆ, ಕೃಪಾಲ್ ತುಮಾನೆ, ಶಿವಸೇನೆಯ ಒಂಬತ್ತು ಲೋಕಸಭಾ ಸಂಸದರಲ್ಲಿ ಏಳು ಮಂದಿ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು. ಕನಿಷ್ಠ ಏಳು ಸಂಸದರು ಮತ್ತು UBTಯ 16 ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

Uddhav Thackeray, Eknath Shinde
ಮಹಾರಾಷ್ಟ್ರ: ಉದ್ಧವ್ ಠಾಕ್ರೆ ಬಣಕ್ಕೆ ದೊಡ್ಡ ಹೊಡೆತ; ಶಿಂಧೆ ಬಣಕ್ಕೆ ಹಲವು ಹಿರಿಯ ನಾಯಕರು ಸೇರ್ಪಡೆ!

ಹೆಚ್ಚಿನ ಸಂಖ್ಯೆಯ ಸಂಸದರು ಮತ್ತು ಶಾಸಕರು ಶಿಂಧೆ ಬಣಕ್ಕೆ ಸೇರಿದರೆ, ಅದು ಶಿವಸೇನೆ (UBT) ಮಾತ್ರವಲ್ಲದೆ ಮಹಾರಾಷ್ಟ್ರದ ರಾಜಕೀಯ ಚಲನಶೀಲತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ರಾಜಕೀಯ ವಿಶ್ಲೇಷಕರು ನಂಬಿದ್ದಾರೆ. ಆದಾಗ್ಯೂ, ಶಿವಸೇನೆ (UBT) ನಾಯಕರು ಈ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ಆಪ್ತ ಮಿತ್ರ ರಾಜ್ಯಸಭಾ ಸಂಸದ ಸಂಜಯ್ ರಾವತ್, "ಆಪರೇಷನ್ ಟೈಗರ್" ಅನ್ನು ಕೇವಲ ವದಂತಿಗಳು ಎಂದು ತಳ್ಳಿಹಾಕಿದರು. ಶಿವಸೇನೆ (UBT) ಸಂಪೂರ್ಣವಾಗಿ ಒಗ್ಗಟ್ಟಿನಿಂದ ಮತ್ತು ಬಲಿಷ್ಠವಾಗಿದೆ ಎಂದು ಹೇಳಿದರು. ಪಕ್ಷದಲ್ಲಿ ವಿಭಜನೆಯಾಗುವ ಸಾಧ್ಯತೆ ಇಲ್ಲ ಮತ್ತು ಭಾನುವಾರ ಮಾತೋಶ್ರೀಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಸಂಸದರು ಭಾಗವಹಿಸಿದ್ದರು ಎಂದು ಹಿರಿಯ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಮಾತೋಶ್ರೀ ಸಭೆಯ ನಂತರ ಊಹಾಪೋಹಗಳು ಹೆಚ್ಚುತ್ತಿವೆ

ಭಾನುವಾರ ಬೆಳಿಗ್ಗೆ, ಉದ್ಧವ್ ಠಾಕ್ರೆ ತಮ್ಮ ನಿವಾಸವಾದ ಮಾತೋಶ್ರೀಯಲ್ಲಿ ಪಕ್ಷದ ಒಂಬತ್ತು ಲೋಕಸಭಾ ಸಂಸದರ ಸಭೆಯನ್ನು ಕರೆದರು. ಆದಾಗ್ಯೂ, ಹೆಚ್ಚಿನ ಸಂಸದರು ಗೈರುಹಾಜರಾಗಿದ್ದು ಕೆಲವೇ ನಾಯಕರು ಭಾಗವಹಿಸಿದ್ದರು. ಆದರೆ ಸಭೆಗೆ ಎಲ್ಲಾ ಸಂಸದರು ಹಾಜರಾಗಿದ್ದರು ಎಂದು ಪಕ್ಷವು ಸ್ಪಷ್ಟೀಕರಣವನ್ನು ನೀಡಿತು. ಕೆಲವರು ವೈಯಕ್ತಿಕವಾಗಿ ಹಾಜರಿದ್ದರು, ಇತರರು ಆನ್‌ಲೈನ್‌ನಲ್ಲಿ ಸೇರಿದರು. ಇದು ವಿಭಜನೆಯ ಬಗ್ಗೆ ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com