ಹಾಗೇ ಬಿಟ್ರೆ ಗೋಡ್ಸೆಗೂ ಭಾರತ ರತ್ನ ಕೊಡ್ತಾರೆ : ಆಂಜನೇಯ ವ್ಯಂಗ್ಯ

ಬಿಜೆಪಿಯವರನ್ನು ಹೀಗೆಯೇ ಬಿಟ್ಟರೆ ವಾಜಪೇಯಿ ಅವರಿಗಲ್ಲ, ಗಾಂಧಿ ಕೊಂದ ಗೋಡ್ಸೆಗೂ ಭಾರತ ರತ್ನ ಕೊಡುತ್ತಾರೆ ಎಂದು...
ಎಚ್. ಆಂಜನೇಯ
ಎಚ್. ಆಂಜನೇಯ

ಕೊಪ್ಪಳ: ಬಿಜೆಪಿಯವರನ್ನು ಹೀಗೆಯೇ ಬಿಟ್ಟರೆ ವಾಜಪೇಯಿ ಅವರಿಗಲ್ಲ, ಗಾಂಧಿ ಕೊಂದ ಗೋಡ್ಸೆಗೂ ಭಾರತ ರತ್ನ ಕೊಡುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ  ಎಚ್. ಆಂಜನೇಯ ವ್ಯಂಗ್ಯವಾಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ರೀತಿ ಪ್ರತಿಕ್ರಿಯಿಸಿದರು. ಆದರೆ ಜತೆಗಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಮದನಮೋಹನ ಮಾಳವೀಯ ಅವರು  ಶಿಕ್ಷಣ ತಜ್ಞರು. ಈ ಇಬ್ಬರಿಗೆ ಭಾರತ ರತ್ನ ನೀಡಿರುವುದಕ್ಕೆ ನಮ್ಮದೇನೂ ತಕರಾರು ಇಲ್ಲ ಎಂದು ಪ್ರತಿಕ್ರಿಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com