ಲಾಟರಿ ಹಗರಣದಲ್ಲಿ ಭಾಗಿ ಆರೋಪ; ಶಾಸಕನಿಂದ ಆತ್ಮಹತ್ಯೆ ಯತ್ನ?

ಅಕ್ರಮ ಲಾಟರಿ ಹಗರಣದಲ್ಲಿ ಆರೋಪಿ ಪಾರಿರಾಜನ್ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿಧಾನ ಪರಿಷತ್‍ನ ಪಕ್ಷೇತರ ಸದಸ್ಯ...
ಆತ್ಮಹತ್ಯೆ ಯತ್ನ
ಆತ್ಮಹತ್ಯೆ ಯತ್ನ

ಬೆಂಗಳೂರು: ಅಕ್ರಮ ಲಾಟರಿ ಹಗರಣದಲ್ಲಿ ಆರೋಪಿ ಪಾರಿರಾಜನ್ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿಧಾನ ಪರಿಷತ್‍ನ ಪಕ್ಷೇತರ ಸದಸ್ಯ ಯು.ಡಿ. ಮಲ್ಲಿಕಾರ್ಜುನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿ ನಗರದಲ್ಲಿ ಮಂಗಳವಾರ ಹಬ್ಬಿತ್ತು.

ಈ ಬಗ್ಗೆ ಮಾತನಾಡಿರುವ ಅವರು ಇದೊಂದು ವದಂತಿ. ಅಂಥ ಕೃತ್ಯ ಮಾಡಿಕೊಳ್ಳುವ ಅಗತ್ಯ ತಮಗಿಲ್ಲ ಎಂದಿದ್ದಾರೆ. ``ಅಕ್ರಮ ಲಾಟರಿ ಹಗರಣದಲ್ಲಿ ನಾನು ಭಾಗಿಯಾಗಿಲ್ಲ. ಹಗರಣದ ಕಿಂಗ್‍ಪಿನ್ ಎಂದು ಹೇಳಲಾಗುತ್ತಿರುವ ಪಾರಿರಾಜನ್ ಜತೆಗೆ ಸಂಪರ್ಕ ಹೊಂದಿಲ್ಲ. ಒಂದು ವೇಳೆ ಆತನ ಜತೆಗೆ ಸಂಪರ್ಕ ಹೊಂದಿದ್ದರೆ ಯಾವುದೇ ರೀತಿಯ ಶಿಕ್ಷೆಗೆ ಒಳಗಾಗಲು ಸಿದ್ಧ. ಆರೋಪಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿಲ್ಲ. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿಲ್ಲ'' ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com