'ಇಂಡಿಗೋ ವಿಮಾನ ಒಳಗೆ ಕಿರುಕುಳ, ಟಿಎಂಸಿ ಚೋರ್, ಜೈಶ್ರೀರಾಮ್ ಘೋಷಣೆ, ಇದು ಬಿಜೆಪಿ ಸಂಸ್ಕೃತಿ': ಮಹುವಾ ಮೊಯಿತ್ರಾ ಆರೋಪ-Video

ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ದೆಹಲಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
Updated on

ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ದೆಹಲಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ವಿಮಾನ ಇಳಿದ ಬಳಿಕ ಕೆಲವು ಪುರುಷ ಪ್ರಯಾಣಿಕರು ತಮ್ಮ ಪಕ್ಷವನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗಿದ್ದು, ವಿಮಾನದೊಳಗೆ ತಮ್ಮ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ರಕ್ಷಣಾ ಸಂಸತ್ತಿನ ಸ್ಥಾಯಿ ಸಮಿತಿಯ ಸಭೆಗೆ ಹಾಜರಾಗಲು ಅಧಿಕೃತ ಕಾರ್ಯದ ನಿಮಿತ್ತ ನಿನ್ನೆ ಗುರುವಾರ ದೆಹಲಿಗೆ ಪ್ರಯಾಣಿಸುತ್ತಿದ್ದೆ. ಇಂಡಿಗೋ 6ಇ 719 ವಿಮಾನದಲ್ಲಿ 1 ಎಫ್ ಆಸನದಲ್ಲಿ ಕುಳಿತಿದ್ದಾಗ ಐದಾರು ಮಂದಿ ಗುಂಪಾಗಿ ವಿಮಾನಕ್ಕೆ ಏರಿ ನನ್ನತ್ತ ವಿಚಿತ್ರವಾಗಿ ನೋಡುತ್ತಾ ಹಿಂಭಾಗಕ್ಕೆ ಹೋದರು.

ವಿಮಾನ ಇಳಿದ ನಂತರ, ಬಾಗಿಲು ತೆರೆಯುವ ಮೊದಲು ಆ ಗುಂಪು ಘೋಷಣೆಗಳನ್ನು ಕೂಗಲು ಆರಂಭಿಸಿ, ವಿಮಾನದೊಳಗೆ ವಿಡಿಯೋ ಚಿತ್ರೀಕರಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಇದು ಜನರ ಆಕ್ರೋಶ ಅಲ್ಲ. ಇದು ಕಿರುಕುಳ ಮತ್ತು ವಿಮಾನದಲ್ಲಿರುವ ನನ್ನ ಸುರಕ್ಷತೆಯ ಉಲ್ಲಂಘನೆ ಎಂದು ಅವರು ಬರೆದಿದ್ದಾರೆ.

ಮೊಯಿತ್ರಾ ಹಂಚಿಕೊಂಡಿರುವ ವಿಡಿಯೋದಲ್ಲಿ ಕೆಲವರು “ಜೈ ಶ್ರೀರಾಮ್”, “ಚೋರ್ ಚೋರ್ ಟಿಎಂಸಿ ಚೋರ್”, “ಪಿಶಿ ಚೋರ್, ಭೈಪೋ ಚೋರ್” ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಬಂದಿದೆ. ಈ ಘೋಷಣೆಗಳು ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರನ್ನು ಉಲ್ಲೇಖಿಸುತ್ತಿವೆ ಎನ್ನಲಾಗಿದೆ. “ತೃಣಮೂಲೇರ್ ಶೋಬ್ ಚೋರ್” ಎಂಬ ಘೋಷಣೆಯೂ ಕೇಳಿಬಂದಿದ್ದು, ಇದರ ಅರ್ಥ “ತೃಣಮೂಲದ ಎಲ್ಲರೂ ಕಳ್ಳರು” ಎಂಬುದಾಗಿದೆ.

ಟಿಎಂಸಿ ಸಂಸದೆಯಾದ ಮೊಯಿತ್ರಾ ಅವರು ತಮ್ಮ ಪೋಸ್ಟ್‌ನಲ್ಲಿ ಇಂಡಿಗೋ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ಸೇರಿದಂತೆ ಇತರರನ್ನು ಟ್ಯಾಗ್ ಮಾಡಿ, ಘಟನೆಗೆ ಕಾರಣರಾದ ಪ್ರಯಾಣಿಕರನ್ನು ಗುರುತಿಸುವಂತೆ ಮನವಿ ಮಾಡಿದ್ದಾರೆ.

ವಿಮಾನದಲ್ಲೇ ಈ ರೀತಿ ಕಿರುಕುಳ ನೀಡಿದವರು ಸುಲಭವಾಗಿ ತಪ್ಪಿಸಿಕೊಳ್ಳಲು ಅವಕಾಶ ಕೊಡಬಾರದು. ಇಂಡಿಗೋ, ನಿಮ್ಮ ಸಿಬ್ಬಂದಿಯ ವರದಿ ಪರಿಶೀಲಿಸಿ, ಅವರ ಹೆಸರು ಬಹಿರಂಗಪಡಿಸಿ ಮತ್ತು ‘ನೋ-ಫ್ಲೈ’ ಪಟ್ಟಿಗೆ ಸೇರಿಸಿ ಎಂದು ಅವರು ಆಗ್ರಹಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಮೊಯಿತ್ರಾ, ಇದು ಬಿಜೆಪಿ ಸಂಸ್ಕೃತಿ. ಅಚ್ಚರಿಪಡಬೇಕಾಗಿಲ್ಲ. ನಾನು ಇದನ್ನು ಕಡೆಗಣಿಸಿ ವಿಮಾನ ನಿಲ್ದಾಣದಿಂದ ಸಭೆಗೆ ಹೋದೆ. ಬಳಿಕ ಸಂಘಪರರು ವೈರಲ್ ಮಾಡುತ್ತಿದ್ದ ವಿಡಿಯೋವನ್ನು ಜನರು ನನಗೆ ಕಳುಹಿಸಿದರು. ಆಗ ನಾನು ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದೆ. ಇಂಡಿಗೋ ನನಗೆ ಅಧಿಕೃತ ದೂರು ಬೇಕೆಂದು ಹೇಳಿದೆ. ಅದನ್ನು ನಾನು ಕಳುಹಿಸುತ್ತಿದ್ದೇನೆ ಎಂದು ಬರೆದಿದ್ದಾರೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ರಾಜಿನಾಮೆ ಕೊಡದ ದೀದಿಗೆ ಶಾಕ್; ವೀಟೋ ಅಧಿಕಾರ ಬಳಸಿ ಮಂತ್ರಿಮಂಡಲವನ್ನೇ ವಿಸರ್ಜಿಸಿದ ರಾಜ್ಯಪಾಲ ಆರ್‌.ಎನ್ ರವಿ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com