ಹಿನ್ನೋಟ 2016: ಸಂಸತ್ ಅಧಿವೇಶನಗಳು ವ್ಯರ್ಥವಾಗಲು ಕಾರಣವಾದ ಘಟನೆಗಳು
ಪಠಾಣ್ ಕೋಟ್ ದಾಳಿ: 2015 ರ ಡಿಸೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಅಚ್ಚರಿಯ ಭೇಟಿ ನೀಡಿ ಭಾರತಕ್ಕೆ ವಾಪಸ್ಸಾದ ಬೆನ್ನಲ್ಲೇ ಜ.2 ರಂದು ಪಾಕಿಸ್ತಾನದ ಭಯೋತ್ಪಾದಕರು ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದರು. ಸೇನಾ ಸಮವಸ್ತ್ರದಲ್ಲಿದ್ದ ಉಗ್ರರು ದಾಳಿ ನಡೆಸಿದ್ದ ಪ್ರ
ಜೆಎನ್ಯು ವಿವಾದ: ಉಗ್ರ ಅಫ್ಜಲ್ ಗುರು ಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ 2016 ರ ಫೆ.9 ರಂದು ಜವಾಹರ್ ಲಾಲ್ ವಿಶ್ವವಿದ್ಯಾನಿಲಯದಲ್ಲಿ, ದೇಶ ವಿರೋಧಿ ಘೋಷಣೆ ಕೂಗಿದ್ದ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗೆ ಗುರಿಯಾಗಿತ್ತು. ನಂತರದ ದಿನಗಳಲ್ಲಿ ಜೆಎನ್ ಯು ವಿವಿ ವಿದ್ಯಾರ್ಥಿ ಸಂಘದ ಮುಖ್
ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ: ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಯಾಗಿತ್ತು. ಅಂಬೇಡ್ಕರ್ ಸ್ಟುಡೆಂಟ್ ಅಸೋಸಿಯೇಷನ್ (ಎಎಸ್ಎ) ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದ ರೋಹಿತ್ ವೇಮುಲಾ ಅವರನ್ನು ಮುಝಫರ್
ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣ: ಮೃತ ದನದ ಚರ್ಮ ಸುಲಿದ ಆರೋಪದಡಿ ಗುಜರಾತ್ ನ ಊನಾದಲ್ಲಿ ದಲಿತರನ್ನು ಥಳಿಸಿದ ಘಟನೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಸಂಸತ್ ನಲ್ಲಿ ಭಾರಿ ಚರ್ಚೆ ನಡೆದು, ಸರ್ಕಾರದ ವಿರುದ್ಧ ಮುಗಿಬಿದ್ದಿದ್ದ ಪ್ರತಿಪಕ್ಷಗಳು ಕೇಂದ್ರ ಸರ್ಕಾರವ
ಬುರ್ಹಾನ್ ವನಿ ಹತ್ಯೆ, ಕಾಶ್ಮೀರದಲ್ಲಿ ಅಸ್ಥಿರ ಪರಿಸ್ಥಿತಿ: ಸಂಸತ್ ನ ಮುಂಗಾರು ಅಧಿವೇಶನ ವ್ಯರ್ಥವಾಗಲು ಮತ್ತೊಂದು ಕಾರಣವೆಂದರೆ ಅದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಬುರ್ಹಾನ್ ವಾನಿಯ ಹತ್ಯೆ ಹಾಗೂ ಅದರ ಪರಿಣಾಮವಾಗಿ ಕಾಶ್ಮೀರದಲ್ಲಿ ಪ್ರಾರಂಭವಾದ ಗಲಭೆ, ಅಸ್ಥಿರ ಪರಿಸ್ಥಿತಿ. ಬುರ್ಹಾನ್
ನೋಟು ನಿಷೇಧ: ಕೇಂದ್ರ ಸರ್ಕಾರ ಕಪ್ಪುಹಣ, ನಕಲಿ ನೋಟು ಭಯೋತ್ಪಾದಕ ಆರ್ಥಿಕತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನ.8 ರಂದು 500, 1000 ರೂ ಮುಖಬೆಲೆಯ ನೋಟುಗಳ ನಿಷೇಧದ ನಿರ್ಧಾರ ಘೋಷಿಸಿತ್ತು. ನೋಟು ನಿಷೇಧದಿಂದ ಉಂಟಾದ ನಗದು ಬಿಕ್ಕಟ್ಟು ಹಲವು ದಿನಗಳ ವರೆಗೆ ಮುಂದುವರೆದ ಹಿನ್ನೆಲೆಯಲ್ಲಿ ಕೇಂದ