ಪಶ್ಚಿಮ ಬಂಗಾಳದಲ್ಲಿ SIRನಿಂದ ಹೊರಗಿಡಲಾದ ವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ: ಬಿಜೆಪಿ ಸರ್ಕಾರ

"ಮತದಾರರ ಪಟ್ಟಿಯಲ್ಲಿರುವ ಮಹಿಳೆಯರಿಗೆ ಮಾತ್ರ 3 ಸಾವಿರ ರೂ. ನೀಡಲಾಗುವುದು" ಎಂದು ಪಾಲ್ ಹೇಳಿರುವುದಾಗಿ IANS ಸಹ ವರದಿ ಮಾಡಿದೆ.
Representational image
ಮತದಾರರ ಪಟ್ಟಿ ಪರಿಷ್ಕರಣೆ(ಸಂಗ್ರಹ ಚಿತ್ರ) online desk
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಮಯದಲ್ಲಿ ಹೆಸರುಗಳನ್ನು ತೆಗೆದು ಹಾಕಿದ ಮಹಿಳೆಯರಿಗೆ ಬಿಜೆಪಿ ಸರ್ಕಾರ ಬಿಗ್ ಶಾಕ್ ನೀಡಿದ್ದು, ರಾಜ್ಯ ಸರ್ಕಾರದ ಅನ್ನಪೂರ್ಣ ಭಂಡಾರ್ ಯೋಜನೆಯ ಪ್ರಯೋಜನಗಳು ಅವರಿಗೆ ಸಿಗುವುದಿಲ್ಲ ಎಂದು ಸಚಿವ ಅಗ್ನಿಮಿತ್ರ ಪಾಲ್ ಅವರು ಸೋಮವಾರ ಹೇಳಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಈ ಯೋಜನೆಯಡಿಯಲ್ಲಿ, ಮಹಿಳೆಯರು ಮಾಸಿಕ 3,000 ರೂ. ನಗದು ಪಡೆಯುತ್ತಾರೆ. ಜೂನ್ 1 ರಿಂದ ತೃಣಮೂಲ ಕಾಂಗ್ರೆಸ್ ಸರ್ಕಾರದ ಲಕ್ಷ್ಮಿ ಭಂಡಾರ್ ಕಾರ್ಯಕ್ರಮದ ಬದಲಿಗೆ ಬಿಜೆಪಿ ಅನ್ನಪೂರ್ಣ ಭಂಡಾರ್ ಆರಂಭಿಸಿದೆ. ಲಕ್ಷ್ಮಿ ಭಂಡಾರ್ ಕಾರ್ಯಕ್ರಮದ ಫಲಾನುಭವಿಗಳಿಗೆ ತಿಂಗಳಿಗೆ 1,500 ರೂ.ಗಳನ್ನು ನೀಡಲಾಗುತ್ತಿತ್ತು.

"ಮತದಾರರ ಪಟ್ಟಿಯಲ್ಲಿರುವ ಮಹಿಳೆಯರಿಗೆ ಮಾತ್ರ 3 ಸಾವಿರ ರೂ. ನೀಡಲಾಗುವುದು" ಎಂದು ಪಾಲ್ ಹೇಳಿರುವುದಾಗಿ IANS ಸಹ ವರದಿ ಮಾಡಿದೆ.

Representational image
ಬಂಗಾಳ ಸಿಎಂ ಸುವೇಂದು ಪಿಎ ಕೊಲೆ ಪ್ರಕರಣ: UPI ಪಾವತಿಯಿಂದ ಮಹತ್ವದ ಸುಳಿವು; ಮೂವರ ಬಂಧನ

"ಇದಕ್ಕೂ ಮೊದಲು, ಒಂದು ವಿಶ್ಲೇಷಣೆ ಇರುತ್ತದೆ. SIR ಸಮಯದಲ್ಲಿ ತೆಗೆದುಹಾಕಲ್ಪಟ್ಟವರಿಗೆ ಅನ್ನಪೂರ್ಣ ಭಂಡಾರ್ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

"ಮೃತಪಟ್ಟವರು ಲಕ್ಷ್ಮಿ ಭಂಡಾರ್ ಅನ್ನು ಹೇಗೆ ಪಡೆಯುತ್ತಾರೆ? ಭಾರತೀಯ ನಾಗರಿಕರಲ್ಲದವರು, ಲಕ್ಷ್ಮಿ ಭಂಡಾರ್ ಅನ್ನು ಹೇಗೆ ಪಡೆಯುತ್ತಾರೆ? ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬುದರ ವಿಶ್ಲೇಷಣೆ ಇರುತ್ತದೆ" ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com