ಜಿ. ಪರಮೇಶ್ವರ್‍ಗೆ ಕೀಲಿಕೈ ಹಸ್ತಾಂತರ

ಕೊನೆಗೂ ಜೆಡಿಎಸ್ ಕಚೇರಿಯ ಕೀಲಿ ಕೈ ಕಾಂಗ್ರೆಸ್‍ಗೆ ಹಸ್ತಾಂತರಗೊಂಡಿದೆ. ಸೋಮವಾರ ಬೆಳಗಿನ ಜಾವದ ವರೆಗೆ ಕಚೇರಿಯಲ್ಲಿದ್ದ...
ಕೀಲಿಕೈ ಹಸ್ತಾಂತರ
ಕೀಲಿಕೈ ಹಸ್ತಾಂತರ
Updated on

ಬೆಂಗಳೂರು: ಕೊನೆಗೂ ಜೆಡಿಎಸ್ ಕಚೇರಿಯ ಕೀಲಿ ಕೈ ಕಾಂಗ್ರೆಸ್‍ಗೆ ಹಸ್ತಾಂತರಗೊಂಡಿದೆ. ಸೋಮವಾರ ಬೆಳಗಿನ ಜಾವದ ವರೆಗೆ ಕಚೇರಿಯಲ್ಲಿದ್ದ ಸಾಮಾನು-ಸರಂಜಾಮು, ಕಡತ, ಪೀಠೋಪಕರಣ ಗಳನ್ನು ಖುದ್ದು ನಿಂತು ಸಾಗಿಸಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಕಚೇರಿಗೆ ಬೀಗ ಹಾಕಿ ಕೀಲಿಕೈಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಹಸ್ತಾಂತರಿಸುವಂತೆ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಜೆಡಿಎಸ್ ವಕ್ತಾರರಾದ ರಮೇಶ್ ಬಾಬು ಬೆಳಗ್ಗೆ 10 ಗಂಟೆ ಸುಮಾರಿಗೆ ಡಾ.ಜಿ.ಪರಮೇಶ್ವರ ಅವರ ನಿವಾಸಕ್ಕೆ ತೆರಳಿ ಕಟ್ಟಡದ ಕೀಲಿ ಕೈನ್ನುಹಸ್ತಾಂತರಿಸಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಗೆ ತೆರಳಿ ಕಾಂಗ್ರೆಸ್ ಧ್ವಜ ಹಾರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com