ಬಿಎಸ್‍ವೈ-ಎಚ್‍ಡಿಕೆ ಭಾಯಿ-ಭಾಯಿ: ಪರಮೇಶ್ವರ

ಜೆಡಿಎಸ್‍ನ ಕುಮಾರಸ್ವಾಮಿ ಹಾಗೂ ಬಿಜೆಪಿಯ ಯಡಿಯೂರಪ್ಪ ಬಿಬಿಎಂಪಿ ಚುನಾವಣೆಗಾಗಿ `ಭಾಯಿ-ಭಾಯಿ' ಆಗಿದ್ದು, ಜನರು ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಟೀಕಿಸಿದರು...
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್
Updated on

ಬೆಂಗಳೂರು: ಜೆಡಿಎಸ್‍ನ ಕುಮಾರಸ್ವಾಮಿ ಹಾಗೂ ಬಿಜೆಪಿಯ ಯಡಿಯೂರಪ್ಪ ಬಿಬಿಎಂಪಿ ಚುನಾವಣೆಗಾಗಿ `ಭಾಯಿ-ಭಾಯಿ' ಆಗಿದ್ದು, ಜನರು ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಟೀಕಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಕೇಂದ್ರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಎಚ್‍ಡಿಕೆ ಹಾಗೂ ಬಿಎಸ್‍ವೈ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಒಂದಾಗಿದ್ದಾರೆ. ಈ ಇಬ್ಬರು ನಾಯಕರು ಯಾವಾಗ `ಭಾಯಿ' ಆಗುತ್ತಾರೆ, ಯಾವ ಸಮಯದಲ್ಲಿ `ಬೈ' ಹೇಳುತ್ತಾರೆ ಎಂದು ತಿಳಿಯುವುದಿಲ್ಲ.

ಬಿಬಿಎಂಪಿಯಲ್ಲಿ ಬಿಜೆಪಿ 5 ವರ್ಷಗಳಲ್ಲಿ ಒಟ್ಟು ರು.45ಸಾವಿರ ಕೋಟಿ ಮೊತ್ತ ಬಜೆಟ್‍ಗಳನ್ನು ಮಂಡಿಸಿದ್ದು, ರು.18ಸಾವಿರ ಮಾತ್ರ ಯೋಜನೆಗಳಿಗಾಗಿ ಖರ್ಚು ಮಾಡಿದೆ. ಬಿಬಿಎಂಪಿಯಲ್ಲಿ ಇನ್ನೂ ರು.12ಸಾವಿರ ಕೋಟಿ ಸಾಲವಿದೆ. ಚುನಾವಣಾ ಪ್ರಚಾರದ ವೇಳೆ ಪ್ರತಿ ಮನೆಗೂ ಭೇಟಿ ನೀಡಿ ಈ ವಿಚಾರ ತಿಳಿಸಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com