ಎಂಎಲ್‌ಸಿ ಟಿ.ಎ.ಶರವಣಗೆ ಡಿಮ್ಯಾಂಡ್ ಮಾಡಿದ್ದ ಅಶ್ವಿನ್ ರಾವ್

ಆಭರಣ ವ್ಯಾಪಾರಿಯಾಗಿರುವ ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್‌ರಾವ್ ಅವರ ಮಗ...
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
Updated on

ಬೆಂಗಳೂರು/ವಿಧಾನಪರಿಷತ್: ಆಭರಣ ವ್ಯಾಪಾರಿಯಾಗಿರುವ ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್‌ರಾವ್ ಅವರ ಮಗ ಅಶ್ವಿನ್ ರಾವ್ ಅವರು 25 ಲಕ್ಷ ಮೌಲ್ಯದ ವಜ್ರದಾಭರಣಕ್ಕೆ ಡಿಮ್ಯಾಂಡ್ ಮಾಡಿಗ ಸಂಗತ ಸದನದಲ್ಲಿ ಪ್ರಸ್ತಾಪಗೊಂಡಿತು.

ಲೋಕಾಯುಕ್ತ ಮೇಲೆನಿ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು, ಕೆಲವು ತಿಂಗಳ ಹಿಂದೆ(ಏಪ್ರಿಲ್ 18) ಶರವಣ ಅವರು ಕರೆ ಮಾಡಿ ಲೋಕಾಯುಕ್ತರ ಕಚೇರಿಯಿಂದ ಕರೆ ಬಂದಿದೆ. ಕುಮಾರ ಕೃಪಾ ಗೆಸ್ಟ್ ಹೌಸ್‌ಗೆ ಬರುವಂತೆ ಹೇಳುತ್ತಿದ್ದಾರೆ ಏನು ಮಾಡಲಿ ಎಂದು ಕೇಳಿದರು. ನಾನು ಅನುಮಾನ ವ್ಯಕ್ತಪಡಿಸಿ ಅಲ್ಲಿಗೆ ಹೋಗುವಂತೆ ತಿಳಿಸಿದೆ.

ಶರವಣ ಅವರು ಅಲ್ಲಿಗೆ ಹೋದಾಗ ಲೋಕಾಯುಕ್ತರ ಮಗ 25 ಲಕ್ಷ ರುಪಾಯಿ ಮೌಲ್ಯದ ವಜ್ರದಾಭರಣ ಮಾಡಿಸಿಕೊಡುವಂತೆ ಕೋರಿಕೆ ಇಟ್ಟಿದ್ದಾರೆ. ಏಕೆ ಮಾಡಿಕೊಡಬೇಕೆಂದು ಕೇಳಿದ್ದಾರೆ. ನಂತರ ಕರೆ ಮಾಡಿದರೂ ಶರವಣ ಹೋಗಲಿಲ್ಲ ಎಂದರು. ಈ ಪ್ರಕರಣದ ವಿಷಯ ಕೇಳಿ ಇಡೀ ಸದನ ಹೌಹಾರಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com