ದೇವೇಗೌಡರ ಕುಟುಂಬ ನನಗೆ ಕಿರುಕುಳ ನೀಡುತ್ತಿದೆ: ಡಿಕೆಶಿ

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಸಚಿವ ಡಿ.ಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಸಚಿವ ಡಿ.ಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.

ದೇವೇಗೌಡರ ಕುಟುಂಬದ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ಅವರೇ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಡಿಕೆಶಿ ಆಪಾದಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಸಮರ ಸಾರಿರುವ ದೇವೇಗೌಡರ ಕುಟುಂಬ, ಎಸ್.ಆರ್.ಹಿರೇಮಠ್ ಹಾಗೂ ದೊರೆಸ್ವಾಮಿ ಮೂಲಕ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ.

ದೊರೆಸ್ವಾಮಿ ಅವರ ಪತ್ರಕ್ಕೆ ಮುಖ್ಯಮಂತ್ರಿ ಉತ್ತರ ನೀಡಲಿಲ್ಲ ಎಂದು ದೇವೇಗೌಡರೇ ವಕ್ತಾರರಂತೆ ಹೇಳುತ್ತಿದ್ದಾರೆ. ಅವರೇ ಸಿಬಿಐಯನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಎಸ್.ಆರ್.ಹಿರೇಮಠ್‌ರಿಂದ ಸಿಬಿಐಗೆ ಪತ್ರ ಬರೆಸಿದ್ದಾರೆ ಎಂದು ಅವರು ಆರೋಪಿಸಿದರು.

ಅಧಿವೇಶನದಲ್ಲಿ ನನ್ನ ನಡೆಯನ್ನು ಅಸಂಸದೀಯ ನಡೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ನಾನು ನಡೆದುಕೊಂಡ ರೀತಿ ಸರಿಯಾಗಿಯೇ ಇದೆ. ನಾನು ಒಕ್ಕಲಿಗ ನಾಯಕ ಮಾತ್ರನಲ್ಲ, ಕಾಂಗ್ರೆಸ್ ನನಗೆ ಮುಖ್ಯ. ಅವರಿಗೆ ಜೆಡಿಎಸ್ ಮುಖ್ಯ ಎಂದು ತಿಳಿಸಿದರು.

ಕನಕಪುರ, ಸಾತನೂರು, ರಾಮನಗರಕ್ಕೆ ಬಂದು ನನ್ನ ವಿರುದ್ಧ ಹೋರಾಟ ಮಾಡಿದ್ದರು. ಆದರೆ ನಾನು ಹೆದರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ನಾನು ನನ್ನ ಅಪ್ಪ-ಅಮ್ಮನಿಗೆ ಹುಟ್ಟಿಲ್ಲ ಎಂದು ಆರೋಪಿಸಿದ್ದಲ್ಲದೆ, ಎರಡು ಸಾವಿರ  ಮಂದಿ ಪೊಲೀಸರ ಮಧ್ಯೆ ಚರ್ಚೆ ನಡೆಸುವಂತಾಗಿತ್ತು ಎಂದು ಡಿಕೆಶಿ ವಿಷಾದ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com