ಅರ್ಕಾವತಿ ಕಡತಗಳನ್ನೇ ಮುಟ್ಟಿಲ್ಲ: ಡಿ.ವಿ. ಸದಾನಂದಗೌಡ

ತಾವು ಮುಖ್ಯಮಂತ್ರಿಯಾ ಗಿದ್ದ ವೇಳೆ ಅರ್ಕಾವತಿ ಡಿನೋಟಿಪಿsಕೇಷನ್ ಕಡತಗಳನ್ನೇ ಮುಟ್ಟಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ...
ಡಿ.ವಿ. ಸದಾನಂದಗೌಡ
ಡಿ.ವಿ. ಸದಾನಂದಗೌಡ

ತುಮಕೂರು: ತಾವು ಮುಖ್ಯಮಂತ್ರಿಯಾ ಗಿದ್ದ ವೇಳೆ ಅರ್ಕಾವತಿ ಡಿನೋಟಿಪಿsಕೇಷನ್ ಕಡತಗಳನ್ನೇ ಮುಟ್ಟಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಸ್ಪಷ್ಟಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಅವಧಿಯಲ್ಲಿ ಯಾವುದೇ ಡಿನೋಟಿಪಿsಕೇಷನ್ ಮಾಡಿಲ್ಲ. ಕೇವಲ 22 ಗುಂಟೆ ಜಮೀನನ್ನು ಸಚಿವ ಸಂಪುಟದ ಅನುಮತಿ ಪಡೆದು ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಡಿನೋಟಿಫಿಕೇಷನ್, ಆಡಳಿತ ವೈಫಲ್ಯ ಸೇರಿದಂತೆ ಇತರೆ ವಿಷಯಗಳ ಕುರಿತು ಹಂತ-ಹಂತವಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ರಾಜ್ಯಪಾಲರು ಮುಂಬರುವ ಫೆ . 2 ಅಧಿವೇಶನದ ಹಿನ್ನೆಲೆಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಡಿನೋಟಿಫಿಕೇಷನ್ ಸಂಬಂಧ ಬಿಜೆಪಿ ಮುಖಂಡರ ಭೇಟಿಗೆ ಅನುಮತಿ ನೀಡಿರಲಿಲ್ಲ ಅಷ್ಟೆ. ಹಾಗಂತ ಡಿನೋಟಿಫಿಕೇಷನ್ ಸಂಬಂಧ ಹೋರಾಟ ಕೈ ಬಿಡುವ ಪ್ರಶ್ನೆಯೇ  ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಯಾವ ರೀತಿಯ ಹೋರಾಟ ಸಾಧ್ಯವೋ ಅದನ್ನು ಮಾಡಿಯೇ ತೀರುತ್ತೇವೆ ಎಂದು ಸದಾನಂದಗೌಡರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com